Home / ಕವನ / ಕವಿತೆ / ಆಸೆ – ಆಘಾತ

ಆಸೆ – ಆಘಾತ

ನಿತ್ಯ ಸಾಗುತಲಿಹುದು ಜೀವನ ಭರದಿ
ಬೇಕು ಬೇಡಗಳ ತೆಗೆದು ಹಾಕುತಲಿ
ಏರಿಳಿತಗಳ ಮೆಲ್ಲನೆ ದಾಟುತಲಿ
ನಿತ್ಯವೂ ಉರುಳುತಿಹುದು ಬಾಳ ಬಂಡಿ
ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ!

ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು
ಆದರೂ ತೀರದಾ ನಾನಾ ಬಯಕೆಗಳು
ಬದುಕು ನಡೆಸಲು ನಾನಾ ವೇಷಗಳು
ಗಂಡು ಹೆಣ್ಣೆನ್ನದೇ ದುಡಿವರು ಹಗಲಿರುಳು
ಸಾಧಿಸುವ ಛಲವೊಂದೇ ನಿನ್ನ ಉಸಿರಾಗಿರಲು

ಬೇಗನೆ ಮಾಡುವ ಭರದಲಿ ಯಂತ್ರಗಳ ತಂದೆ
ಬೇಗನೆ ಸೇರುವ ತವಕದಲಿ ವಾಹನಗಳ ತಂದೆ
ನಿನ್ನ ಸ್ವಾರ್ಥಕ್ಕಾಗಿ ನಿಸರ್ಗದ ವಿರುದ್ಧ ನೀನಡೆದೆ
ನೀ ಮಾಡುವ ಕೆಲಸಗಳೆಲ್ಲಾ ಆಯ ತಪ್ಪಿದರೆ
ಬಲಿಯಾಗುವ ಮೊದಲ ಜೀವ ನಿನ್ನದೇನೆ!

ಆಸೆಗಳ ಬೆನ್ಹತ್ತಿ ನೀ ಓಡುತಲಿರುವೆ
ಹಗಲು ರಾತ್ರಿಯನ್ನದೇ ದುಡಿಯುತಲಿರುವೆ
ಆಘಾತಗಳ ಅರಿವಿಲ್ಲದೇ ನೀ ಸಾಗುತಲಿರುವೆ
ಸಾವನ್ನೂ ಲೆಕ್ಕಿಸದೇ ಮುನ್ನಡೆಯುತಿರುವೆ
ಓಡುವ ಭರದಲಿ ಎಡವಿ ಬಿದ್ದರೆ ನೀ ಸಾಯುವೆ!

ಆಸೆಗಳ ಅದುಮಿ ಇಟ್ಟುಕೊ ಮನುಜ
ದುರಾಸೆಯೇ ದುಃಖದ ಮೂಲ ಕಣಜ
ಬದುಕು ಒಂದು ಸುಂದರ ಪ್ರಪಂಚ
ದುಡುಕಿ ಹೋದರೆ ಮತ್ತೆಂದೂ ಬಾರದು ಜೀವ
ಅರಿತು ನಡೆದರೆ ನಿನ್ನ ಬಾಳು ಸುಖಾಂತ್ಯ ನಿಜ

ಭೂಮಿಯಲ್ಲಿ ಜನಿಸಿದ ಮಾನವರು
ಕೋಟಿ, ಕೋಟಿ,
ಭೂಮಿಯಲ್ಲಿ ಬದುಕಿದ್ದರೂ ಸತ್ತಂತೆ ಬದುಕುವ
ಜನರು ಹಲವಾದರೆ,
ಭೂಮಿಯಲ್ಲಿ ಸತ್ತರೂ ಕೂಡ ಬದುಕಿದವರಂತೆ
ಅಮರರಾಗಿರುವ ಜನ ಕೆಲವರು
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...