Home / ಲೇಖನ / ವಿಜ್ಞಾನ / ಭೂಗರ್ಭದೊಳಗೆ ಬದುಕು

ಭೂಗರ್ಭದೊಳಗೆ ಬದುಕು

ಇದುವರೆಗೆ ಯಾವುದೇ ನಿವೇಶನವೂ ಭೂಮಿಯ ಮೇಲೆ ಇರುತ್ತದೆಂಬುವುದು ವಾಸ್ತವ. ಇತ್ತೀಚೆಗೆ ಈ ಭೂಮಿಯ (ನೆಲದ) ಮೇಲೆ ಸ್ಥಳಾವಕಾಶವಿಲ್ಲವೆಂದೂ, ಇನ್ನೂ ಅನೇಕ ಕಾರಣಗಳಿಂದಾಗಿ ಈ ಮಾನವ ವಿಜ್ಞಾನದ ಸಹಾಯದಿಂದ ಭೂಗರ್ಭಕ್ಕೆ ಲಗ್ಗೆ ಇಡುತ್ತಿದ್ದಾನೆ. ಜಪಾನ್ ದೇಶ ಈ ನೆಲದಾಳಿನ ವಾಸದ ಸಾಹಸಕ್ಕೆ ಕೈ ಹಾಕಿದೆ. ಪದೆ ಪದೇ ಭೂಕಂಪನದಿಂದ ಬೇಸತ್ತ ಜಪಾನಿಯರು ನೆಲದಾಳದಲ್ಲಿ ಭೂಕಂಪನ ಮುಕ್ತವಾದ ನಗರಗಳ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಚಿನ್ನದ, ಕಲ್ಲಿದ್ದಿಲಿನ ಗಣಿಗಳಂತೆ ಕಾಣುವ ಈ ನಗರಗಳು ಭೂಮಿಯ ಮೇಲ್ಮೈಯಿಂದ ೫೦ ಮೀಟರ್ ಆಳದಲ್ಲಿ ೧೦೦ ಕಿ.ಮೀ. ವಿಸ್ತಾರದಲ್ಲಿ ಹೊಸ ನಗರಗಳ ರಚನೆ ಯಾಗಲಿವೆ. ನಗರದಾದ್ಯಾಂತ ಓಡಾಡುವ ಅತಿವೇಗದ ನೆಲದಾಳದಿಂದ ಭೂಮಿಯ ಮೇಲಕ್ಕೆ ವೇಗವಾಗಿ ಪಯಣಿಸುವ ಸಾರಿಗೆ ಈ ಭೂಗರ್ಭ ನಗರಗಳನ್ನು ಸಂಪರ್ಕಿಸುತ್ತದೆ.

ಸೂರ್ಯನ ಬೆಳಕನ್ನು ಪ್ರತಿಫಲಿಸಿ ನೆಲದಾಳದಲ್ಲಿ ಹಿತವಾದ ಸೂರ್ಯನ ಬೆಳಕನ್ನು ಪಡೆಯುವ ಮತ್ತು ಸಂಪೂರ್ಣ ನಗರವೇ ಹವಾನಿಯಂತ್ರಿತ ಮಾಡಲಾಗಿದೆ. ನಗರದಲ್ಲಿ ಕೃತಕ ತಂತ್ರಗಳನ್ನು ಬಳಸಿ ನೆಲದ ಮೇಲಿರುವಂತೆ ವಾತಾವರಣವನ್ನು ಸೃಷ್ಟಿಸುವ ಸೋಜಿಗದ ಪಟ್ಟಣಗಳು ಇವಾಗಲಿವೆ.

ಇಂದು ಕೂಡ ಬಹಳ ಜನ ಕೇವಲ ಪುರಾಣಕಾಲದ ಕಲ್ಪನೆ, ಎಂದು ಹೇಳುತ್ತಿರುವಾಗ ಇದು ಕೂಡ ಒಂದು ರೀತಿಯ ‘ಪಾತಾಳಲೋಕ’ ವೆಂದರೆ ಒಂದು ರೀತಿಯಲ್ಲಿ ತಪ್ಪಿಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...