Home / ಕವನ / ಕವಿತೆ / ಎದ್ದೇಳು ಎದ್ದೇಳು ಕನ್ನಡಿಗ

ಎದ್ದೇಳು ಎದ್ದೇಳು ಕನ್ನಡಿಗ

ಎದ್ದೇಳು ಎದ್ದೇಳು ಕನ್ನಡಿಗ
ಎಚ್ಚರದಿಂದೇಳು ಕನ್ನಡಿಗ
ಉದಯವಾಯಿತು ಕನ್ನಡ ನಾಡು ||
ಉದಯರಾಗಲಹರಿಯಿಂ ಹಾಡು
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು ||

ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||
ಭಾರಿಸಿತು ಕನ್ನಡ ಡಿಂಡಿಮವ
ಕಟ್ಟಿತು ಹಸಿರು ತೋರಣವ
ಸಂಭ್ರಮಿಸಿತು ನವಕರ್ನಾಟಕ
ನವ ಚೈತನ್ಯದ ನೀಡಿತು || ಜ ||

ಕೆಂಪು ಹಳದಿ ಬಾವುಟ
ಕೆಚ್ಚೆದೆಯನು ಸಾರಿ ಕ್ರಾಂತಿ
ಶಾಂತಿ ದಿವ್ಯ ಮೊಗವ ತೋರಿ
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನು ||

ಸಾವಿರಾರು ವರುಷಗಳ ಹರುಷ
ಹೊನಲು ಹಿಗ್ಗಿನೊಲುಮೆಯಲಿ
ಕುಣಿದು ನಲಿದು ಭಾವೈಕ್ಯತೆಯಲಿ ಕೂಡಿ
ಜಯಕನ್ನಡ ಜಯಕನ್ನಡ
ಜಯ ಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||

ಗಂಗ ಕದಂಬಾದಿ ರಾಷ್ಟ್ರಕೂಟ
ಹೊಯ್ಸಳಾಧೀಶರು ಕಟ್ಟಿದ
ವೀರ ಧೀರ ತ್ಯಾಗ ಕಲಿಗಳ
ಭವ್ಯ ನಾಡು ನುಡಿಯು ಕನ್ನಡ
ಜಯ ಕನ್ನಡ ಜಯ ಕನ್ನಡ
ಜಯ ಕನ್ನಡವೇ ನಮ್ಮುಸಿರು
ಹಚ್ಚಿರಿ ಕನ್ನಡದ ಹಣತೆಯನು
ಮೊಳಗಿಸಿ ಕನ್ನಡ ಜಯ ಭೇರಿಯನ್ನು ||

ಮುನ್ನುಗ್ಗಿದೆ ಮುನ್ನಡೆದಿದೆ
ಕಗ್ಗತ್ತಲ ಮೌಢ್ಯಗಳ ಕಳಚಿ
ವಿಜ್ಞಾನ ದೀವಿಗೆಯ ಹಚ್ಚಿ
ಅಭಿಮಾನ ಸ್ವಾಭಿಮಾನದಿಂ
ನುಡಿದಿದೆ ಜಯಕನ್ನಡ
ಜಯ ಕನ್ನಡ ಜಯಕನ್ನಡ
ಜಯಕನ್ನಡವೇ ನಮ್ಮುಸಿರು
ಬೆಳಗಿರಿ ಕನ್ನಡ ಜೋತಿಯನು
ಮೊಳಗಿಸಿ ಕನ್ನಡ ಜಯಭೇರಿಯನ್ನು ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...