Home / ಲೇಖನ / ಇತರೆ / ಎಲ್ಲವೂ ಬೇಕು ನನಗೆ!

ಎಲ್ಲವೂ ಬೇಕು ನನಗೆ!

ಪ್ರಿಯ ಸಖಿ,
ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ
ದಾರಿ ನೂರಾರಿವೆ ಬೆಳಕಿನರಮನೆಗೆ
ಕವಿ. ಜಿ.ಎಸ್. ಶಿವರುದ್ರಪ್ಪನವರ ‘ಹಿನ್ನುಡಿ’ ಎಂಬ ಕವನದ ಈ ಸಾಲುಗಳನ್ನು ಓದಿರುವೆಯೊ ಸಖಿ? ವ್ಯಕ್ತಿ ನನಗೆ ಇದೇ ಸಾಕು ‘ಇಷ್ಟೇ ಸಾಕು’ ಈ ಸಿದ್ಧಾಂತವೇ ಸರಿ; ತನ್ನ ಧರ್ಮವೇ ‘ಶ್ರೇಷ್ಠ’ ಎಂಬೆಲ್ಲಾ ಮಿತಿಗಳಿಗೆ ಬಿದ್ದಾಗ ಅವನ ಮನಸ್ಸು ಸಂಕುಚಿತಗೊಳ್ಳುತ್ತಾ ಸಾಗುತ್ತದೆ. ಆದ್ದರಿಂದಲೇ ಕವಿ ‘ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ’ ಎನ್ನುತ್ತಾರೆ ಮುಂದುವರೆಯುತ್ತಾ ಹೀಗೆಂದುಕೊಳ್ಳುತ್ತಾರೆ.
ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ
ನನಗಿಲ್ಲ ಇದೇ ಸರಿ ಇಷ್ಟೇ ಸರಿ ಎನ್ನುವ ಪಂತ
ನಾ ಬಲ್ಲೆ ಇವು ಎಲ್ಲ ಏರುವೆಯ
ಒಂದೊಂದು ಹಂತ
ಮನಸ್ಸು ವಿಶಾಲವಾದಾಗ ಎಲಾ ತತ್ವ ಸಿದ್ಧಾಂತಗಳಲ್ಲೂ ತನಗೆ ಬೇಕಾದ ಒಳಿತನ್ನು ಹುಡುಕಲಾರಂಭಿಸುತ್ತದೆ. ಬೆಳಕಿನರಮನೆ ಒಂದೇ? ವಿವೇಕ ಮತ್ತು ಜ್ಞಾನದ ಗುರಿ ಒಂದೇ ಆದರೂ ಅದನ್ನು ತಲುಪಲು ನೂರಾರು ದಾರಿಗಳಿವೆ. ಇವುಗಳೆಲ್ಲವೂ ಅರಿವಿನ ಒಂದೊಂದು ಮೆಟ್ಟಿಲುಗಳು. ತನ್ನದೇ ಸರಿ ಎಂಬ ಅಹಂಕಾರದ ಮಿತಿಯನ್ನು ಹಾಕಿಕೊಂಡಾಗ ವ್ಯಕ್ತಿ ಬಾವಿ ಕಪ್ಪೆಯಾಗಿ ಬಿಡುತ್ತಾನೆ. ಆ ಮಿತಿಯೇ ಅವನ ಸೋಲಾಗುತ್ತದೆ ಕವನದ ಕೊನೆಯಲ್ಲಿ ಕವಿ,
ನೂರಾರು ಭಾವದ ಬಾವಿ; ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ
ನಮಗೆ ಬೇಕಾದದ್ದು ದಾಹ ಪರಿಹಾರ!
ಎನ್ನುತ್ತಾರೆ. ಎಂಥಹಾ ಅರ್ಥಪೂರ್ಣ ಮಾತಲ್ಲವೇ ಸಖೀ? ನಮಗೆ ಬೇಕಾಗಿರುವುದು ಸಿಹಿ ನೀರಷ್ಟೆ ! ಆದರೆ ನಾವು ಪಾತ್ರೆಯಾಕಾರಗಳ ಕುರಿತು ವ್ಯರ್ಥ ಜಗಳ ಶುರುವಿಟ್ಟುಕೊಂಡು ಎಷ್ಟೊಂದು ತತ್ವ, ನೀತಿ, ಮೌಲ್ಯ, ಧರ್ಮ, ಗುಣಗಳಿದ್ದೂ ‘ನಮ್ಮದೇ ಸರಿ’ ಎಂಬ ಒಣ ಪ್ರತಿಷ್ಠೆಯನ್ನು ಮುಂದೆ ಮಾಡಿಕೊಂಡು ಒಳತಿರುಳನ್ನು ಬಿಟ್ಟು ಮೇಲಿನ ಕರಟಕ್ಕಾಗಿ ಕಾದಾಡಿ ನಿರ್ವೀರ್ಯರಾಗುತ್ತಿದ್ದೇವೆ. ನಮಗೆ ಬೇಕಾದದ್ದು ದಾಹ ಪರಿಹಾರ. ಅದಕ್ಕೆ ಯಾವಾಗ ಯಾವ ಬಾವಿಯ ಸಿಹಿ ನೀರಾದರೇನು? ಅಲ್ಲವೆ ಸಖಿ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್