Home / ಲೇಖನ / ಇತರೆ / ಎಲ್ಲವೂ ಬೇಕು ನನಗೆ!

ಎಲ್ಲವೂ ಬೇಕು ನನಗೆ!

ಪ್ರಿಯ ಸಖಿ,
ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ
ದಾರಿ ನೂರಾರಿವೆ ಬೆಳಕಿನರಮನೆಗೆ
ಕವಿ. ಜಿ.ಎಸ್. ಶಿವರುದ್ರಪ್ಪನವರ ‘ಹಿನ್ನುಡಿ’ ಎಂಬ ಕವನದ ಈ ಸಾಲುಗಳನ್ನು ಓದಿರುವೆಯೊ ಸಖಿ? ವ್ಯಕ್ತಿ ನನಗೆ ಇದೇ ಸಾಕು ‘ಇಷ್ಟೇ ಸಾಕು’ ಈ ಸಿದ್ಧಾಂತವೇ ಸರಿ; ತನ್ನ ಧರ್ಮವೇ ‘ಶ್ರೇಷ್ಠ’ ಎಂಬೆಲ್ಲಾ ಮಿತಿಗಳಿಗೆ ಬಿದ್ದಾಗ ಅವನ ಮನಸ್ಸು ಸಂಕುಚಿತಗೊಳ್ಳುತ್ತಾ ಸಾಗುತ್ತದೆ. ಆದ್ದರಿಂದಲೇ ಕವಿ ‘ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ’ ಎನ್ನುತ್ತಾರೆ ಮುಂದುವರೆಯುತ್ತಾ ಹೀಗೆಂದುಕೊಳ್ಳುತ್ತಾರೆ.
ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ
ನನಗಿಲ್ಲ ಇದೇ ಸರಿ ಇಷ್ಟೇ ಸರಿ ಎನ್ನುವ ಪಂತ
ನಾ ಬಲ್ಲೆ ಇವು ಎಲ್ಲ ಏರುವೆಯ
ಒಂದೊಂದು ಹಂತ
ಮನಸ್ಸು ವಿಶಾಲವಾದಾಗ ಎಲಾ ತತ್ವ ಸಿದ್ಧಾಂತಗಳಲ್ಲೂ ತನಗೆ ಬೇಕಾದ ಒಳಿತನ್ನು ಹುಡುಕಲಾರಂಭಿಸುತ್ತದೆ. ಬೆಳಕಿನರಮನೆ ಒಂದೇ? ವಿವೇಕ ಮತ್ತು ಜ್ಞಾನದ ಗುರಿ ಒಂದೇ ಆದರೂ ಅದನ್ನು ತಲುಪಲು ನೂರಾರು ದಾರಿಗಳಿವೆ. ಇವುಗಳೆಲ್ಲವೂ ಅರಿವಿನ ಒಂದೊಂದು ಮೆಟ್ಟಿಲುಗಳು. ತನ್ನದೇ ಸರಿ ಎಂಬ ಅಹಂಕಾರದ ಮಿತಿಯನ್ನು ಹಾಕಿಕೊಂಡಾಗ ವ್ಯಕ್ತಿ ಬಾವಿ ಕಪ್ಪೆಯಾಗಿ ಬಿಡುತ್ತಾನೆ. ಆ ಮಿತಿಯೇ ಅವನ ಸೋಲಾಗುತ್ತದೆ ಕವನದ ಕೊನೆಯಲ್ಲಿ ಕವಿ,
ನೂರಾರು ಭಾವದ ಬಾವಿ; ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ
ನಮಗೆ ಬೇಕಾದದ್ದು ದಾಹ ಪರಿಹಾರ!
ಎನ್ನುತ್ತಾರೆ. ಎಂಥಹಾ ಅರ್ಥಪೂರ್ಣ ಮಾತಲ್ಲವೇ ಸಖೀ? ನಮಗೆ ಬೇಕಾಗಿರುವುದು ಸಿಹಿ ನೀರಷ್ಟೆ ! ಆದರೆ ನಾವು ಪಾತ್ರೆಯಾಕಾರಗಳ ಕುರಿತು ವ್ಯರ್ಥ ಜಗಳ ಶುರುವಿಟ್ಟುಕೊಂಡು ಎಷ್ಟೊಂದು ತತ್ವ, ನೀತಿ, ಮೌಲ್ಯ, ಧರ್ಮ, ಗುಣಗಳಿದ್ದೂ ‘ನಮ್ಮದೇ ಸರಿ’ ಎಂಬ ಒಣ ಪ್ರತಿಷ್ಠೆಯನ್ನು ಮುಂದೆ ಮಾಡಿಕೊಂಡು ಒಳತಿರುಳನ್ನು ಬಿಟ್ಟು ಮೇಲಿನ ಕರಟಕ್ಕಾಗಿ ಕಾದಾಡಿ ನಿರ್ವೀರ್ಯರಾಗುತ್ತಿದ್ದೇವೆ. ನಮಗೆ ಬೇಕಾದದ್ದು ದಾಹ ಪರಿಹಾರ. ಅದಕ್ಕೆ ಯಾವಾಗ ಯಾವ ಬಾವಿಯ ಸಿಹಿ ನೀರಾದರೇನು? ಅಲ್ಲವೆ ಸಖಿ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...