Home / ಕವನ / ಕವಿತೆ / ಅಪ್ಪ ಸತ್ತಾಗ!

ಅಪ್ಪ ಸತ್ತಾಗ!

ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು|
ಗೋಲಿ ಆಡುವ ವಯಸ್ಸು
ಸದಾ ಟಿ.ವಿ ನೋಡುವ ಮನಸು||

ಏನೋ ಪೋನ್ ಬಂತು
ಎಲ್ಲ ಗುಸುಗುಸು ಮಾತು
ಅಮ್ಮನಿಗೆ ಭಯ ದನಿಯ ಕಂಪನ|
ಅಂದು ತಡವಾಗಿ ಚಿಕ್ಕಪ್ಪ ಹೇಳಿದರು
ನಿನ್ನ ಅಪ್ಪ ಇನ್ನಿಲ್ಲವೆಂದು|
ನನಗೆ ಏನೂ ಅನ್ನಿಸಲಿಲ್ಲ ಅಂದು
ಎಲ್ಲರೂ ಗೊಳೋ ಎಂದು ಅಳುತ್ತಿದ್ದರು||
ನನಗೆ ಅಳುಬರುತ್ತಿರಲಿಲ್ಲ

ಅಳುವವರ ನೋಡಿದರೂ
ಅರ್ಥವಾಗುತ್ತಿರಲಿಲ್ಲ|
ಬಂದ ಸಂಬಂಧಿಕರೆಲ್ಲಾ
ನನ್ನ ನೋಡಿದೊಡನೆ ಅವರ
ಕಣ್ಣುಗಳು ತುಂಬಿಕೊಳ್ಳುತ್ತಿದ್ದವು||

ಅಪ್ಪ ನಿನ್ನೆ ಹೊರಡುವಾಗ ಎಂದಿನಂತೆ
ಟಾಟ ಮಾಡಿದ್ದು ನನ್ನ ಕಣ್ಣಲ್ಲಿಯೇ ಇತ್ತು
ಆ ಟಾಟದಲ್ಲಿ ಏನೋ ವಿಶೇಷವೆನಿಸಿತ್ತು|
ಆಗ ಅನ್ನಿಸಿರಲಿಲ್ಲ ಅದುವೆ ನನ್ನಾ
ನನ್ನ ತಂದೆಯ ಕೊನೆಯ ಮಿಲನಕ್ಷಣವೆಂದು|
ರಸ್ತೆ ಅಪಘಾತ ಇಂಥಾ ಆಪತ್ತತರುತ್ತದೆಂದು
ನಾವು ಯಾರೂ ಊಹಿಸಿರಲಿಲ್ಲವೆಂದು||

ಅಪ್ಪ ಹೊರಗೆ ಹೂವಿನ ಹಾಸಿಗೆಯಲಿ
ಮಲಗಿದಂತೆ ನನಗೆ ಕಾಣಿಸುತ್ತಿತ್ತು|
ಮುಖಮಾತ್ರ ಕಾಣುತಿತ್ತು
ಬೇರೆಲ್ಲಾ ಬ್ಯಾಂಡೇಜು ಸುತ್ತಿತ್ತು|
ಮನೆತುಂಬ ಜನ, ಸಾಂಬ್ರಾಣಿ ಹೊಗೆ
ಕಣ್ಣು ಉರಿಯುತಿತ್ತು
ನೀಲಗಿರಿ‌ಎಣ್ಣೆ ವಾಸನೆ ಜಾಸ್ತಿಯೆನಿಸುತ್ತಿತ್ತು||

ಸೂರ್‍ಯ ಇಳಿಯುತ್ತಿದ್ದ ಸಮಯ
ಯಾರೋ ಮರದ ಸಾಮಾನುಗಳ ತಂದರು|
ಏನೋ ಚೌಕಾಕಾರದಂತೆ ಕಟ್ಟಿದರು
ಅದರಮೇಲೆ ಅಪ್ಪನ ಮಲಗಿಸಿದರು|
ಎಲ್ಲರೂ ಹೂ ಪತ್ರೆಗಳ ಹಾಕಿ ಹೊತ್ತೊಯ್ದರು
ಚಿಕ್ಕಪ್ಪನೇ ಎಲ್ಲಾ ಕಾರ್‍ಯವ ಮಾಡಿ
ಮುಗಿಸಿದರು||

ಆಜ್ಜಿ ಅಜ್ಜ ನಮ್ಮನು ಕರೆದುಕೊಂಡೋದರು
ಎಷ್ಟೋ ದಿನ ನೆಲ ಹಿಡಿದ
ಆಮ್ಮ ಮೇಲೆದ್ದರು|
ಸಣ್ಣದೊಂದು ಕೆಲಸಹಿಡಿದರು
ಬದುಕು ಕುಂಟುತಾ ಸಾಗಿ
ನನ್ನ ಶಾಲೆ ಹೇಗೋ ಮುಗಿಯಿತು|
ಆಮ್ಮ ಮತ್ತು ನನ್ನನು
ಮಾವಂದಿರು, ಚಿಕ್ಕಪ್ಪಂದಿರು ಎಲ್ಲಾ
ಚೆನ್ನಾಗಿ ನೋಡಿಕೊಂಡರಿಲ್ಲಿಯವರೆಗೆ||

ಆದರೆ ಏನೋ ಕೊರತೆ
ಏನೋ ಮಹತ್ವದ ಎಂದೋ
ಕಳೆದುಕೊಡ ಭಾವ ಕಾಡುತ್ತಿದೆ|
ಈಗ ಒಬ್ಬನೇ ಅಳುತ್ತಿರುವೆ
ಒಮ್ಮೊಮ್ಮೆ ಅಪ್ಪ ಎಲ್ಲಿ ಎಂದು
ಯಾರು ಸಂತೈಸುವರಿಲ್ಲ ಬಂದು|
ಅಮ್ಮನಿಗೆ ನಾನು, ನನಗೆ ಅಮ್ಮನೇ ಬಂಧು||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...