Home / ಲೇಖನ / ವಿಜ್ಞಾನ / ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ

ಹೊಂಗೆ, ಬೇವಿನ ಎಣ್ಣೆಯಿಂದ ಪರ್ಯಾಯವಾದ ಡಿಜಲ್ ಉಪಯೋಗ

ಅನೇಕ ವನಸ್ಪತಿಗಳಿಂದ, ಆಹಾರಬೆಳೆಗಳಿಂದ ಎಣ್ಣೆಯನ್ನು ತಯಾರಿಸಿ ಔಷಧಿ ರೂಪದಲ್ಲಿಯೂ, ಆಹಾರದಲ್ಲಿಯೂ ಬಳೆಸಲಾಗುತ್ತದೆ. ಇದೀಗ ಹೊಂಗೆ ಮರದ ಬೀಜದಿಂದ, ಬೇವಿನ ಮರದ ಬೀಜದಿಂದ ಉತ್ಪಾದಿಸಲ್ಪಟ್ಟ ಎಣ್ಣೆಗಳಿಂದ ಯಂತ್ರಗಳನ್ನು ನಡೆಸಬಹುದೆಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಂಗಸಂಸ್ಥೆಯಾದ ‘ಸೂತ್ರ’ವು ಕಂಡು ಹಿಡಿದಿದೆ. ಇದರಿಂದ ಮುಂದೊಂದು ದಿನ ವಿದೇಶಿ ಡಿಜಲ್ ಬರದಾಗುತ್ತದೆ ಮತ್ತು ಡಿಜರ್ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಈ ಎಣ್ಣೆಗಳನ್ನೇ ಬಳೆಸುವ ಕಾಲ ಬರಬಹುದು. ಒಂದು ಕೆ.ಜಿ. ಹೊಂಗೆ ಎಣ್ಣೆ ಅಥವಾ ಬೇವಿನ ಎಣ್ಣೆಯ ಉತ್ವಾದನೆಗೆ ೪ ಕೆ.ಜಿ. ಬೀಜಬೇಕಾಗುತ್ತದಷ್ಟೆ. ಡಿಜಲ್ ಯಂತ್ರಗಳಿಗೆ ವಾಹನಗಳಿಗೆ ಈ ಎಣ್ಣೆಯನ್ನು ಬಳೆಸಬಹುದು ಎಂದು ಕಂಡು ಹಿಡಿಯಲಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ವಿದ್ಯುತ್ ಉತ್ಪಾದಿಸಲು ಪ್ರಯೋಗಿಕವಾಗಿ ಈ ಎಣ್ಣೆಯನ್ನು ಬಳೆಸಲಾಗುತ್ತದೆ. ದಿನದಿನವೂ ಹೆಚ್ಚುತ್ತಿರುವ ಡಿಜಲ್ ಬೆಲೆಯ ದುಬಾರಿ ದರದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಈ ಸಂಸ್ಕರಿಸಿದ ಹೊಂಗೆ, ಅಥವಾ ಬೇವಿನ ಎಣ್ಣೆಯನ್ನು ಯಂತ್ರಗಳಿಗೆ ಬಳಸಿ ಸಮಸ್ಯೆಗಳನ್ನು ಪರಿಸರಿಸಿಕೊಳ್ಳಬಹುದು.

ಈ ಎರಡು ತರಹದ ಎಣ್ಣೆ ತೆಗೆಯುವುದರಿಂದ ಬಹಳ ಉಪಯೋಗವು ಕೂಡ ಇರುತ್ತದೆ. ಈ ಎಣ್ಣೆ ತೆಗೆದ ನಂತರ ಇವುಗಳ ಹಿಂಡಿಯನ್ನು ರೈತರು ತಮ್ಮ ತೆಂಗು, ಅಡಿಕೆ, ಬಾಳೆ ತೋಟಗಳಿಗೆ, ಗದ್ದೆಗಳಿಗೆ ಗೊಬ್ಬರವನ್ನಾಗಿಯೂ ಸಹ ಬಳಸಬಹುದು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗುವುದರ ಜತೆಗೆ ಗಿಡಗಳಿಗೆ ಯಾವುದೇ ರೋಗ ರುಜೀನಗಳು ಬರುವುದಿಲ್ಲ ಮತ್ತು ಹೆಚ್ಚು ಇಳುವರಿಯೂ ಕೂಡ ಬರುತ್ತದೆ. ಇಂಥಹ ಸಾಹಸವನ್ನು ರೈತರು ಯತೇಚ್ಛೆವಾಗಿ ಮಾಡಿ ಮಾದರಿ ಕೃಷಿಕರಾಗಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...