Home / ಲೇಖನ / ಇತರೆ / ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ವಚನ ವಿಚಾರ – ನನ್ನ ಗಂಡ ಮಿಕ್ಕವರಂತಲ್ಲ

ಅವರಾರ ಪರಿಯಲ್ಲ ಎಮ್ಮ ನಲ್ಲನು
ವಿಶ್ವವೆಲ್ಲ ಸತಿಯರು
ಸೋಜಿಗದ ಪುರುಷನು
ಅವರವರ ಪರಿಯಲ್ಲೆ ನೆರೆವನು
ಅವರಿಗವರಂತೆ ಸುಖಮಯನು ನೋಡಾ
ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ
ಕೆಳದಿ
ನೀನೊಳ್ಳಿದಳಾದಡೆ
ಮಹಾಮಂತ್ರವ ಜಪಿಸು
ನಿನ್ನನಗಲನು
ನಿನ್ನಾಣೆ
ಉರಿಲಿಂಗದೇವ
ತನ್ನಾಣೆ ಕೆಳದಿ

[ನೆರೆವನು-ಕೂಡುವನು, ನೀನೊಳ್ಳಿದಳಾದಡೆ-ನೀನು ಒಳ್ಳೆಯವಳಾಗಿದ್ದರೆ]

ಉರಿಲಿಂಗದೇವನ ವಚನ. ನನ್ನ ಗಂಡ ಮಿಕ್ಕವರ ಗಂಡನಂತೆ ಅಲ್ಲ. ಇಡೀ ವಿಶ್ವವೇ ಅವನ ಹೆಂಡಿರು. ಅವರವರಿಗೆ ಬೇಕಾದಂತೆ ಅವರವರೊಡನೆ ಇರುತ್ತಾನೆ. ಅವರವರಿಗೆ ತಕ್ಕಂತೆ ಸುಖ ಕೊಡುತ್ತಾನೆ. ಆದರೆ ವಿಚಿತ್ರವೆಂದರೆ ಅವನಿಗೆ ನನ್ನ ಮೇಲೆ ತುಂಬ ಪ್ರೀತಿ, ಮಿಕ್ಕವರನ್ನೆಲ್ಲ ವಂಚಿಸಿ ನನ್ನೊಡನೆ ಇದ್ದಾನೆ. ನನ್ನನ್ನು ಬಿಟ್ಟು ಅಗಲುವುದಿಲ್ಲ. ನೀನು ಒಳ್ಳೆಯವಳಾದರೆ ಮಹಾಮಂತ್ರವನ್ನು ಜಪಿಸು. ಅವನು ನಿನ್ನೊಡನೆಯೇ ಇರುವಂತಾಗುತ್ತದೆ, ನಿನ್ನನ್ನು ಬಿಟ್ಟು ಹೋಗದಂತಾಗುತ್ತದೆ.

ದೈವವು ಇಷ್ಟದೈವವಾಗುವ ಪರಿ ಈ ವಚನದಲ್ಲಿದೆ. ರಾಸಲೀಲೆಯಾಡುವಾಗ ಕೃಷ್ಣ ಎಲ್ಲ ಗೋಪಿಕೆಯರೊಡನೆಯೂ ಇರುತ್ತಿದ್ದನಂತಲ್ಲ, ಹಾಗೆಯೇ ಇದು. ಇಡೀ ವಿಶ್ವಕ್ಕೆ ದೈವವಾದವನು, ನನ್ನೊಬ್ಬಳ ಸ್ವಂತವಾಗುವ ವೈಚಿತ್ರ್ಯ ಅಚ್ಚರಿಗೆ ಕಾರಣವಾಗಿದೆ. ಇದು ಅವನನ್ನು ಪತಿಯಾಗಿ ಪಡೆಯಬಯಸುವ ಎಲ್ಲರಿಗೂ ಸಾಧ್ಯ ಅನ್ನುತ್ತದೆ ಉರಿಲಿಂಗದೇವನ ಈ ವಚನ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...