Home / ಕವನ / ಕವಿತೆ / ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ
ಕನ್ನಡದ ಕಣ್ಮಣಿಗಳು|
ಉದಯಿಸಲಿ ಮತ್ತೊಮ್ಮೆ
ಹಿಂದಿನ ಕನ್ನಡದ ಅದ್ವಿತೀಯ
ಅತಿರಥ ಮಾಹಾರಥರು||

ರಾಷ್ಟ್ರಕವಿ ಕುವೆಂಪು
ವರಕವಿ ಬೇಂದ್ರೆಯಂತವರು|
ಕಡಲ ಭಾರ್ಗವ ಕಾರಂತ,
ಪು.ತಿ.ನಾ, ಗೋಕಾಕಂತವರು|
ಮತ್ತೆ ಬೆಳೆಸಲು ಕನ್ನಡದ ಆಸ್ತಿಯನು
ಬರಲೊಮ್ಮೆ ನಮ್ಮಲ್ಲೊಬ್ಬರು ಮಾಸ್ತಿಯಂತವರು|
ಪದ ರತ್ನಗಳ ಬಿಡಿಸಲ್ಲೊಬ್ಬ ರಾಜರತ್ನಂ
ಮಂಕುತಿಮ್ಮನ ಕಗ್ಗದಂತೆ
ಮತ್ತೆ ಬಾರಿಸಲು ಕನ್ನಡ ಡಿಂಡಿಮ||

ಹುಟ್ಟಿಬರಲಿ ಮತ್ತೆ
ಗದುಗಿನ ಕುಮಾರವ್ಯಾಸರಂತವರು|
ಉದಯಿಸಲಿ ಮತ್ತೊಮ್ಮೆ
ರನ್ನ ಪಂಪ ಜನ್ನ ಪೊನ್ನ
ಹುಟ್ಟಿಬರಲಿ ಮತ್ತೆ
ಸರ್ವಜ್ಞ ಬಸವ ಅಲ್ಲಮ ಶರೀಫ
ಅಕ್ಕಮಾಹಾದೇವಿಯಂತವರು|
ಉದಯಿಸಲಿ ಮಗದೊಮ್ಮೆ
ಹರಿಹರ ರಾಘವಾಂಕ ನೃಪತುಂಗರಂತ
ಮಹಾ ಕವಿಗಳು||

ಹುಟ್ಟಿ ಬರಲಿ ಮತ್ತೆ
ಪಂಡಿತ್ ಭೀಮಸೇನ ಜೋಯಿಸ
ಗಂಗುಭಾಯಿ ಹಾನಗಲ್|
ಪುನರಪಿಸಲಿ ಮತ್ತೆ
ಪಂಡಿತ್ ಬಸವರಾಜ ರಾಜಗುರು
ಪಂಚಾಕ್ಷರಿ ಗವಾಯಿಯರು|
ಉದಯಿಸಲಿ ಇನ್ನೊಮ್ಮೆ
ಸಂಗೊಳ್ಳಿ ರಾಯಣ್ಣ
ಸಂಚಿ ಹೊನ್ನಮ್ಮನಂತವರು|
ಉದಯಿಸಲಿ ಇನ್ನೊಮ್ಮೆ
ಬೆಳವಡಿ ಮಲ್ಲಮ್ಮ
ಕಿತ್ತೂರ ರಾಣಿ ಚೆನ್ನಮ್ಮಾಜಿಯಂತವರು
ಹುಟ್ಟಿಬರಲಿ ಮತ್ತೊಮ್ಮೆ ಮಗದೊಮ್ಮೆ
ವರನಟ ಮುತ್ತು ರಾಜಕುಮಾರಂತವರು||

ಉದಯಿಸಲಿ ಇನ್ನೊಮ್ಮೆ
ಕನಕ ಪುರಂದರ ದಾಸವರೇಣ್ಯರು
ಹಾಸ್ಯ ರತ್ನ ರಾಮಕೃಷ್ಣ|
ಉದಯಿಸಲಿ ಇನ್ನೊಮ್ಮೆ
ಸಿ.ವಿ. ರಾಮನ್‌ನಂತವರು|
ಭಾರತರತ್ನ ವಿಶ್ವೇಶ್ವರಯ್ಯನಂತವರು
ಮೊಳಗಿಸಲಿ ಎಲ್ಲೆಡೆ ಕನ್ನಡದ ಕಹಳೆಯನು||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...