Home / ಲೇಖನ / ಇತರೆ / ಇದು ಮೊದಲು

ಇದು ಮೊದಲು

ಪ್ರಿಯ ಸಖಿ
ಅನ್ನವನು ಕೊಡು ಮೊದಲು
ಬಟ್ಟೆಯನು ಕೊಂಡು ಉಡಲು
ಕಟ್ಟಿಕೊಡು ಮನೆಗಳನು
ಬಳಿಕ ನೀನು ಕವಿಯಾಗಿ ಬಾ
ನೀತಿವಿದನಾಗಿ ಬಾ
ಶಾಸ್ತ್ರಿಯಾಗಿ ಧಾರ್ಮಿಕನಾಗಿ
ಮನುಜಕತೆಯನು ಕಲಿಸು ಬಾ
ಇವನದನು ಕಲಿಯ ಬಲ್ಲ!
ಇದು ಮೊದಲು ಆಮೇಲೆ ಉಳಿದುದೆಲ್ಲ!
ಗೋಪಾಲಕೃಷ್ಣ ಅಡಿಗರ ‘ಇದು ಮೊದಲು’ ಕವನದ ಈ ಕೊನೆಯ ಸಾಲುಗಳು ಮನವನ್ನು ಹೊಕ್ಕು ಎಷ್ಟೊಂದು ಆಳವಾಗಿ ತಟ್ಟುತ್ತವೆಯಲ್ಲವೇ ಸಖಿ? ಶಾಸ್ತ್ರ,  ನೀತಿ, ತತ್ವ, ಮೌಲ್ಯ, ಕಾನೂನು, ಮಾನವೀಯತೆ ಎಷ್ಟೆಲ್ಲಾ ಬುದ್ದಿ ಹೇಳಲು ತಯಾರಾಗಿದ್ದೇವೆ ನಾವು! ಆದರೆ ಹಸಿದ ಹೊಟ್ಟೆಗೆ ಅನ್ನ ನೀಡದೇ, ಮೈ ಮುಚ್ಚಲು ಬಟ್ಟೆ ಕೊಡದೇ, ಸುರಕ್ಷಿತವಾಗಿರಲು ಮನೆಯ ನೀಡದೇ ಏನು ಹೇಳಿದರೇನು? ಎಲ್ಲ ವ್ಯರ್ಥ ಎನ್ನುತ್ತಾರೆ ಕವಿ.

ಹಸಿದ ಹೊಟ್ಟೆಯ ಮುಂದೆ, ಬದುಕಿಗೆ ಬೇಕೇಬೇಕಾದ ಕೆಲವೊಂದು ಮೂಲಭೂತ ಅವಶ್ಶಕತೆಗಳ ಮುಂದೆ ಯಾವುದೇ ನೀತಿ-ತತ್ವಗಳೂ ಬೆಲೆಯಿಲ್ಲದ್ದಾಗುತ್ತದೆ. ಹೇಗಾದರೂ ಸರಿ ಏನು ಮಾಡಿಯಾದರೂ ಸರಿ ಹೊಟ್ಟೆ ತುಂಬಿಸಿಕೊಳ್ಳುವದು, ತನ್ಮೂಲಕ ಬದುಕುಳಿಯುವುದು ಹಸಿದವನ ಗುರಿಯಾಗಿರುತ್ತದೆ. ಅಲ್ಲಿ ಯಾವುದೇ ನೀತಿ-ನಿಯಮವೂ ಅವನನ್ನು ಎಚ್ಚರಿಸುವುದಿಲ್ಲ.

ಸಖಿ, ಇಂದಿನ ಸಮಾಜದ ಭ್ರಷ್ಟತೆಗೆ ಮೂಲ ಕಾರಣವೂ ಹಸಿವೇ ಆಗಿದೆ ಎಂಬುದು ಸಮಾಜವಾದಿಗಳ ನಿಲುವು. ಹಸಿವು ಹಿಂಗದ ಲಕ್ಷಾಂತರ ಒಡಲುಗಳು ಯಾವ ಕೀಳು ಮಟ್ಟಕ್ಕಾದರೂ ಇಳಿದು ಹಸಿವು ಹಿಂಗಿಸಿಕೊಳ್ಳಲು ಹಾತೊರೆಯುತ್ತವೆ. ಅದಕ್ಕೆಂದೇ ಕವಿ ಶೇಕ್ಸ್‍ಪಿಯರ್ “ಹಸಿವು ಎಲ್ಲವನ್ನೂ ಕಲಿಸುತ್ತದೆ” ಎನ್ನುತ್ತಾನೆ. ಉತ್ತಮ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ಮನುಷ್ಯನ ಮೂಲಭೂತ ಅವಶ್ಶಕತೆಗಳನ್ನು ಪೂರೈಸಬೇಕು. ನಂತರವಷ್ಟೇ ನೀತಿ, ಕಾನೂನು, ಧರ್ಮ, ಕಲೆ, ಮಾನವೀಯತೆ ಇತ್ಯಾದಿ ಅವನಿಗೆ ಅರ್ಥವಾದಾವು. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...