Home / ಲೇಖನ / ವಿಜ್ಞಾನ / ಹೊಸ ತಳಿಯ ಜಾಮ್! ಜೆಲ್ಲಿ!!

ಹೊಸ ತಳಿಯ ಜಾಮ್! ಜೆಲ್ಲಿ!!

ಹಸಿರು ಸೂರ್ಯಕಾಂತಿ ಹೂಗಳು ಸಂತೃಪ್ತವಾಗಿ ಮತ್ತಷ್ಟು ಪೋಶಕಾಂಶಗಳಿಂದ ಕಂಗೊಳಿಸಲು ಹಸುವಿನ ಹಾಲು, ರಂಗುರಂಗಿನ ಹೂವಿನ ಪಕಳೆಗಳು ನಿಮಗೆ ದೊರೆಯಲು ಇನ್ನೂ ೫೦ ವರ್ಷಗಳಷ್ಟೇ ಸಾಕು. ಆಹಾರ ಸತ್ವ ಸಮೃದ್ಧ ಟೊಮ್ಯಾಟೊ ಹೊಸ ತಳಿ ಈಗಾಗಲೇ ಅಮೇರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಲಿವೆ. ಕೃಷಿ ಉತ್ಪಾದನೆಯ ಶೇ. ೫೦ ರಷ್ಟು ಪದಾರ್ಥಗಳು ಮಾರುಕಟ್ಟೆಯನ್ನು ತಲುಪಲು ಹಾದಿಯಲ್ಲಿಯೇ ಕೊಳೆತು ರೈತರಿಗೆ ನಷ್ಟವನ್ನುಂಟುಮಾಡುತ್ತವೆ. ಕಿರಿದಾಗುತ್ತಿರುವ ಇಂದಿನ ವಿಶ್ವದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ದೂರದೇಶದ ಹಣ್ಣು, ತರಕಾರಿ, ಹಾಲು, ಮೀನುಗಳನ್ನು ಸಾಗಿಸಲು ಇರುವ ಸಮಸ್ಯೆಯನ್ನು ಆ ವಸ್ತು ಕೆಡದಂತೆ ಬಹುಕಾಲ ತಾಳಿಕೆ ಗುಣಗಳನ್ನು ಬೆಳೆಯಲ್ಲಿಯೇ ಸೇರಿಸುವ ಪ್ರಯತ್ನ ನಡೆಯುತ್ತಲಿದೆ. ಮಾರುಕಟ್ಟೆಯಲ್ಲಿಯ ಬೇಡಿಕೆಯನ್ನು ಗಮನಿಸಿ ಹಣ್ಣಾಗಿಸಲು ಇಥಲೀನ್‌ನಂತಹ ಅನಿಲವನ್ನು ಹಾಯಿಸಿ (ಹೂವಿನ ಕಾಯಿ, ಬಾಳೆಕಾಯಿ, ಕಿತ್ತಳೆ) ಕೆಲವು ಬಲಿತ/ ಬಲಿಯದ ಕಾಯಿಗಳನ್ನು ಹಣ್ಣುಮಾಡಲಾಗುತ್ತದೆ. ಇದರ ಪರಿಣಾಮವಾಗಿ ಸಂಪೂರ್ಣ ರುಚಿಯನ್ನು ಬದಲಿಸುವ ಕಾಯಿಗಳು ನೀಡವು. ಈ ಹಣ್ಣುಗಳ ತಳಿಯನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಲು ವಂಶಾಣುಗಳನ್ನು ಬಳಿಸಿ ಸುದೀರ್ಘಕಾಲ ಇಡಬಹುದು. ಕೊಳೆಯದ ಟೊಮ್ಯಾಟೋ ತಳಿಯನ್ನು ಈಗಾಗಲೇ ಅಮೇರಿಕೆಯ “ಪ್ಲಾದ್ರ್ ಸಾದ್ರ್” ಜೈವಿಕ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಟೊಮ್ಯಾಟೋ ಇತರ ತಳಿಗಳಿಗಿಂತ ಹೆಚ್ಚು ತಾಳಿಕೆ ಮತ್ತು ರುಚಿಯನ್ನು ನಿಧಾನಗೊಳಿಸುತ್ತವೆ. ಯುರೋಪಿನ ಮಾರುಕಟ್ಟೆಯಲ್ಲಿ ಸಾಸ್, ಜಾಮ್ ಜೆಲ್ಲಿ ಮತ್ತು ಕೆಚಪ್‌ಗಳು ಅಟ್ಲಾಂಟಿಕ್ ಸಾಗರವನ್ನು ದಾಟಿ ನೀಡುತ್ತವೆ. ಎಣ್ಣೆಯಲ್ಲಿ ಕರಿದ ‘ಆಲೂ ಚಿಪ್ಸ್‌’ಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಇವುಗಳನ್ನು ಬಹುಕಾಲ ಕೆಡದಂತೆ ಇಡಬಹುದು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...