Home / ಲೇಖನ / ಇತರೆ / ನಿತ್ಯ ಹಸಿರು

ನಿತ್ಯ ಹಸಿರು

ಪ್ರಿಯ ಸಖಿ,
ಮನುಷ್ಯನ ಬದುಕಿನಲ್ಲಿ ಯಾವುದು ನಿತ್ಯ ಹಸಿರಾಗಿರುತ್ತದೆ? ಮತ್ತೆ ಯಾವುದು ಬೇಗ ಬಾಡಿಹೋಗುತ್ತದೆ? ನಿನಗೆ ಗೊತ್ತೇ? ಚಿಂತಕ ಮುಸೋಲಿನಿ ಹೀಗೆ
ಹೇಳುತ್ತಾನೆ.
Beauty, Strength, Youth
are flowers but,
fading soon
duty, faith, love
are roots and
evergreen
ಸೌಂದರ್ಯ, ಶಕ್ತಿ ಮತ್ತು ಯೌವ್ವನ ಹೂವುಗಳಿದ್ದಂತೆ, ಆದರೆ ಬೇಗ ಬಾಡಿ ಹೋಗುತ್ತವೆ. ಕರ್ತವ್ಯ, ನಂಬಿಕೆ, ಶ್ರದ್ಧೆ, ಪ್ರೀತಿ ಬೇರುಗಳಿದ್ದಂತೆ. ಅವು ನಿತ್ಯ ಹಸಿರಾಗಿರುತ್ತವೆ.

ದಿನಕಳೆದಂತೆ ಕಳೆಗುಂದುವ ಅಲ್ಪಾಯುವಾದ ಸೌಂದರ್ಯ ಶಕ್ತಿ ಮತ್ತು ಯೌವನವನ್ನು ವೃದ್ಧಿಗೊಳಿಸುವತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿದರೆ ಅದರಿಂದ ಪ್ರಯೋಜನವೇನೂ ಇಲ್ಲ. ಅದು ಸಮಯ ಕಳೆದಂತೆ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ ಆದರೆ ಕರ್ತವ್ಯ, ಶ್ರದ್ಧೆ, ಪ್ರೀತಿ ಎಂಬ ಬೇರುಗಳನ್ನು ಗಟ್ಟಿಗೊಳಿಸುತ್ತಾ ಸಾಗಿದರೆ ಅದರಿಂದ ಬದುಕು ಸುಂದರವಾಗುತ್ತದೆ. ಜೊತೆಗೆ ಶಾಶ್ವತ ಆಂತರಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ. ತನ್ನ ಕರ್ತವ್ಯ, ಶ್ರದ್ಧೆ ಮತ್ತು ಪ್ರೀತಿಯಲ್ಲಿ ವಿಶ್ವಾಸವಿರಿಸಿರುವ ವ್ಯಕ್ತಿ ಸದಾ ಗೆಲ್ಲುತ್ತಲೇ ಹೋಗುತ್ತಾನೆ. ಅವನಿಗೆ ಸೋಲೆಂಬುದೇ ಇಲ್ಲ. ನಿಜವಾದ ಬದುಕಿನ ಮರ್ಮ ಅಡಗಿರುವುದೂ ಕ್ಷಣಿಕ. ಬಾಡಿಹೋಗುವ ಸೌಂದರ್ಯ, ಶಕ್ತಿ, ಯೌವನದಲ್ಲಿ ಅಲ್ಲ. ಇದನ್ನೂ ಮೀರಿ ಬದುಕಿನಲ್ಲಿ ಅನೇಕ ಮೌಲಿಕ ವಿಚಾರಗಳಿವೆ. ಅವುಗಳ ಅಳವಡಿಕೆಯಿಂದ ಮಾತ್ರ ನಾವು ಪರಿಪೂರ್ಣ ಮಾನವರಾಗಲು ಸಾಧ್ಯ ಎನ್ನುವುದನ್ನು ಅರಿತ ವ್ಯಕ್ತಿಯೇ ನಿಜಕ್ಕೂ ಧನ್ಯ. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...