Home / ಲೇಖನ / ವಿಜ್ಞಾನ / ಸಕ್ಕರೆ ಕಾಯಿಲೆಗೆ ಸಿದ್ದೌಷಧಿ

ಸಕ್ಕರೆ ಕಾಯಿಲೆಗೆ ಸಿದ್ದೌಷಧಿ

ನಾವು ದಿನನಿತ್ಯದಲ್ಲಿ ಸಕ್ಕರೆ ಕಾಯಿಲೆ ಉಳ್ಳವರ ಸ್ಥಿತಿಯನ್ನು ನೋಡಿ ‘ಅಯ್ಯೋಪಾಪ’ ಎನ್ನುತ್ತೇವೆ. ಹೋಳಿಗೆ ತಿನ್ನುವಂತಿಲ್ಲ. ಸಿಹಿಪದಾರ್ಥಗಳನ್ನು ತಿನ್ನುವಂತಿಲ್ಲ. ಸಕ್ಕರೆರಹಿತ ಟೀ ಕಾಫಿಯನ್ನು ಗುಟುಕರಿಸುತ್ತ ಸಿಹಿಯನ್ನೇ ಉಪಯೋಗಿಸದ ಜನರಿದ್ದಾರೆ. ಮುಂದೊಂದು ದಿನ ಸಕ್ಕರೆ ಕಾಯಿಲೆ ಬರಬಾರದೆಂಬ ಭೀತಿಯಿಂದ ಮೊದಲೆ ಸಿಹಿಯನ್ನು ವರ್ಜಿಸುವರೂ ಇದ್ದಾರೆ. ಇದೊಂದು ತರಹ ನಿಸಾರ ಜೀವನ. ಈ ಕಾಯಿಲೆಗೆ ಕಹಿಯಾದ ಹಾಗಲಕಾಯಿ ಪಲ್ಯ, ಗೊಜ್ಜನ್ನೂ ಪ್ರತಿದಿನ ಬಳೆಸಿದರೆ ಈ ಕಾಯಿಲೆಗುಣ ಮುಖವಾಗುವುದೆಂದು ಕ್ರಿ.ಶ. ೬೫೦ ರಲ್ಲಿಯೇ ಪುರಾತನ ವೈದ್ಯ ಶುಶ್ರೂತ ಹೇಳಿದ್ದರು. ಆದರೆ ವರ್ಷಕ್ಕೆ ಒಂದೋ ಎರಡೋ ಬಾರಿ ಹಾಗಲ ಕಾಯಿಯನ್ನು ಉಪಯೋಗಿಸುವುದೇ ದುಸ್ತರ. ಕಹಿ ಕಹಿ. ವರ್ಷವಿಡೀ ದಿನದ ಪ್ರತಿ ಊಟ, ತಿಂಡಿಯಲ್ಲಿ ಹಾಗಲಕಾಯಿಯನ್ನು ಬಳೆಸಲು ಸುತಾರಾಂ ಸಾಧ್ಯವಿಲ್ಲ.

ಯುರೋಪಿನ ಸೊಜಿವಿಟ್ S.L..ಕಂಪನಿಯ ಆಹಾರ ತಜ್ಞರು ಹಾಗಲಕಾಯಿಯಲ್ಲಿ ಯಾವ ಔಷಧಿಗಳು ರಕ್ತದಲ್ಲಿನ ಮಿತಿಮೀರಿದ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ಬಗ್ಗೆ ತೀವ್ರ ಸಂಶೋಧನೆ ನಡೆಯಿಸಿ ಕಡೆಗೆ “ಪಾಲಿಪೆಪ್ಟೈಡ್ಸ್”ಗಳನ್ನು ಪೌಡರ್ ಮಾಡಿ ಕಾಪ್ಯೂಲ್ಸ್ (ಗುಳಿಗೆಗಳು) ಗಳನ್ನು ಹೊರತಂದರು. ಇಂಥಹ ಗುಳಿಗೆಗಳನ್ನು ಮಧುಮೇಹಿಗಳು ಯಾವ ಕಹಿ ಇಲ್ಲದೇ ಮುಖ ಕಿವಿಚಿಕೊಳ್ಳದೇ ಈ ಮಾತ್ರೆಗಳನ್ನು ನುಂಗಿ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಈ ಮಾತ್ರೆಗಳಲ್ಲಿ ಹಾಗಲಕಾಯಿ ಜೀವಸತ್ವ ಅಂತರ್ಗತವಾಗಿರುತ್ತದೆ. ಈ ಔಷಧಿಯ ಅಂಶಗಳು ನಮ್ಮ ದೇಹದಲ್ಲಿ Insulin ಉತ್ಪತ್ತಿ ಹೆಚ್ಚಿಸುವುದಲ್ಲದೇ ದೇಹದ ಪ್ರತಿಯೊಂದು ಜೀವಕೋಶಗಳಲ್ಲಿ ಗ್ಲೂಕೋಸ್ Metabolisms ಕ್ರಿಯೆಯನ್ನು ಹೆಚ್ಚಿಸುತ್ತವೆ. ಇನ್ನೊಂದು ಔಷಧಿ ಎಂದರೆ “ಮಧುನಾಶಿನಿ” ಎಲೆಯಲ್ಲಿನ ಔಷಧೀಯ ಅಂಶ. ನಾಲಿಗೆ ಹಾಗೂ ಕರುಳಗಳ ಗ್ಲೂಕೋಸ್ Receptor ಗಳನ್ನೂ ತಡೆ ಹಿಡಿದು ತದನಂತರ ಆಹಾರದಲ್ಲಿನ ಗ್ಲೂಕೋಸನ್ನು ದೇಹಕ್ಕೆ ಸೇರದಂತೆ ಮಾಡಿ ರಕ್ತದ ಗ್ಲೂಕೊಸ್ ಮಟ್ಟವು ನಿಯಂತ್ರಿಸುವುದು. ಈ ಔಷಧಿಯೂ ಕೂಡ ಕ್ಯಾಪ್ಸೂಲ್‌ರೂಪದಲ್ಲಿ Sweet A way ಹೆಸರಿನಲ್ಲಿ ದೊರೆಯುತ್ತದೆ.

ಮೇಲಿನ ಎರಡು ತರದ ಮಾತ್ರೆಗಳು ಭಾರತದಲ್ಲಿ ಸಿಗುತ್ತದೆ. ಸಕ್ಕರೆ ಕಾಯಿಲೆಯನ್ನು ಆರಂಭದಲ್ಲಿಯೇ ಮುಂದೂಡಲು, ನಿಯಂತ್ರಿಸಲು ಒಳ್ಳೆಯ ಅವಕಾಶಕ್ಕಾಗಿ ಈ ಮಾತ್ರೆಗಳನ್ನು ಬಳಸಿದರೆ ದಿವ್ಯೌಷಧವಾಗಿ ಕಾಯಿಲೆ ಗುಣವಾಗುತ್ತದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್