Home / ಲೇಖನ / ಇತರೆ / ಇದು ಮೊದಲು

ಇದು ಮೊದಲು

ಪ್ರಿಯ ಸಖಿ
ಅನ್ನವನು ಕೊಡು ಮೊದಲು
ಬಟ್ಟೆಯನು ಕೊಂಡು ಉಡಲು
ಕಟ್ಟಿಕೊಡು ಮನೆಗಳನು
ಬಳಿಕ ನೀನು ಕವಿಯಾಗಿ ಬಾ
ನೀತಿವಿದನಾಗಿ ಬಾ
ಶಾಸ್ತ್ರಿಯಾಗಿ ಧಾರ್ಮಿಕನಾಗಿ
ಮನುಜಕತೆಯನು ಕಲಿಸು ಬಾ
ಇವನದನು ಕಲಿಯ ಬಲ್ಲ!
ಇದು ಮೊದಲು ಆಮೇಲೆ ಉಳಿದುದೆಲ್ಲ!
ಗೋಪಾಲಕೃಷ್ಣ ಅಡಿಗರ ‘ಇದು ಮೊದಲು’ ಕವನದ ಈ ಕೊನೆಯ ಸಾಲುಗಳು ಮನವನ್ನು ಹೊಕ್ಕು ಎಷ್ಟೊಂದು ಆಳವಾಗಿ ತಟ್ಟುತ್ತವೆಯಲ್ಲವೇ ಸಖಿ? ಶಾಸ್ತ್ರ,  ನೀತಿ, ತತ್ವ, ಮೌಲ್ಯ, ಕಾನೂನು, ಮಾನವೀಯತೆ ಎಷ್ಟೆಲ್ಲಾ ಬುದ್ದಿ ಹೇಳಲು ತಯಾರಾಗಿದ್ದೇವೆ ನಾವು! ಆದರೆ ಹಸಿದ ಹೊಟ್ಟೆಗೆ ಅನ್ನ ನೀಡದೇ, ಮೈ ಮುಚ್ಚಲು ಬಟ್ಟೆ ಕೊಡದೇ, ಸುರಕ್ಷಿತವಾಗಿರಲು ಮನೆಯ ನೀಡದೇ ಏನು ಹೇಳಿದರೇನು? ಎಲ್ಲ ವ್ಯರ್ಥ ಎನ್ನುತ್ತಾರೆ ಕವಿ.

ಹಸಿದ ಹೊಟ್ಟೆಯ ಮುಂದೆ, ಬದುಕಿಗೆ ಬೇಕೇಬೇಕಾದ ಕೆಲವೊಂದು ಮೂಲಭೂತ ಅವಶ್ಶಕತೆಗಳ ಮುಂದೆ ಯಾವುದೇ ನೀತಿ-ತತ್ವಗಳೂ ಬೆಲೆಯಿಲ್ಲದ್ದಾಗುತ್ತದೆ. ಹೇಗಾದರೂ ಸರಿ ಏನು ಮಾಡಿಯಾದರೂ ಸರಿ ಹೊಟ್ಟೆ ತುಂಬಿಸಿಕೊಳ್ಳುವದು, ತನ್ಮೂಲಕ ಬದುಕುಳಿಯುವುದು ಹಸಿದವನ ಗುರಿಯಾಗಿರುತ್ತದೆ. ಅಲ್ಲಿ ಯಾವುದೇ ನೀತಿ-ನಿಯಮವೂ ಅವನನ್ನು ಎಚ್ಚರಿಸುವುದಿಲ್ಲ.

ಸಖಿ, ಇಂದಿನ ಸಮಾಜದ ಭ್ರಷ್ಟತೆಗೆ ಮೂಲ ಕಾರಣವೂ ಹಸಿವೇ ಆಗಿದೆ ಎಂಬುದು ಸಮಾಜವಾದಿಗಳ ನಿಲುವು. ಹಸಿವು ಹಿಂಗದ ಲಕ್ಷಾಂತರ ಒಡಲುಗಳು ಯಾವ ಕೀಳು ಮಟ್ಟಕ್ಕಾದರೂ ಇಳಿದು ಹಸಿವು ಹಿಂಗಿಸಿಕೊಳ್ಳಲು ಹಾತೊರೆಯುತ್ತವೆ. ಅದಕ್ಕೆಂದೇ ಕವಿ ಶೇಕ್ಸ್‍ಪಿಯರ್ “ಹಸಿವು ಎಲ್ಲವನ್ನೂ ಕಲಿಸುತ್ತದೆ” ಎನ್ನುತ್ತಾನೆ. ಉತ್ತಮ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ಮನುಷ್ಯನ ಮೂಲಭೂತ ಅವಶ್ಶಕತೆಗಳನ್ನು ಪೂರೈಸಬೇಕು. ನಂತರವಷ್ಟೇ ನೀತಿ, ಕಾನೂನು, ಧರ್ಮ, ಕಲೆ, ಮಾನವೀಯತೆ ಇತ್ಯಾದಿ ಅವನಿಗೆ ಅರ್ಥವಾದಾವು. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...