ಮುಕ್ತಿ ಮಂತ್ರ

ಗಟ್ಟಿಯಾಗದೇ ಬದುಕು ದಕ್ಕದುನ್ನು
ಕೆರೆ ಬಾವಿಗಳ ಪಾಲು ಆಗದಿರು
ಹಗ್ಗದ ಉರುಳಿಗೆ
ನಿನ್ನ ಕೊರಳ ನೀಡದೇ
ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ
ಬೆಂಕಿಯ ಜ್ವಾಲೆಗೆ ದೂಡುವ
ಕೈಗಳನ್ನು ಕತ್ತರಿಸಲು
ಝಳಪಿಸುವ ಖಡ್ಗವಾಗು.
ಶತ್ರುಗಳ ಸೆಣಸಿ ನಿಲ್ಲಲು
ಆತ್ಮವಿಶ್ವಾಸದ ಆಯುಧವಾಗು,
ಏನಾದರೂ ಆಗು ಕೊನೆಗೆ
ದಹಿಸುವ ಜ್ವಾಲೆಗಳ ನಂದಿಸಲು
ಸ್ವಾತಿಯ ಮುತ್ತಿನ ಮಳೆಯಾಗು,
ಅನಂತ ಜೀವನದ ವ್ಯಥೆಗಳು
ಅಮೂಲ್ಯ ಬದುಕು ಚಿವುಟಿ
ನಿರರ್ಥಕ ನಿಟ್ಟುಸಿರಾಗದೇ
ಸಮೃದ್ಧ ನೆಲದಲ್ಲಿ
ಹಸಿರುಟ್ಟು ಬೇರು ಬಿಟ್ಟು
ಅಸ್ತಿತ್ವಕ್ಕೆ ಅರ್ಥ ನೀಡುವ
ಕಂಪ ಸೂಸುವ
ಸಂಪಿಗೆ ಮರವಾಗು,
ಬಿದ್ದ ಮಳೆಗೆ ನೆಲದ ಹಸಿಗೆ
ಧರೆಯ ಎದೆಯಲಿ ರೋಮಾಂಚನ
ಎದೆಯಲಿ ಧವನ ಚಿಗಿತು
ಮೈಮನಗಳಲ್ಲಿ ಮಿಂಚಿನ ಸಂಚಾರ
ಹೊಳೆವ ಕಾಂತಿಯ ಕಣ್ಣುಗಳಲಿ
ಆತ್ಮವಿಶ್ವಾಸದ ದೃಢ ನಿರ್ಧಾರ
ಉಕ್ಕಿ ಹರಿದಿದೆ ಜೀವಜಲ.
ಧಮನಿಗಳಲಿ ನಿರಂತರ
ಬಿಗಿದಿರುವ ನರನಾಡಿಗಳಿಗೆ
ಸ್ನೇಹದ ತಂಪು ಸಿಂಚನ
ಬದುಕಿನ ಹುಡುಕಾಟ,
ಅದೇ ಕ್ಷಣ ಮತ್ತೇ ಮತ್ತೇ
ಬದುಕು ಒಳಹೊರಗು ಹುಡುಕುತ್ತ
ಗಡಿರೇಖೆಗಳ ಮೆಟ್ಟಿ ನಿಂತು
ಬದುಕುವ ಬದುಕಿಸುವ ಪ್ರಯತ್ನ
ಆಗಲಿ ಇದುವೇ ಮುಕ್ತಿ ಮಂತ್ರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವಪೂರ್ಣ ಶ್ರದ್ಧಾಂಜಲಿ
Next post ನೇಗಿಲು

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…