Home / ಲೇಖನ / ವಿಜ್ಞಾನ / ಕೊಂಬಿಲ್ಲದ ಹಸುಗಳ ಸೃಷ್ಟಿ !

ಕೊಂಬಿಲ್ಲದ ಹಸುಗಳ ಸೃಷ್ಟಿ !

ಸಾಮಾನ್ಯವಾಗಿ ನಾವು ಮೇಕೆ, ಹೋತ, ಟಗರು, ಹಸು, ಹೋರಿ, ಜಿಂಕೆ, ಎತ್ತು, ಎಮ್ಮೆ ಮುಂತಾದ ಕೊಂಬುಗಳ್ಳುಳ್ಳ ಪ್ರಾಣಿಗಳನ್ನು ಸಾಕುತ್ತೇವೆ. ಕೆಲವು ಪ್ರಾಣಿಗಳ ಕೊಂಬುಗಳು ಪ್ರಾಣಾಂತಿಕ ಭಯವನ್ನು ಸೃಷ್ಟಿಸಿದರೆ, ಕೆಲವು ವ್ಯಕ್ತಿಗಳಿಗೆ ಇರಿದು ಅಪಾಯವನ್ನುಂಟು ಮಾಡುತ್ತವೆ. ಕೆಲವಂತೂ ಸಾಯಿಸಿಯೇ ಬಿಡುತ್ತವೆ. ಕೊಂಬುಳ್ಳ (ಭೀಕರವಾದ ) ಪ್ರಾಣಿಗಳಂದರೆ ಹಾಯಬಹುದೆಂಬ ಭಯ ಎಲ್ಲರಿಗೂ ಇದ್ದೆ ಇರುತ್ತದೆ. ಸಾಕಲೇಬೇಕೆಂಬ ಅನಿವಾರ್ಯತೆ ಕೂಡ ಇರುತ್ತದೆ.

ಕೊಂಬಿಲ್ಲದೇ ಹುಟ್ಟಬಹುದಾದ ಪ್ರಾಣಿಗಳಿದ್ದರೆ ಹೇಗೆ ಈ ಬಗೆಗೆ ವಿಜ್ಞಾನಿಗಳು ಚಿಂತನೆ ನಡೆಯಿಸಿ ಕೊನೆಗೂ ಯಶಸ್ವಿಯಾಗಿದ್ದಾರೆ. ಈಗ ತಳಿ ತಂತ್ರಜ್ಞಾನದಿಂದಾಗಿ ಕೊಂಬಿಲ್ಲದ ಹಸುಗಳನ್ನು ತಮಗಿಷ್ಟವಾದ ಬಣ್ಣದಲ್ಲಿ ಹೊಂದಲು ಸಾಧ್ಯವಿದೆ, ಎಂದು ಖಚಿತಪಡಿಸಲಾಗಿದೆ. ಮೈಕ್ರೋಸೆಟೆಲೈಟ್ ಎನ್ನುವ ಡಿ. ಎನ್. ಎ. ಈ ಕೊಂಬಿನ ಬೆಳವಣಿಗೆಗೆ ಕಾರಣವೆಂದು ತಿಳಿದಾಗಿದೆ. ಈ ಡಿ.ಎನ್.ಎ. ಅನ್ನು ಕಟ್ಟಿಹಾಕಲು ಕೃತಕ ತಳಿಯಾಂತಕನನ್ನು (ಜೆನಿಟಕ್ ಮಾರ್ಕರ್‍ಸ್) ತಯಾರಿಸಿ ನೀಡಲಾಗುತ್ತದೆ. ಕೊಂಬಿಲ್ಲದ ಕೆಲವು ಜಾತಿಯ ಪ್ರಾಣಿಗಳಲ್ಲಿ ಕಾಣಬಂದ ವಿದ್ಯಾಮಾನವನ್ನು ಬಳಕೆಗೆ ಅಷ್ಟೇ ತರಲಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಹೀಗೆ ಕೆಲವು ಜೀವಿಗಳಲ್ಲಿರುವ ಅಂಗಾಂಗಗಳ ಮೂಲ ಜೆನಿಟಕ್ಸ್‌ನ್ನು ಕಂಡು ಹಿಡಿದು ಅದು ಪೂರೈಸದಂತೆ ಮಾಡಿ ಬೇಡವಾದ ಅಂಗಾಂಗಗಳನ್ನು ಬೆಳೆಯದಂತೆ ಮುಂದೆ ಮಾಡಬಹುದೇನೊ? ಕಾಲಾಯತಸ್ಮೈನಮಃ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...