ದೇವರಿಗೆ ಬೈದೆ

ಒಂದು ದಿನ
ಸಿಟ್ಟಿನ ಭರದಲ್ಲಿ
ಪರಮೇಶ್ವರನಿಗೆ ನಾನು
ತಾಯಿ ಮೇಲೆ ಬೈದೆ
ಅವನುಲೋಕಾಭಿರಾಮವಾಗಿ
ಚಕ್ಕನೆ ನಕ್ಕ
ಪಕ್ಕದ ಮನೆಯ ಬೋರ
ಮುಖವನು ಬರಿದೆ ಕುಗ್ಗಿಸಿ
ಅಂಟು ಮೋರೆಯ ಗಂಟು ಹಾಕಿ
ಸವಾಲು ಮಾಡಿದ
‘ಯಾಕಯ್ಯ ನೀನು’ ಹೀಗೆ
ಆ ನಿರ್ಗುಣ, ನಿರಾಕಾರ
ಅನಾಥ ಜಗನ್ನಾಥನಿಗೆ
ಏನಾದರೂ ಅನ್ನುತ್ತಿ
ಶಬ್ದ ಜಾಲದಲಿ ಅವನ
‘ಧರ್ಮಫಣಿಯನ್ನು ಹಿಡಿಯುತ್ತಿ’
ಇನ್ನೊಮ್ಮೆ ಬೈದೆ ಬಿಗಿಯಾಗಿ
ವಿದ್ಯಾಪೀಠದ ಗೋಡೆ ಬಿರಿಯಿತು
ಮನುಷ್ಯ ಏಕೆ ಸಿಟ್ಟಾಗುತ್ತಾನೆ?
ಈ ವಿಷಯದ ಕುರಿತು ಅಲ್ಲಿ
ಶೋಧ ನಡೆದಿದೆ.
ಹೊಗೆಬತ್ತಿಯ ಧೂಮ ತುಂಬಿದ
ಹೊಟ್ಟೆಯಲ್ಲಿ
ಭಾವವಿಹ್ವಲ ಚರ್ಚೆ ನಡೆದಿದೆ
ನನ್ನ ಹುಟ್ಟು ದಿನದಂದು
ದೇವನಿಗೆ ಇನ್ನೊಮ್ಮೆ ಬೈದೆ
ಚಾಬೂಕಿನೇಟಿನಂತೆ
ಶಬ್ದದೇಟುಗಳ ಒಂದೇ ಸವನೆ
ಬಿಗಿದು ಹೇಳಿದೆ
‘ಪಾಪಿ ಮಗನೆ’ ಮುರುಕು ಭಾಕರಿಗಾಗಿ
ಸರಕು ಕಟ್ಟಿಗೆಯ ಮುರಿಸುವೆ
ತಾಯಿ ಉಟ್ಟ ಚಿಂದಿ ಬಟ್ಟೆಯ ಚೂರಿನಿಂದ
ಬಡಕಲು ಮೈಯ ಒರಸುವೆ
ಗುಟುಕು ಸೆರೆಯ ತೃಷೆಗಾಗಿ
ಕುಂಟಣಿಯನಾಗಿಸುವೆ, ದೇವ
ಆಗದಿದು ಬಾಳಲು ನಿನಗೆ
ಅದಕಾಗಿ ಮಣ್ಣಿನಲಿ ಹೋರುವ
ಶಪಿತ ಪ್ರೇಮಲ, ವತ್ಸಲ,
ತಾಯಿಯಾಗಬೇಕು’
ಬೋರ ನಕ್ಕ
ನಾನು ಬೈದಾಗ ಅವನೂ ನಕ್ಕನೇನೋ?
*****
ಮೂಲ: ಕೇಶವ ಮೆಶ್ರಾಮ
(ಮರಾಠಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದ್ದೇಳು ಎದ್ದೇಳು ಕನ್ನಡಿಗ
Next post ಕೃಷಿಕನೊಳು ಹಸುವೋ? ಕೃಷಿಕನೇ ಹಸುವೋ?

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…