Home / ಕವನ / ಕವಿತೆ / ಷೇರು ಪೇಟೆ ಕುಸಿಯುತಿದೆ…

ಷೇರು ಪೇಟೆ ಕುಸಿಯುತಿದೆ…

ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ಕರಡಿಯೊಂದು ಕುಣಿಯುತ್ತಿದೆ
ಗೂಳಿಯೊಂದು ತಿವಿಯುತ್ತಿದೆ
ಗುಳ್ಳೆಯೊಂದು ಒಡೆಯುತಿದೆ
ಕೊಳ್ಳೆಯೊಂದು ಕರಗುತ್ತಿದೆ…

ಅಕ್ಕ…
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಇಲ್ಲಿ…. ಕೇಳಿಲ್ಲಿ….

ಪುಟ್ಟ ಮೀನು ಭಾರಿ ಹಡನ್ನು
ಮುಳುಗಿಸುವುದಂತೆ ನಿಜವೇನೇ?

ಪುಟ್ಟ ಹಕ್ಕಿ ಭಾರಿ ವಿಮಾನವನ್ನು
ಉರುಳಿಸುವುದಂತೆ ನಿಜವೇನೇ?

ಗೆದ್ದಲು ಹುಳು ಭಾರಿ ಸೌಧವನ್ನು
ಕಬಳಿಸುವುದಂತೆ ನಿಜವೇನೇ?

ತಂಗಿ….
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ವೇಷವೊಂದು ಕಳಚುತ್ತಿದೆ
ದಿಗಿಣವೆಲ್ಲ ಅಡಗುತ್ತಿದೆ
‘ಹಾ’ಹಾಕಾರ ಏರುತಿದೆ
‘ಹೂಂ’ಕಾರ ಇಳಿಯುತಿದೆ…

ಅಕ್ಕ….
ಷೇರುಪೇಟೆಯೇ? ಗೊತ್ತಿಲ್ಲ ಕಣೆ!
ಏನದು ದೇಖು-ರೇಖು?
ಹಾಂ! ಮೀನಿಗೆ ಮಸಾಲೆ ಅರೆಯಬೇಕು
ಸದ್ಯ! ಉಪ್ಪು ಮೆಣಸು ಹುಳಿ
ತುಟ್ಟಿಯಾಗದಿದ್ದರೆ ಸಾಕು

ನೂಲೆಳೆಯುವ ಅಜ್ಜ ಹೇಳುತ್ತಿದ್ದ…
ಒಂದು ಹೂವು ಅರಳಬೇಕು
ಒಂದು ಹಕ್ಕಿ ಹಾಡಬೇಕು
ಒಂದು ಚಿಲುಮೆ ಉಕ್ಕಬೇಕು
ಒಂದು ಗುಕ್ಕು ಅನ್ನ
ಒಂದು ಗುಟುಕು ನೀರು
ಬಾಳಲು ಹೆಚ್ಚಿಗೇನು ಬೇಕು ?

ತಂಗಿ…
ಷೇರುಪೇಟೆ ಕುಸಿಯುತಿದೆ
ಮಾರುಕಟ್ಟೆ ನಡುಗುತಿದೆ…

ಅಕ್ಕ…
ಷೇರುಪೇಟೆ ಹಾಗೆಂದರೆ ಏನೇ?
ಅದು ನಮ್ಮ ಹೂವಿನ ಮಾರುಕಟ್ಟೆಗೆ ಸಮವೇನೇ?

ಇಗೋ..
ಇಲ್ಲಿ ನನ್ನೂರಲ್ಲಿ ನೆರೆದಿದೆ ಸಂತೆ
ರಾಟೆ ಸುತ್ತಬೇಕು ಪೀಪಿ ಊದಬೇಕು
ಗರಿ ಗರಿ ಚುರುಮುರಿ…
ಬಿಸಿ ಬಿಸಿ ಬಜ್ಜಿ-ಮೆಣಸಿನ ಕಾಯಿ ಮೆಲ್ಲಬೇಕು
ಇದಲ್ಲವೆ ನನ್ನ ವಿಶ್ವ? ಇದೇ ನನ್ನ ವಿಶ್ವ!

ಷೇರು ಪೇಟೆ ಕುಸಿದರೇನಂತೆ?
ಮಾರುಕಟ್ಟೆ ಮುಳುಗಿದರೇನಂತೆ?

ಕುಡಿಕೆಯಲಿ ಕಾಸು ಕೂಡಿಟ್ಟಿರುವೆ
………..ಸುಡು ಚಿಂತೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...