ಲೋಕದ ರೀತಿ

ಲೋಕ ನೀತಿ ವಿಧ ವಿಧ ರೀತಿ
ಮೇಲೇ ಕಾಣದು ಸತ್ಯದ ಜ್ಯೋತಿ || ಪ ||

ಕಲ್ಲುಗಳೆಲ್ಲ ರತ್ನಗಳಲ್ಲ
ಮಣ್ಣುಗಳೆಲ್ಲ ಸತ್ವಗಳಲ್ಲ
ಗುಡ್ಡಗಳೆಲ್ಲ ಲೋಹಾದ್ರಿಯಲ್ಲ
ಕಾಡುಗಳೆಲ್ಲ ಶ್ರೀಗಂಧವಲ್ಲ || ೧ ||

ಮೋಡಗಳೆಲ್ಲ ಮಳೆಯವು ಅಲ್ಲ
ಜಾಡುಗಳೆಲ್ಲ ಸತ್ಪಥವಲ್ಲ
ಹೂವುಗಳೆಲ್ಲ ವಾಸನೆಯಲ್ಲ
ಹಣ್ಣುಗಳೆಲ್ಲ ಸಿಹಿರಸವಲ್ಲ || ೨ ||

ಮಂದಿಗಳೆಲ್ಲ ಮಾನವರಲ್ಲ
ಮಾನವರೆಲ್ಲ ಮಹಾತ್ಮರಲ್ಲ
ಕಲಿತವರೆಲ್ಲ ಜಾಣರು ಅಲ್ಲ
ಜಾಣರು ಎಲ್ಲ ಜ್ಞಾನಿಗಳಲ್ಲ || ೩ ||

ದನಗಳು ಎಲ್ಲ ಹೈನುಗಳಲ್ಲ
ಊರುಗಳೆಲ್ಲ ನಂದನವಲ್ಲ
ಹುಟ್ಟಿದ್ದು ಎಲ್ಲ ಶಾಶ್ವತವಲ್ಲ
ಬದುಕುಗಳೆಲ್ಲ ಬಂಗಾರವಲ್ಲ || ೪ ||

ಹೆಣ್ಣುಗಳೆಲ್ಲ ಚೆಲುವೆಯರಲ್ಲ
ಗಂಡುಗಳೆಲ್ಲ ಧೀರರು ಅಲ್ಲ
ಕನಸುಗಳೆಲ್ಲ ಕೈಗೂಡೊದಿಲ್ಲ
ಮನಸುಗಳೆಲ್ಲ ತಿಳಿಹೊಳೆಯಲ್ಲ || ೫ ||

ಪ್ರತಿ ಹಣವೆಲ್ಲ ಬೆವರಿನದಲ್ಲ
ಪ್ರತಿ ನಡೆ ಎಲ್ಲ ಮುನ್ನಡೆಯಲ್ಲ
ಬರೆದದ್ದು ಎಲ್ಲ ಕಾವ್ಯವು ಅಲ್ಲ
ಹಾಡುವುದೆಲ್ಲ ಸಂಗೀತವಲ್ಲ || ೬ ||

ನೋಟಗಳೆಲ್ಲ ಕೂಟಗಳಲ್ಲ
ಕೂಟಗಳೆಲ್ಲ ಸುರತಗಳಲ್ಲ
ಬೀಜಗಳೆಲ್ಲ ಸಂತಾನವಲ್ಲ
ಸಂತತಿ ಎಲ್ಲ ಸಂಸ್ಕಾರವಲ್ಲ || ೭ ||

ಎಳ್ಳಲಿ ಎಣ್ಣೆ ಹಾಲಲಿ ಬೆಣ್ಣೆ
ತೆಂಗಲಿ ನೀರು ಗಣಿಯಲಿ ಚಿನ್ನಾ
ಗೊಳ್ಳಲಿ ತಿರುಳು ಇರುವಾ ರೀತಿ
ಸತ್ಯವು ಸುಲಭಕೆ ಸಿಗದೋ ಅಣ್ಣ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಶವೆಂದರೆ
Next post ದೇವಯ್ಯ ಹರವೆ ಅವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಮತ್ತು ಸಾಹಿತ್ಯ : ಒಂದು ಪ್ರತಿಕ್ರಿಯೆ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…