Home / ಕವನ / ಕವಿತೆ / ಇಂದಿನ ವಿವಾಹ ವಿಚ್ಚೇದನ

ಇಂದಿನ ವಿವಾಹ ವಿಚ್ಚೇದನ

ಇಂದಿನ ವಿವಾಹ ವಿಚ್ಚೇದನ
ಹೆಣ್ಣು ಗಂಡಿನ ಬರೀ ಸ್ವಾರ್ಥತನ|
ನಾನೇ ಮೇಲೆಂಬ ಹುಚ್ಚುತನ
ಗಂಡು ಹೆಣ್ಣಿನ ಆತುರಾತುರತನ|
ನವಜೀವನದ ಅರ್‍ಥತಿಳಿಯದ
ಹೆಣ್ಣು ಗಂಡಿನ ಜೀವನ ಪಥನ||

ಇನ್ನೂ ಹಸೆಯು ಆರಿರುವುದಿಲ್ಲ
ಇನ್ನೂ ಚಪ್ಪರ ಸಡಿಲಿಸಿರುವುದಿಲ್ಲ|
ಆಗಲೇ ವಿರೋಧ ಭಾವ
ಎಲ್ಲದಕೂ ಸಿಡಿಮಿಡಿ
ಏನನೋ ಕಳಕೊಂಡಂತೆ ಚಡಪಡಿಕೆ|
ನಾನು ಹೇಳಿದಂತೆಯೇ ನಡೆಯಲಿಲ್ಲವಲ್ಲ
ನನಗೇಕೋ ಸರಿಯೆನಿಸುತ್ತಿಲ್ಲ
ನನಗೆ ಈ ಮದುವೆ ಇಷ್ಟವಿಲ್ಲ||

ಯಾವುದಕ್ಕೂ ತಾಳ್ಮೆಯಿಲ್ಲ
ಎಲ್ಲಾ ಮೂಗಿನ ನೇರಕೆ ನಡೆಯಬೇಕು|
ಯಾರ ಮಾತಿಗೂ ಗೌರವವಿಲ್ಲ
ಎಲ್ಲ ಬರೀ ಒಣ ಪ್ರತಿಷ್ಠೆಯ ಜಂಭ|
ಕಠಿಣ ಪರಿಶ್ರಮವಿಲ್ಲದೆ ಬಂದ ಹಣದ ಬಲ
ಪ್ರೀತಿ ಪ್ರೇಮದ ಅನುಭವದ ಕೊರತೆ
ಸಮಯ ಭರಾಟೆಯ ನಡುವೆ
ಜೀವನದ ಮೌಲ್ಯಗಳ ಹರಾಜಕತೆ||

ಹಿಂದೆ ಅದೆಷ್ಟು ಅರ್‍ಥಪೂರ್‍ಣ
ನಮ್ಮ ಶುಭ ವಿವಾಹ ಬಂಧನ|
ಜನ್ಮ ಜನ್ಮಾಂತರದ ಬಂಧ
ಸಂಬಂಧಗಳ ಋಣಾನುಬಂಧ
ಎನ್ನುವ ಭಾವ, ಭಾವೈಕ್ಯತೆ|
ಎಲ್ಲವೂ ದೈವ ಸಂಕಲ್ಪವೆಂಬ
ಅತೀವ ನಂಬಿಕೆ, ಎಲ್ಲವೂ ಸುಖಾಂತ್ಯ|
ಆದರಿಂದು ಬರಿಯ ನಾಟಕೀಯತೆ
ವಿದ್ಯಾವಂತರೆನಿಸಿಕೊಂಡವರ
ಅವಿವೇಕತನದ ಪರಮಾವಧಿ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...