Home / ಕವನ / ಕವಿತೆ / ಬೆಟ್ಟಗಳ ನಡುವಲಿ

ಬೆಟ್ಟಗಳ ನಡುವಲಿ

ಮಲೆನಾಡಿನ ಸಿರಿಸೊಬಗಲಿ…
ಬೆಟ್ಟಗಳ ಏಕಾಂತದ ನಡುವಲಿ
ಸುತ್ತಲಿನ ಗ್ರಾಮಗಳಿಗೆ…
ಬಹು ದೂರವಾಗಿತ್ತು ಆ ಊರು

ಸರಕಾರ ಮನ್ನಣೆಯಲಿ
ಶಾಲೆಯೊಂದು ನಡೆದಿತ್ತು
ತಾಯಿ, ಗಡಿಗಳೆಂಬ ದ್ವಿಭಾಷಾ
ಶಿಕ್ಷಕರನು ಹೊಂದಿತ್ತು
ಮಾತುಗಾರನ ಹೊಗೆ ಉಗಳುವರ
ಮೊಗಶಾಲೆಯಾಗಿ ಕಲಿಸುವ ಶಾಲೆಯಿತ್ತು

ಶಾಲೆ ಮಕ್ಕಳನು
ಕಳಿಸದ ಗ್ರಾಮದ ಜನರು
ದಿನವಿಡಿ ಸುರಾಧೀನರಾಗಿರುತ್ತಿದ್ದರು
ಶಾಲೆಗೆ ಕಳಿಸಿದರೆ ನಮಗೇನಾಗಿತೆನ್ನುತ
ದನ ಸೆಗಣಿ ಕಲೆ ಹಾಕಿಸುವ
ಗುರಿಯಲಿ ಮಾತ್ರ ಮುನ್ನಡೆಯುತ್ತಿದ್ದರು

ಪರಿಸರ ಸಂಘ ದೋಷದಿ
ಮರೆತರು ಶಿಕ್ಷಕರು ಶಿಕ್ಷಣದ
ಮೂಲ ಧ್ಯೇಯೋದ್ದೇಶ ಗುರಿಗಳನು
ಕರ್ತವ್ಯ ಕತ್ತು ಹಿಸುಕುತಲಿವರು
ಹೆಮ್ಮೆಯಲಿ ಎದೆಯುಬ್ಬಿಸಿ ಇರುತಿಹರು

ಮೇಲಧಿಕಾರಿಯ ಮುದ್ದು ಮುಖವು
ವರ್ಷಕ್ಕೊಮ್ಮೆ ನೋಡಲು ಸಿಗುವದು
ಮೂರು ಅಂಕಿಯ ಖಡಕ ನೋಟೊಂದು
ಕಾಣದಂತೆ ಜೀಬಿಗೆ ಹಾಕಿದರೆ ಸಾಕು
ಆಡುವೆವು ಹರ್ಷದಲಿ ವರ್ಷವಿಡಿ
ಎನ್ನುವ ಶಿಕ್ಷಣ ಚೋರರಿಗೆ
ಶಿಕ್ಷೆ… ನಿಸರ್ಗ… ನೀಡಿತೇ!….

***

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...