Home / ಕವನ / ಕವಿತೆ / ಲೋಕದ ರೀತಿ

ಲೋಕದ ರೀತಿ

ಲೋಕ ನೀತಿ ವಿಧ ವಿಧ ರೀತಿ
ಮೇಲೇ ಕಾಣದು ಸತ್ಯದ ಜ್ಯೋತಿ || ಪ ||

ಕಲ್ಲುಗಳೆಲ್ಲ ರತ್ನಗಳಲ್ಲ
ಮಣ್ಣುಗಳೆಲ್ಲ ಸತ್ವಗಳಲ್ಲ
ಗುಡ್ಡಗಳೆಲ್ಲ ಲೋಹಾದ್ರಿಯಲ್ಲ
ಕಾಡುಗಳೆಲ್ಲ ಶ್ರೀಗಂಧವಲ್ಲ || ೧ ||

ಮೋಡಗಳೆಲ್ಲ ಮಳೆಯವು ಅಲ್ಲ
ಜಾಡುಗಳೆಲ್ಲ ಸತ್ಪಥವಲ್ಲ
ಹೂವುಗಳೆಲ್ಲ ವಾಸನೆಯಲ್ಲ
ಹಣ್ಣುಗಳೆಲ್ಲ ಸಿಹಿರಸವಲ್ಲ || ೨ ||

ಮಂದಿಗಳೆಲ್ಲ ಮಾನವರಲ್ಲ
ಮಾನವರೆಲ್ಲ ಮಹಾತ್ಮರಲ್ಲ
ಕಲಿತವರೆಲ್ಲ ಜಾಣರು ಅಲ್ಲ
ಜಾಣರು ಎಲ್ಲ ಜ್ಞಾನಿಗಳಲ್ಲ || ೩ ||

ದನಗಳು ಎಲ್ಲ ಹೈನುಗಳಲ್ಲ
ಊರುಗಳೆಲ್ಲ ನಂದನವಲ್ಲ
ಹುಟ್ಟಿದ್ದು ಎಲ್ಲ ಶಾಶ್ವತವಲ್ಲ
ಬದುಕುಗಳೆಲ್ಲ ಬಂಗಾರವಲ್ಲ || ೪ ||

ಹೆಣ್ಣುಗಳೆಲ್ಲ ಚೆಲುವೆಯರಲ್ಲ
ಗಂಡುಗಳೆಲ್ಲ ಧೀರರು ಅಲ್ಲ
ಕನಸುಗಳೆಲ್ಲ ಕೈಗೂಡೊದಿಲ್ಲ
ಮನಸುಗಳೆಲ್ಲ ತಿಳಿಹೊಳೆಯಲ್ಲ || ೫ ||

ಪ್ರತಿ ಹಣವೆಲ್ಲ ಬೆವರಿನದಲ್ಲ
ಪ್ರತಿ ನಡೆ ಎಲ್ಲ ಮುನ್ನಡೆಯಲ್ಲ
ಬರೆದದ್ದು ಎಲ್ಲ ಕಾವ್ಯವು ಅಲ್ಲ
ಹಾಡುವುದೆಲ್ಲ ಸಂಗೀತವಲ್ಲ || ೬ ||

ನೋಟಗಳೆಲ್ಲ ಕೂಟಗಳಲ್ಲ
ಕೂಟಗಳೆಲ್ಲ ಸುರತಗಳಲ್ಲ
ಬೀಜಗಳೆಲ್ಲ ಸಂತಾನವಲ್ಲ
ಸಂತತಿ ಎಲ್ಲ ಸಂಸ್ಕಾರವಲ್ಲ || ೭ ||

ಎಳ್ಳಲಿ ಎಣ್ಣೆ ಹಾಲಲಿ ಬೆಣ್ಣೆ
ತೆಂಗಲಿ ನೀರು ಗಣಿಯಲಿ ಚಿನ್ನಾ
ಗೊಳ್ಳಲಿ ತಿರುಳು ಇರುವಾ ರೀತಿ
ಸತ್ಯವು ಸುಲಭಕೆ ಸಿಗದೋ ಅಣ್ಣ || ೮ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...