Home / ಕವನ / ಕವಿತೆ / ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ
ಕನ್ನಡದ ಕಣ್ಮಣಿಗಳು|
ಉದಯಿಸಲಿ ಮತ್ತೊಮ್ಮೆ
ಹಿಂದಿನ ಕನ್ನಡದ ಅದ್ವಿತೀಯ
ಅತಿರಥ ಮಾಹಾರಥರು||

ರಾಷ್ಟ್ರಕವಿ ಕುವೆಂಪು
ವರಕವಿ ಬೇಂದ್ರೆಯಂತವರು|
ಕಡಲ ಭಾರ್ಗವ ಕಾರಂತ,
ಪು.ತಿ.ನಾ, ಗೋಕಾಕಂತವರು|
ಮತ್ತೆ ಬೆಳೆಸಲು ಕನ್ನಡದ ಆಸ್ತಿಯನು
ಬರಲೊಮ್ಮೆ ನಮ್ಮಲ್ಲೊಬ್ಬರು ಮಾಸ್ತಿಯಂತವರು|
ಪದ ರತ್ನಗಳ ಬಿಡಿಸಲ್ಲೊಬ್ಬ ರಾಜರತ್ನಂ
ಮಂಕುತಿಮ್ಮನ ಕಗ್ಗದಂತೆ
ಮತ್ತೆ ಬಾರಿಸಲು ಕನ್ನಡ ಡಿಂಡಿಮ||

ಹುಟ್ಟಿಬರಲಿ ಮತ್ತೆ
ಗದುಗಿನ ಕುಮಾರವ್ಯಾಸರಂತವರು|
ಉದಯಿಸಲಿ ಮತ್ತೊಮ್ಮೆ
ರನ್ನ ಪಂಪ ಜನ್ನ ಪೊನ್ನ
ಹುಟ್ಟಿಬರಲಿ ಮತ್ತೆ
ಸರ್ವಜ್ಞ ಬಸವ ಅಲ್ಲಮ ಶರೀಫ
ಅಕ್ಕಮಾಹಾದೇವಿಯಂತವರು|
ಉದಯಿಸಲಿ ಮಗದೊಮ್ಮೆ
ಹರಿಹರ ರಾಘವಾಂಕ ನೃಪತುಂಗರಂತ
ಮಹಾ ಕವಿಗಳು||

ಹುಟ್ಟಿ ಬರಲಿ ಮತ್ತೆ
ಪಂಡಿತ್ ಭೀಮಸೇನ ಜೋಯಿಸ
ಗಂಗುಭಾಯಿ ಹಾನಗಲ್|
ಪುನರಪಿಸಲಿ ಮತ್ತೆ
ಪಂಡಿತ್ ಬಸವರಾಜ ರಾಜಗುರು
ಪಂಚಾಕ್ಷರಿ ಗವಾಯಿಯರು|
ಉದಯಿಸಲಿ ಇನ್ನೊಮ್ಮೆ
ಸಂಗೊಳ್ಳಿ ರಾಯಣ್ಣ
ಸಂಚಿ ಹೊನ್ನಮ್ಮನಂತವರು|
ಉದಯಿಸಲಿ ಇನ್ನೊಮ್ಮೆ
ಬೆಳವಡಿ ಮಲ್ಲಮ್ಮ
ಕಿತ್ತೂರ ರಾಣಿ ಚೆನ್ನಮ್ಮಾಜಿಯಂತವರು
ಹುಟ್ಟಿಬರಲಿ ಮತ್ತೊಮ್ಮೆ ಮಗದೊಮ್ಮೆ
ವರನಟ ಮುತ್ತು ರಾಜಕುಮಾರಂತವರು||

ಉದಯಿಸಲಿ ಇನ್ನೊಮ್ಮೆ
ಕನಕ ಪುರಂದರ ದಾಸವರೇಣ್ಯರು
ಹಾಸ್ಯ ರತ್ನ ರಾಮಕೃಷ್ಣ|
ಉದಯಿಸಲಿ ಇನ್ನೊಮ್ಮೆ
ಸಿ.ವಿ. ರಾಮನ್‌ನಂತವರು|
ಭಾರತರತ್ನ ವಿಶ್ವೇಶ್ವರಯ್ಯನಂತವರು
ಮೊಳಗಿಸಲಿ ಎಲ್ಲೆಡೆ ಕನ್ನಡದ ಕಹಳೆಯನು||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...