Home / ಲೇಖನ / ವಿಜ್ಞಾನ / ಸೂಕ್ಷ್ಮ ತರಂಗಗಳ ಒಲೆ

ಸೂಕ್ಷ್ಮ ತರಂಗಗಳ ಒಲೆ

(Micro wave oven)
ವಿದ್ಯುತ್ ಶಕ್ತಿ, ಅನಿಲ, ಇಜ್ಜಲ, ಸೌದೆ, ಹೊಟ್ಟು, ಕಟ್ಟಿಗೆ, ಇದ್ಯಾವ ವಸ್ತು ಇಲ್ಲದೆಯೂ ಅತ್ಯಂತ ಬೇಗನೆ ಯಾವುದೇ ಪದಾರ್ಥಗಳನ್ನು ಬೇಯಿಸಬಲ್ಲ ಒಲೆಯೇ ಸೂಕ್ಷ್ಮತರಂಗಗಳ ಒಲೆ. ಇದನ್ನು ಮ್ಯಾಗ್ನೆ ಟ್ರಾನ್ಸ್ ಎಂಬ ಒಂದು ಕಂಪನಿಯಲ್ಲಿಯ ಸಂಶೋಧಕರು ೧೯೬೦ ರಲ್ಲಿಯೇ ಅಮೆರಿಕಾದಲ್ಲಿ ಕಂಡು ಹಿಡಿದಿದ್ದರೂ ಬೆಳಕಿಗೆ ಬಂದಿರಲಿಲ್ಲ. ಇದೀಗ ಎಲ್ಲೆಡೆಯಲ್ಲಿಯೂ ಪ್ರಚಾರ ಪಡೆಯುತ್ತಿರುವ ಈ ಸೂಕ್ಷ್ಮ ತರಂಗಗಳ ಒಲೆಯು ಬೇಡಿಕೆಯಲ್ಲಿದೆ. ಈ ಒಲೆ ಹೆಚ್ಚು ಕಂಪನ ವೇಗದ ರೇಡಿಯೋ ತರಂಗಗಳನ್ನೇ ಬಳಸಲ್ಪಡುತ್ತದೆ. ತರಂಗಗಳು ಬೇಯಿಸುವ ಆಹಾರವನ್ನು ಒಳಹೊಕ್ಕು ಅದರಲ್ಲಿರುವ ಪದಾರ್ಥಗಳನ್ನು ಮಥನ ಮಾಡಿ ಆಹಾರಪಚನವನ್ನುಂಟು ಮಾಡುತ್ತದೆ. ಇದರಿಂದ ಆಹಾರವು ಹೊರವಲಯದಲ್ಲಿ ಮಾತ್ರ ಪಚನವಾಗದೇ ಅಂತರೀಕರವಾಗಿಯೂ ಬೇಯಿಸಲ್ಪಡುತ್ತದೆ. ಈ ಮಥನ ಕ್ರಿಯೆಯಲ್ಲಿ ಶಾಖವು ವಿಪರೀತ ಏರುತ್ತದೆ. ಈ ಬಲೆಯಲ್ಲಿ ಉತ್ಪತ್ತಿಂಟಾಗುವ ಸೂಕ್ಷ್ಮತರಂಗಗಳ ಆಧಾರವೇ ಡ್ಯೂಗ್ನೆಟ್ರಾನ್ಸ್ ಇದು ಹೆಚ್ಚು ಕಂಪನವೇಗವ Diode ಇದರಲ್ಲಿ ಉರುಳೆಯಕಾರದ ಋಣ ವಿದ್ಯುತ್ವಾಹಕವಿದೆ ಮತ್ತು (Cathode) ಮತ್ತು ಏಕಾಕ್ಷೀಯ ಧನವಿದ್ಯುದ್ವಾಹಕವೂ (Anode) ಇದೆ. ಈ ಎರಡೂ ವಿದ್ಯುತ್ವಾಹಕಗಳ ಮೂಲಕ ನೇರವಾಗಿ ವಿದ್ಯುತ್‌ಶಕ್ತಿಯನ್ನು ಹಾಯಿಸಿದರೆ ಅಲ್ಲಿ ವಿದ್ಯುತ್ ಕ್ಷೇತ್ರವು ನಿರ್ಮಿತವಾಗುತ್ತದೆ. ಆಯಸ್ಕಾಂತ ಕ್ಷೇತ್ರವನ್ನು ಅಡ್ಡಡ್ಡಲಾಗಿ ಹೊರಗಡೆಯ ಆಯಸ್ಕಾಂತದ ಸಹಾಯದಿಂದ ಪ್ರಯೋಗಿಸಿದರೆ ಮತ್ತು ಇದನ್ನು ಅನುಕಣನೀಯ ಸಾಧನಕ್ಕೆ ಸಿಕ್ಕಿಸಿದರೆ ಇದು Oscillator ರೀತಿಯಲ್ಲಿ ವರ್ತಿಸಿ ಅತ್ಯಂತ ಹೆಚ್ಚಿನ ಕಂಪನ ವೇಗದ ತರಂಗಗಳನು ಉತ್ಪತ್ತಿ ಮಾಡಬಲ್ಲದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...