Home / ಕವನ / ಕವಿತೆ / ಕಾಂಡ ಬೇರುಗಳ ಕಲರವ

ಕಾಂಡ ಬೇರುಗಳ ಕಲರವ

ನೆಲದಡಿಯಲಿ ಮಲಗಿದ ಪ್ರೀತಿ
ಆತ್ಮಗಳು ಉಸಿರಾಡುತ್ತವೆ, ಮಂಜು
ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ
ಎಲೆಯ ಮರೆಯ ನಿಧಾನದ ಗಾಳಿ
ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ
ಎಲ್ಲಾ ಮನಸ್ಸುಗಳ ಮೂಲೆಯಲಿ ಲೋಕದ
ಬೆಳಕು.

ಎರೆಮಣ್ಣಿನಲಿ ಮುಸುಕಿನ ಗುದ್ದಾಟ ಮತ್ತೆ
ಕುಸುಮ ಅರಳಿ ಆಕಾಶಕ್ಕೆ ಮೊಗ ಮಾಡಿದ
ನೆಲವ ಚುಂಬಿಸಿದ ಅಗಾಧ ಆಕಾಶ ಪ್ರೀತಿ
ಹನಿಹನಿಯಾಗಿ ಬೆವರು ಭೂಮಿಗಿಳಿದ
ಮೀರಿದ ಬೆಳಕು ಕಂಡ ಹಕ್ಕಿಗಳ ಕಲರವ
ಒಡಲ ತುಂಬ ಕಂಪಿಸಿ ಘಮ್ಮೆನ್ನುವ ಕಣ್ಣ
ಬೆಳಕು.

ಭೂಮಿಯ ಆವರ್ತದಲ್ಲಿ ಅಣು ಅಣುವಿನ
ಸೂರ್ಯನ ಚಲನೆ, ಎದೆಯೊಳಕೆ ಇಳಿದು
ಸಳಸಳ ಮಿಂಚಿ ಮಾಯವಾಗುವ ಮೀನುಗಳ ಕಡಲ
ನೆತ್ತಿ ತಣಿಸುವ ಸುತ್ತ ಮುತ್ತಲಿನ ಹಸಿರು ಕಾವ್ಯ
ಕಾಯುವುದು ಪ್ರೀತಿಯಲಿ ಕಡು ಕತ್ತಲೆ ಮಳೆ
ಕಾನನದ ಹಕ್ಕಿ ಉಲಿದ ಹಾಡುಗಳು ಅರಳಿಸಿದವು
ಕವಿಯ ಒಡಲು.

ಅದರಾಚೆಯ ಮುಗಿಲ ಮೌನದ ಮೋಡಗಳು
ಗುಡುಗಿ, ಸುರಿದ ದೈವ್ಯ ನೆನಹು ಎಲ್ಲರ
ಮನಸ್ಸಿನಾಳಕೆ ಇಳಿದು ಅಲ್ಲಮ ಜಂಗಮನಾದ
ಇಷ್ಟಗಳ ನೆಲದಲಿ ಎಂತಹ ಜೀವ ಪವಾಡ
ಚಿಗುರಿದ ಮರಗಳ ಹೂಗಳ ಕಂಪನ ಮತ್ತೆ
ತೊಯ್ದ ಮಾಡು, ತೊಳೆದ ದಾರಿ ಅಮ್ಮನ ಒಲುಮೆಯಲಿ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...