Home / ಕವನ / ನೀಳ್ಗವಿತೆ / ದೇವರು ದೊಡ್ಡವ

ದೇವರು ದೊಡ್ಡವ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ಅಲ್ಲವೆ ಮತ್ತೆ
ಮುಂದೆ ಹೋದರು ಕತ್ತೆ
ಹಿಂದೆ ಬಂದರು ಕತ್ತೆ
ಕತ್ತೆಯೇ
ಹಾಗೆಯೇ ಆವತ್ತು
ಅಂಥ ಕತೆ ಕೇಳಿ
ಅಂಥ ಕತೆಯೇ ಅಥವ
ದಂತ ಕತೆಯೇ
ಆಹ ! ಅವನೇ ಬಂದ
ಖದೀಮ
ಹೆಸರು ಮಾತ್ರ ಹಕೀಮ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ಕಾಲ ಕ್ರಿಸ್ತಶಕ
ಒಂದು ಸಾವಿರ ವರುಷ
ಜಾಗ ಕೈರೋ ಎಂಬ ದೇಶ
ಅವರೂ ಖಲೀಫರೇ
ಬರುತಾರೆ ಕೆಲವು ಸಲ
ಗರೀಬ ಫಕೀರನ ಹಾಗೆ
ಬರುತಾರೆ ಕೆಲವು ಸಲ
ತಳವಾರನ ವೇಷ

ಇಂಥಾ ಹೊತ್ತಿಗೆ
ಕುಂಟರ ಕುರುಡರ ಪರವೂರವರ
ಸಂತರ ಶ್ರೀಮಂತರ ನಂಬುವುದಾದರು ಹೇಗೆ !

ಮಾರನೆ ದಿನ
ಸೆರೆಮನೆಯಲಿ ಹತ್ತು ಜನ
ಹೆಚ್ಚಿದರೂ ಹೆಚ್ಚೀತು
ಐದಾರು ಹೆಣ
ಕೊಚ್ಚಿದರೂ ಕೊಚ್ಚೀತು

ಹೀಗಿತ್ತವನ
ಹೀಗಿದ್ದವನ
ಹೀಗೇ ಒಂದು ದಿನ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ನಾವು ಮಸೀದಿಯ ಮೆಟ್ಟಿಲ ಮೇಲೆ
ಸುಮ್ಮನೆ ನೋಡುತ್ತ
ಅಂಗಡಿ ಕಣಗಳು ಕೂಡ
ಅರ್ಧಕ್ಕೆ ತೆರೆಯುತ್ತ
ಇನ್ನೂ ಕೆಲವರು ಹುಕ್ಕದ ಸುತ್ತ
ಕತೆಗಳ ಹೇಳುತ್ತ

ಹತ್ತು ಜನ ಹೊಂತಗಾರರು
ಹೀಗೇ ಹಾದಿ ನಡೆದಿದ್ದಾರೆ
ಒಬ್ಬಾನೊಬ, ವ್ಯಾಪಾರಿ
ಜತೆಗೇ ಬರುವುದ
ಕಂಡಿದಾರೆ.
ತಲೆಗೇನೋ ಹೊಳೆದಂತಾಗಿ
ತಟ್ಟನೆ ತಿರುಗಿ ನಿಂತಿದ್ದಾರೆ

“ಸಲಾಂ ಖಲೀಫರ
ಅನಕಾ ದೂರ
ಬರಿಗಾಲಲ್ಲೆ ಬಂದಿದ್ದೀರ !
ಏನ ನಡೆಸೀರಿ
ವ್ಯಾಪಾರ ?”

ಎಂದರು-ಹತ್ತಿರ
ಹತ್ತಿರ ಬಂದರು, ಹತ್ತೂ ಮಂದಿ
ಸುತ್ತ ಮುತ್ತ ಯಾರಿಲ್ಲ
ಬಿಟ್ಟರೆ ಬೀದಿಯ ಹಂದಿ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ
“ಆಹ ! ಏನಂದಿರಿ-
ವ್ಯಾಪಾರ ?
ಅದೂ ಪರವಾಯಿಲ್ಲ!
ಇದೋ!” ಎಂದರು ಖಾವಂದರು
ಮುಷ್ಟಿ ದಿನಾರವ ತೆಗೆದು

ಅವು ಅಂಗೈ ತುಂಬಾ ಹೊಳೆದು
ಸಂಜೆಯ ಸೂರ್ಯನ ಕಿರಣ
ಹೆಕ್ಕಿದುವೊಂದನು ಬಿಡದೆ
ನೋಡದೆ ಬೇರೆ ಕಡೆ

“ಯಾರಿಗೆ ಇವು
ಯಾರಿಗೆ ಹೇಳಿ-
ಕಪ್ಪು ಸಮುದ್ರವ
ಕುಡಿದಾತನಿಗೆ
ಕೆಂಪು ಸಮುದ್ರವ
ಹಿಡಿದಾತನಿಗೆ
ಕೊನೆ ತನಕವು
ಉಳಿವಾತನಿಗೆ !”

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…

ಎಲ್ಲರು ಬಿದ್ದಿದ್ದರು-ಒಬ್ಬ ಮಾತ್ರವೇ
ಎದ್ದು ನಿಂತಿದ್ದ
ಅವ ಖಲೀಫರ ಸಮ್ಮುಖ
ಬಂದು ನಿಂತಿದ್ದ

“ಏನ ನೋಡತಿ, ಮಗನೇ ?
ಕೊನೆಗೂ ಗೆದ್ದವ ನೀನೇ-
ನಮ್ಮ ಕಾಲಿಗೆ ಬಿದ್ದು
ತಗೊ ನಿನ್ನ ನಿಧಿಯನು ನೀನೇ !”

ಆಮೇಲಿನ ಕತೆ
ಗೊತ್ತಿದ್ದದ್ದೇ-
ದೇವರು ದೊಡ್ಡವ ಗೆದ್ದೇ-
ನೆಂದು ಮನಸಿನ ಒಳಗೇ
ನೆತ್ತರ ಒರೆಸಿ
ಖಡ್ಗವ ಮರೆಸಿ
ನಡೆದರು ಮೊದಲಿನ ಹಾಗೇ

ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...