Home / ಬಾಲ ಚಿಲುಮೆ / ಕಥೆ / ಕಹಿಸಿಹಿ ಕತೆ

ಕಹಿಸಿಹಿ ಕತೆ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ಆರಂಭದಲ್ಲೇ ಉತ್ತರ ಭಾರತದ ಕಳಿಂಗ ದೇಶದವರೆಗೂ ಸಿದ್ಧಿ ಪ್ರಸಿದ್ಧಿ ಹೊಂದಿತ್ತು!

ವಿಜಯನಗರ ಸಾಮ್ರಾಜ್ಯವನ್ನು ತೌಳವ ನರಸನಾಯಕ ಅಳುತ್ತಿದ್ದ. “ಅಧಾರ್ಮಿಕರಾದ ಮಹಾರಾಜರು ಎಂದೂ ಶ್ರೇಯಸ್ಸು ಹೊಂದಲಾರರು” ಎಂಬ ಒಂದೇ ಒಂದು ಮೂಲ ಮಂತ್ರದಿಂದ ಇಡೀ ಭರತ ಖಂಡದೆಲ್ಲಲ್ಲ ವಿಜಯನಗರ ಸಾಮ್ರಾಜ್ಯ ಪ್ರಭುದ್ಧ ಮಾನಕ್ಕೆ ಬಂತು.

ಇತ್ತ- ಕಳಿಂಗ ದೇಶದ ಬಸವಭಟ್ಟನೆಂಬ ಉದ್ದಾಮ ಪಂಡಿತರತ್ನ ಆಸ್ಥಾನದ ಪಂಡಿತ ಪಾಮರ ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಬರೀ ವಾದವಿವಾದ ಮಾಡುತ್ತಾ ಪಾಂಡಿತ್ಯತನ ಪ್ರದರ್ಶಿಸುತ್ತಾ ಎಲ್ಲ ರಾಜ್ಯಗಳನ್ನು ಗೆಲ್ಲುತ್ತಾ ಮೀಸೆ ತಿರುವುತ್ತಾ ಹೊಗಳು ಭಟ್ಟರನ್ನು ಹಿಂದಿಟ್ಟುಕೊಂಡು ವಿಜಯನಗರ ಸಾಮ್ರಾಜ್ಯಕ್ಕೆ ಒಂದು ದಿನ ಎಡಗಾಲಿಟ್ಟು ವಾದ್ಯ ಮೇಳ, ಶಂಕು, ಜಾಗಟೆ, ತುತ್ತೂರಿ ಮೇಲು ಪಂಚಾಂಗವನ್ನು ಓದುತ್ತಾ ಮೆರವಣಿಗೆಯಲ್ಲಿ ಜಯಘೋಷ ಮೊಳಗಿಸುತ್ತಾ ಬಸವಭಟ್ಟ ವಿಜಯನಗರ ಸಾಮ್ರಾಜ್ಯವನ್ನು ಪ್ರವೇಶಿಸಿದ.

ಇಡೀ ವಿಜಯನಗರ ಸಾಮ್ರಾಜ್ಯ ಅಲ್ಲಾಡಿ ಸದ್ದಡಗಿತು! ಉತ್ತರದಿಂದ ದಕ್ಷಿಣದವರೆಗೆ ಬಸವ ಭಟ್ಟನನ್ನು ಗೆದ್ದ ರಾಜ ಮಹಾರಾಜರಿಲ್ಲ! ಹೋಗಲಿ ಉದ್ದಾಮ ಪಂಡಿತ ಪಾಮರರಿಲ್ಲ. ಶರಣಾಗತಿಯೊಂದೇ ಈಗಿರುವ ಮಾರ್ಗವೆಂದು ರಾಜಾಧಿರಾಜ ತೌಳವ ನರಸನಾಯಕ ತಲೆಗೆ ಕೈಹೊತ್ತು ಕುಳಿತೇ ಬಿಟ್ಟ!

ಒಂದು ದಿನ- ಬಸವಭಟ್ಟರಿಗೂ ವ್ಯಾಸರಾಜರಿಗೂ ವಾದ ವಿವಾದ ಶುರುವಾಯಿತು. ಎರಡು ಹಗಲು ಮೂರು ರಾತ್ರಿ ತರ್ಕಬದ್ಧ ವಾದ ಸರಣಿಯು ಸಾಗಿತು! ವೇದವೇದಾಂತ ತರಂಗಗಳಲ್ಲಿ ಪರಿಪೂರ್ಣರಾಗಿದ್ದ ವ್ಯಾಸರಾಜರು ತಮ್ಮ ತತ್ವಸಿದ್ಧಾಂತ ಪ್ರಮಾಣ ಬದ್ಧವಾದ ವಾದವಿವಾದಗಳಲ್ಲಿ ಸಂಪೂರ್ಣವಾಗಿ ಗೆದ್ದರು! ಬಸವಭಟ್ಟರು ಸೋತು ಶರಣಾದರು.

ಅದಕ್ಕೆ ಪ್ರತಿಯಾಗಿ ತೌಳವ ನರಸನಾಯಕ ಬಸವಭಟ್ಟರನ್ನು ಅವರಿಂದೆ ಬಂದಿದ್ದ ಹೊಗಳುಭಟ್ಟರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಕಣ್ಣೀರಿಟ್ಟು- ‘ಅಯ್ಯೋ ನಮ್ಮನ್ನು ಮನ್ನಿಸಿ, ನಮ್ಮ ಕಳಿಂಗ ದೇಶದ ರಾಜನಿಂದ ಪ್ರೇರೇಪಿತನಾಗಿ ನಮ್ಮ ಶಿಷ್ಯರೊಡಗೂಡಿ ನಿಮ್ಮನ್ನು ನಿಮ್ಮ ಸಾಮ್ರಾಜ್ಯವನ್ನು ಅವಮಾನಿಸಿ ಹೀಯಾಳಿಸಬೇಕೆಂದು ದುಷ್ಟಾಲೋಚನೆ ಇಟ್ಟುಗೊಂಡು ಬಂದವನನ್ನು ಸನ್ಮಾನಿಸಿದ್ದು ಕಣ್ಣು ತೆರೆಸಿದೆ. ನಮ್ಮನ್ನೆಲ್ಲ ಮನ್ನಿಸಿ’ ಎಂದು ಶ್ರೀಪಂಚಿಯ ಲಿಂಗವನ್ನು ಪ್ರೀತಿಪೂರ್ವಕವಾಗಿ ಬಸವಭಟ್ಟ ನೀಡಿದ.

ಅದಕ್ಕೆ ನರಸನಾಯಕ ‘ವಿಜಯನಗರ ಸಾಮ್ರಾಜ್ಯದಲ್ಲಾದ ಕಹಿಯನ್ನು ಇಲ್ಲೇ ಬಿಟ್ಟು ಸನ್ಮಾನವೆಂಬ ಸಿಹಿಯೊಂದಿಗೆ ಕಳಿಂಗ ದೇಶವನ್ನು ತಲುಪಿ’ ಎಂದು ಎಲ್ಲರೆದುರಿಗೆ ಬೆನ್ನುತಟ್ಟಿ ಕಳಿಸಿಕೊಟ್ಟ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...