Home / ಲೇಖನ / ವಿಜ್ಞಾನ / ಮೂಗಿನ ಮಹತ್ವ ಮತ್ತು ಮೂಗಿನ ಚಮತ್ಕಾರ!

ಮೂಗಿನ ಮಹತ್ವ ಮತ್ತು ಮೂಗಿನ ಚಮತ್ಕಾರ!

ಮೂಗು ಮನುಷ್ಯನ ಪಂಚೇಂದ್ರಿಯಗಳಲ್ಲಿ ಒಂದು ಪ್ರಮುಖವಾದ ಅಂಗ. ಈ ಮೂಗು ಮೂಸುವ ಶಕ್ತಿಯಿಂದ ಹೆಸರಾಗಿದೆ. ಮೂಗಿನಿಂದಲೇ ಸುವಾಸನೆಯ ಪ್ರಭಾವವನ್ನು ಕಂಡು ಹಿಡಿಯಬಹುಡು. ಕೆಲರೋಗಗಳನ್ನು ಮೂಗಿನಿಂದ ಹೀರಿದ ಸುವಾಸನೆಯಿಂದಲೇ ಸರಿಪಡಿಸಬಹುದು. ಅಲ್ಲದೇ ಈ ವಾಸನೆಯಿಂದಲೇ ದೇಹದ ಸ್ಥಿತಿಯನ್ನೇ ಬದಲಾಯಿಸಬಹುದು. ಬೇಸರವನ್ನು ಹೋಗಲಾಡಿಸಿ ಉತ್ಸಾಹ ಭರಿಸಬಹುದು ಸೆಕೆಯ ಚಡಪಡಿಕೆಯನ್ನು ದೂರಗೊಳಿಸಿ ತಂಪಿನ ಅನುಭವವುಂಟು ಮಾಡಬಹುದು. ಒಂದು ಅನಿಲವನ್ನು ಮೂಸಿ ನಗುವಂತೆ ಮಾಡಬಹುದು. ಈರುಳ್ಳಿ ರಸ ಮೂಸಿ ಕಣ್ಣಲ್ಲಿ ನೀರು ಬರುವಂತೆ ಮಾಡಬಹುದು, ಕ್ಲೋರೋಫಾರಮ್‌ ಮೂಸಿ ಶಸ್ತ್ರ ಚಿಕಿತ್ಸೆಯ ನೋವೆ ಆಗದಂತೆ ಮಾಡಿಕೊಳ್ಳಲೂಬಹುದು. ಅಶ್ರುವಾಯುವಿನ ಮೂಲಕ ಮನುಶ್ಯರನ್ನು ಅಳಿಸಲೂಬಹುದು. ಕೊಳೆತ ವಸ್ತುವಿನ ದುರ್ನಾತದಿಂದ (ವಾಸನೆಯಿಂದ) ಗಬ್ಬೆಂದು ದೂರ ಹೋಗಬಹುದು. ಈ ರೀತಿ ಅನೇಕ ವಾಸನೆಗಳನ್ನು ಗ್ರಹಿಸುವ ಮೂಗಿನ ಮಹತ್ವ ಮನುಷ್ಯನ ಬದುಕಲಿ ಅತ್ಯವಶ್ಯಕವಾಗಿದೆ. ಮೂಗೇ ಇಲ್ಲದಿದ್ದರೆ ಸುವಾಸನೆ, ಅಥವಾ ದುರ್ವಾಸನೆಗಳನ್ನರಿದೇ ಮೂಗನಾಗಿ, ಕೊರಡಾಗಬಹುದುಲ್ಲವೆ? ಒಂದು ವೇಳೆ ಮೂಗಿನಿಂದ ಈ ಯಾವ ವಾಸನೆಗಳನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೂಂಡ ಮನುಷ್ಯರಿಗೆಂದೇ ವಾಸನೆಗಳನ್ನು ಗ್ರಹಿಸುವ ಕೃತಕ ಮೂಗನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.

ಈ ಮೂಗಿಗೆ “ಸೈರೊನೋಸ್ ೨೦೦೦” ಎಂದು ಹೆಸರಿಟ್ಟಿದೆ. ಇದಕ್ಕೆ ‘ಈನೋಸ್’ ಎಂದೂ ಕೂಡ ಕರೆಯಲಾಗುತ್ತದೆ. ಒಬ್ಬ ಆರೋಗ್ಯವಂತನ ಮೂಗು ೬೫೦ ವಿಧದ ವಾಸನೆಗಳನ್ನು ಗುರುತಿಸಬಲ್ಲದೆಂದು ಮೂಗಿನ ತಜ್ಞರು ಹೇಳುತ್ತಾರೆ. ಈ ಕೃತಕ ಮೂಗಿನ ಸಾಮರ್ಥ್ಯ ಅಷ್ಟಿಲ್ಲದಿದ್ದರೂ ಮುಂದೆ ಇದನ್ನು ಅಭಿವೃದ್ಧಿಪಡಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಬೆಲೆ ೮ ಸಾವಿರ ಡಾಲರ್ ಇದೆ. ಈ ಕೃತಕ ಮೂಗು ಇದ್ದವರಿಗೆ ಉಪಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ಇದು ರೋಗಗಳನ್ನು ಮೂಸಬಲ್ಲದು. ಇದನ್ನು ಇಂಗ್ಗೆಂಡ್ ಓಸ್ಮೆಟಿಕ್ ಕಂಪನಿ ತಯಾರಿಸಿದೆ. ಇದು ವಿಷಾಣುಗಳನ್ನು ಗುರುತಿಸಿ ಯಾವುದರಿಂದ ಕಾಯಿಲೆ ಬರುತ್ತದೆಂದು ಕಂಡು ಹಿಡಿದು ಯಾವ ಔಷಧಿಗಳಿಂದ ಗುಣಪಡಿಸಬಹುದೆಂದು ತಿಳಿಸುತ್ತದೆ. (ಸೂಚಿಸುತ್ತದೆ)

ಮುಂದೊಂದು ದಿನ ಇದರ ಬೆಲೆಯಲ್ಲಿ ಇಳಿಕೆಯಾದರೆ ಸಾಮಾನ್ಯ ಜನರೂ ಇದನ್ನು ಉಪಯೋಗಿಸಬಹುದು. ಆಗ ಯಾವ ದಾರಿಯಲ್ಲಿ ಸಾಗಬಹುದು, ಎಲ್ಲಿ ದುರ್ವಾಸನೆ ಇದೆ ಯಾವ ಹೋಟೆಲಿನ ಆಹಾರ ದೇಹಕ್ಕೆ ಒಗ್ಗಲಾರದು. ಯಾವ ತೋಟದ ಹೂವು ಮನಸ್ಸಿಗೆ ಅಲ್ಹಾದಕರ ಎಂಬ ಎಲ್ಲ ಮಾಹಿತಿಗಳು ಈ ಮೂಗು ಹೊಂದುವವರಿಗೆ ತಿಳಿಯಬಹುದು. ಸಹಜ ಮೂಗಿನಂತೆ ಬಳಸಿ ಇದೆಲ್ಲವನ್ನು ತಿಳಿಯಬಹುದು. ಇದು ಇನ್ನು ಬಹಳ ಆವಿಪ್ಕಾರ ಹೊಂದಬೇಕಿದೆ ಅಲ್ಲಿಯವರೆಗೆ ಆಕಾಂಕ್ಷಿಗಳು ಕಾಯಬೇಕಿದೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...