Home / ಲೇಖನ / ವಿಜ್ಞಾನ / ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ಮಾಯೆ ಎಂಥಹ ಅಪಾಯಕಾರಿ ಎಂಬುವುದು ಎಲ್ಲರಿಗೂ ಗೊತ್ತು. ದನಕರುಗಳಿಗೆ ತೊಂದರೆ, ನೀರನ ಹರಿವಿಗೆ ತಡೆ, ಬೆಳೆಗಳ ಬೇರುಗಳಿಗೆ ತೊಂದರೆ ಅಲ್ಲದೇ ಇವುಗಳಿಂದ ಪರಿಸರಮಾಲಿನ್ಯ ಕೂಡಾ ಯತೆಚ್ಚೆವಾಗಿ ಆಗಿ ಮಾನವನಿಗೆ ಮಾರಕವಾಗುವ ವಿಷಯ ತಿಳಿದಿದೆ. ದನಗಳು ತಿಂದರೆ ಸತ್ತುಹೋಗುತ್ತವೆ, ಮನುಷ್ಯ ತಿಂದರೆ ಕರುಳನ್ನು ಸುತ್ತಿಸಿಕೊಂಡು ಮರಣ ಅಪ್ಪುತ್ತಾನೆ. ಭೂಮಿಯಲ್ಲಿ ಹೂತರೆ ನೂರಿನ್ನೂರು ವರ್ಷವಾದರೂ ಕರಗದೇ ಇರುತ್ತದೆ. ಇವುಗಳನ್ನು ಸುಟ್ಟುಹಾಕಿದರೆ ಇದರಿಂದ ಉತ್ಪತ್ತಿಯಾಗುವ ಅಪಾಯಕಾರಿ ಹೊಗೆ (ಇಂಗಾಲ ಡೈ ಆಕ್ಸೈಡ್) ಯು ಮನುಷ್ಯನ ಉಸಿರಾಟವನ್ನೇ ನಿಲ್ಲಿಸಿ ಬಿಡುತ್ತದೆ. ಇಂಥಹ ಅಪಾಯಕಾರಿ ಪಾಲಿಥಿನನ್ನೇ ತಡೆಹಿಡಿಯಬೇಕೆಂದು ಸರಕಾರ ಆಜ್ಞೆ ಹೊರಡಿಸಿದರೂ ಸಫಲವಾಗಲಿಲ್ಲ. ಪ್ರಜ್ಞಾವಂತ ಜನರು ಇದನ್ನು ಅರ್ಥಮಾಡಿಕೊಳ್ಳದೇ ಈ ಮಾಯೆಗೆ ಮರುಳಾಗಿದ್ದಾರೆ.

ಇಂಥಹ ಸಂದರ್ಭದಲ್ಲಿ ಛತ್ತೀಸಗಡದ ಯುವ ವಿಜ್ಞಾನಿ ಅವಧಿಯ ಎಂಬುವರು ಸೊಸೈಟಿ ಫಾರ್ ಪಾರ್‍ಥೆನಿಯಂ ಮ್ಯಾನೋಜಮೆಂಟ್ ಸಂಯೋಜಕರಾಗಿದ್ದುಕೊಂಡು ಈ ಪ್ಲಾಸ್ಟಿಕನ್ನು ತಿಂದು ಅರಗಿಸಿಕೊಳ್ಳಬಲ್ಲ ಕೀಟಗಳನ್ನು ಪತ್ತೆಹಚ್ಚಿದ್ದಾರೆ. ೧೩೫ ಕೀಟಗಳ ಮೇಲೆ ಪ್ರಯೋಗ ನಡಿಸಿದ (೨ ವರ್ಷ) ‘ಅವಧಿಯಾ’ ಎಂಬ ವಿಜ್ಞಾನಿ ಇವುಗಳಲ್ಲಿ ೫ ಕೀಟಗಳು ಈ ಪಾಲಿಥಿನನ್ನು ತಿಂದು ಅರಗಿಸಿಕೊಳ್ಳಬಲ್ಲದೆಂದು ದೃಢೀಕರಿಸಿದ್ದಾರೆ. ಈ ‘ಪ್ಲಾಸ್ಬಿಕ್ ಬಗ್’ ಅನ್ನು ತಾನು ೧೯೯೯ರಲ್ಲಿ ಕಂಡು ಹಿಡಿದಿದ್ದಾಗಿ ಹೇಳಿದ್ದಾರೆ. ಚಳಿಗಾಲದಲ್ಲಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆ ಎಂದೂ ಹೇಳಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...