ನಿನ್ನ ಕೆಂದುಟಿಯಿಂದ

ನಿನ್ನ ಕೆಂದುಟಿಯಿಂದ ಬರೆ ಪ್ರೇಮ ಕಾವ್ಯವನು
ತೆರೆದಿರುವ ನನ್ನೆದೆಯ ಹಾಳೆ ಮೇಲೆ
ಭಾವಗೀತೆಯ ಮೀರಿ ಮಹಾಕಾವ್ಯ ಮೂಡಲಿ
ಅದ ಓದಿ ದಾಟುವೆನು ಜಗದ ಎಲ್ಲೆ //ಪ//

ಗಿಳಿ ಕೋಗಿಲೆ ಬೇಡ ನಿನ್ನ ಹಾಡಿನ ಎದುರು
ನವಿಲ ನರ್ತನವೇಕೆ ನೀನು ನಡೆವಾಗ
ಚುಕ್ಕಿ ಚಂದ್ರಮರೇಕೆ ನೀ ಕಣ್ಣು ತೆರೆದಾಗ
ಬೆಳದಿಂಗಳು ಬೇಡ ನೀನೆ ಇರುವಾಗ

ಹುಬ್ಬು ಹಾರಿಸಬೇಡ ರೆಪ್ಪೆ ಬಡಿಯಲುಬೇಡ
ಹಕ್ಕಿ ಸಹ ಗರಿ ಬಿಚ್ಚಿ ಮೇಲೆ ಹಾರಲಿ
ತುಟಿಯ ಕೊಂಕಿಸುವಾಗ ತಾವರೆಯು ನಿಸ್ತೇಜ
ಚೆಲುವ ಪ್ರಕೃತಿ ಮೇಲೆ ಕರುಣೆ ಇರಲಿ

ನಿನಗಿಲ್ಲ ಉಪಮಾನ ರೂಪಕವು ಸಹ ಇಲ್ಲ
ನಿನ್ನ ಸಂಗದ ಬಲವೆ ಕಾವ್ಯ ಸ್ಫೂರ್ತಿ
ಬರೆದ ಕಾವ್ಯಕೆ ನಾನು ಲಿಪಿಕಾರ, ಕವಿ ನೀನು
ಇದು ಅಲ್ಲವೆ ನಿನ್ನ ಪ್ರೀತಿ ನೀತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಮುಂಜಾವಿನಲಿ
Next post ಕನ್ನಡ ಮಾಧ್ಯಮ : ಸಂವಿಧಾನದ ಸುತ್ತ ವ್ಯಾಖ್ಯಾನದ ಹುತ್ತ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…