Home / ಕವನ / ಕವಿತೆ / ಆಸೆ – ಆಘಾತ

ಆಸೆ – ಆಘಾತ

ನಿತ್ಯ ಸಾಗುತಲಿಹುದು ಜೀವನ ಭರದಿ
ಬೇಕು ಬೇಡಗಳ ತೆಗೆದು ಹಾಕುತಲಿ
ಏರಿಳಿತಗಳ ಮೆಲ್ಲನೆ ದಾಟುತಲಿ
ನಿತ್ಯವೂ ಉರುಳುತಿಹುದು ಬಾಳ ಬಂಡಿ
ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ!

ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು
ಆದರೂ ತೀರದಾ ನಾನಾ ಬಯಕೆಗಳು
ಬದುಕು ನಡೆಸಲು ನಾನಾ ವೇಷಗಳು
ಗಂಡು ಹೆಣ್ಣೆನ್ನದೇ ದುಡಿವರು ಹಗಲಿರುಳು
ಸಾಧಿಸುವ ಛಲವೊಂದೇ ನಿನ್ನ ಉಸಿರಾಗಿರಲು

ಬೇಗನೆ ಮಾಡುವ ಭರದಲಿ ಯಂತ್ರಗಳ ತಂದೆ
ಬೇಗನೆ ಸೇರುವ ತವಕದಲಿ ವಾಹನಗಳ ತಂದೆ
ನಿನ್ನ ಸ್ವಾರ್ಥಕ್ಕಾಗಿ ನಿಸರ್ಗದ ವಿರುದ್ಧ ನೀನಡೆದೆ
ನೀ ಮಾಡುವ ಕೆಲಸಗಳೆಲ್ಲಾ ಆಯ ತಪ್ಪಿದರೆ
ಬಲಿಯಾಗುವ ಮೊದಲ ಜೀವ ನಿನ್ನದೇನೆ!

ಆಸೆಗಳ ಬೆನ್ಹತ್ತಿ ನೀ ಓಡುತಲಿರುವೆ
ಹಗಲು ರಾತ್ರಿಯನ್ನದೇ ದುಡಿಯುತಲಿರುವೆ
ಆಘಾತಗಳ ಅರಿವಿಲ್ಲದೇ ನೀ ಸಾಗುತಲಿರುವೆ
ಸಾವನ್ನೂ ಲೆಕ್ಕಿಸದೇ ಮುನ್ನಡೆಯುತಿರುವೆ
ಓಡುವ ಭರದಲಿ ಎಡವಿ ಬಿದ್ದರೆ ನೀ ಸಾಯುವೆ!

ಆಸೆಗಳ ಅದುಮಿ ಇಟ್ಟುಕೊ ಮನುಜ
ದುರಾಸೆಯೇ ದುಃಖದ ಮೂಲ ಕಣಜ
ಬದುಕು ಒಂದು ಸುಂದರ ಪ್ರಪಂಚ
ದುಡುಕಿ ಹೋದರೆ ಮತ್ತೆಂದೂ ಬಾರದು ಜೀವ
ಅರಿತು ನಡೆದರೆ ನಿನ್ನ ಬಾಳು ಸುಖಾಂತ್ಯ ನಿಜ

ಭೂಮಿಯಲ್ಲಿ ಜನಿಸಿದ ಮಾನವರು
ಕೋಟಿ, ಕೋಟಿ,
ಭೂಮಿಯಲ್ಲಿ ಬದುಕಿದ್ದರೂ ಸತ್ತಂತೆ ಬದುಕುವ
ಜನರು ಹಲವಾದರೆ,
ಭೂಮಿಯಲ್ಲಿ ಸತ್ತರೂ ಕೂಡ ಬದುಕಿದವರಂತೆ
ಅಮರರಾಗಿರುವ ಜನ ಕೆಲವರು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...