Home / ಕವನ / ಕವಿತೆ / ಉದಾರೀಕರಣ

ಉದಾರೀಕರಣ

ವಿದೇಶಿ ಬಂಡವಾಳಿಗರ
ಸೆಳೆಯಲು ಹೆಣೋರ್ವಳ
ಹೂನಗೆ ಹೊತ್ತ
ಸಂಸ್ಕೃತಿಯ ಮುಸುಕಿನಲಿ
ಮುಗುಳ್ನಗೆಯ ಸ್ವಾಗತ,
ವಿದೇಶಿ ಬಂಡವಾಳಕ್ಕೆ
ಇದೇ ಸುವರ್ಣಾವಕಾಶ.
ಬನ್ನಿ ಏಡ್ಸ್‌ನ ಭಯವಿಲ್ಲ
ಬಹಳ ಉದಾರಿಗಳು ನಾವು
ಮುಕ್ತ ಮಾರುಕಟ್ಟೆಯಲ್ಲಿ
ಪರಕೀಯರಿಗೆ ಮಾರಿಕೊಂಡ
ಕೇವಲ ಶೃಂಗಾರ ಸಾಧನಗಳು
ನಿಷ್ಕಪಟ ಮುಗ್ಧ ಹಸುಳೆಗಳು
ಮುಖವಿಲ್ಲದವರಿಗೆ ಉಣಬಡಿಸಲು
ಕಂದಮ್ಮಗಳ ಕನಸುಗಳನು
ನಿರ್ದಯವಾಗಿ ಹೊಸಕಿ
ಅಂಧಕಾರದ ಕೂಪಕ್ಕೆ
ಕರುಣೆಯಿಲ್ಲದೆ ನೂಕುವ-
ಅಂಗಾಂಗ ಕಸಿ ಮಾಡಿ
ಬಿಡಿಯಾಗಿ ಬೇಕಿದ್ದರೆ
ಇಡಿಯಾಗಿ ಕೊಡುತ್ತೇವೆ.
ಮಾನ ಅಡವಿಟ್ಟಾದರೂ
ಪ್ರನಾಳಕ್ಕೆ ಬಸಿರ ಹೊರಿಸಿ,
ಅತಂತ್ರ ಸಂಕೋಲೆಗಳಲ್ಲಿ
ಭ್ರೂಣಗಳ ಸಿಲುಕಿಸುತ್ತೇವೆ.
ಅಳಿದುಳಿದ ಕನಸುಗಳು
ಶಿಲುಬೆಗೇರಿಸುತ್ತಾ
ಹೊಸ ತಂತ್ರ ಮಂತ್ರಗಳು
ತಲೆಹಿಡುಕರ ಜಾಲಗಳು
ತಲೆಯೆತ್ತಿ ನಿಂತಿರುವ
ಹೊಸ ಅರ್ಥ ನೀತಿಗಳು,
ಉಳ್ಳವರ ತೆವಲುಗಳು,
ಕೊರಳಿಗೆ ಬಿದ್ದ ಉರುಳುಗಳು,
ಸಡಿಲಿಸಲು ಸಂಕೋಲೆ
ಹರಕೆಯ ಕುರಿಗಳು,
ಕೊಡವಿ ಎದ್ದರೆ ಪ್ರಜ್ಞೆ
ಇನ್ನೆಲ್ಲಿಯ ಬಲಿಗಳು ?
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...