Home / ಕವನ / ಭಾವಗೀತೆ / ಕೂಸಿನ ಹಾಡು

ಕೂಸಿನ ಹಾಡು

ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ|
ಮಂಡಲದಾಗಾಡೊ ಮಗನ ಗೋವಿಂದಾ||
ಕೂಸ ಕಂಡೀಽರೆ| ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೧||

ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ|
ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ||
ಕೂಸ ಕಂಡಿಽರೇ| ಅವ್‌ ನನ್ನ|
ಬಾಲಽನ ಕಂಡಿಽರೆ ||೨||

ಹೆಸರಂಗಿ ತೊಡೆಸಿಽದ ಹಾಲಗಡಗ ಇಡಸಿಽದ|
ಕುಸಲದ ಟಿಪ್ಪಿಽಗಿ ತೆಲಿಮ್ಯಾಲಿತ್ತವ್ವಾ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೩||

ಭಾಂಯಿ ಮ್ಯಾಲ ನಿಂತಿತ್ತು ಬಾಯಿ ಮಾಡಿ ಅಳತಿತ್ತು|
ಕಂಡ ಬಾಲ್ಯಾರಿಗಿಽ ಕೈಮಾಡಿತವ್ವಾ ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೪||

ಬಿಳಿ ಅಂಗಿ ತೊಡಸಿಽದ ಬಿಳಿಮುತ್ತ ನಿಡಸಿಽದ
ಅಂಗಳದಾಗ ಕೂಸಾ ಮಾಯಾಯಿತವ್ವಾ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೫||

ಗಂಡೆಹೆಂಡರು ಕೂಡಿ ಖಂಡಗ ಹರಕೀ ಮಾಡಿ|
ನಾ ಗಂಡಸಮಗನಽ ಹೆಡೆದಿದ್ದ ನವ್ವಾ|| ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೬||

ಜನವ ಜಾತ್ರಿಽಗ್ಹೊಯ್ತ ನಾನೂ ಜಾತ್ರಿಽಗ್ಹ್ವಾದ|
ಜನಕಿಲ್ಲದ ಕೇಡಾ ನನಗಾಯಿತವ್ವಾ ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೭||
*****

ಭಾವಗೀತಗಳು

ಹೃದಯೋದ್ರೇಕಕ್ಕೆ ಕಾರಣವಾಗುವ ಯಾವುದೊಂದು ಒಂಟಿ ಸಂಗತಿಯನ್ನು ಕುರಿತು ಅದರ ಬೇರೆಬೇರೆ ಮಗ್ಗಲುಗಳನ್ನು ಒಂದೊಂದಾಗಿ ಬಣ್ಣಿಸುತ್ತ ಬಂದ ಹಾಗೆಲ್ಲ ಶ್ರೋತೃವಿನ ಅಂತರಂಗದಲ್ಲಿ ಭಾವಾವೇಗವು ಏಳುತ್ತದೆ. ಇಂತಹ ಹಾಡುಗಳಿಗೆ “ಭಾವಗೀತಗಳೆ”ಂದು ನಾಮಕರಣ ಮಾಡಲಾಗಿದೆ. ಈ ಹಾಡುಗಳಲ್ಲಿ ಒಂದೇ ಪಾತ್ರವು ತನ್ನ ಸ್ವಗತವನ್ನು ಕಲ್ಲು ಕರಗುವಂತೆ ಬಣ್ಣಿ ಸುತ್ತಿರುವುದುಂಟು.

ಕೂಸಿನ ಹಾಡು

ಜಾತ್ರೆಗೆ ಹೋದ ಒಬ್ಬ ಹೆಣ್ಣುಮಗಳು ಬಾವಿಯ ದಂಡೆಯ ಮೇಲೆ ನೀರು ಕುಡಿಯುವಾಗ ಜನರ ದಟ್ಟಣೆಯಲ್ಲಿ ಅವಳ ಕೂಸು ತಪ್ಪಿಸಿಕೊಂಡು ಬಿಟ್ಟಿದೆ. ಎಷ್ಟು ಹುಡುಕಿದರೂ ಸಿಗದಂತಾಗಲು ಅವಳು ನೆನೆನೆನೆಸಿ ಅಳುತ್ತಾಳೆ.

ಛಂದಸ್ಸು:— ತ್ರಿಪದಿಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಕುಂದಲ=ಕುಂದಣ. ಮಂಡಲ=ಬರಿದಾದ ಸ್ಥಳ. ಹಲ್ಲಿ=ಚಿಕ್ಕ ರೊಟ್ಟಿ. ಇಡಸೀದ=ಇಡಿಸಿರುವೆನು. ತೆಲಿ=ತಲೆ. ಹ್ವಾದ=ಹೋದೆನು.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...