ಓ ಬೆಟ್ಟ ಬಯಲುಗಳೆ

ಓ ಬೆಟ್ಟ ಬಯಲುಗಳೆ ಕಣಿವೆ ಕಡಲುಗಳೆ
ನಾನು ನಿಮ್ಮ ಕವನ
ಬೇಡ ಧಾವಂತ | ಉಳಿಸಿ ಜೀವಂತ
ಕೊಳ್ಳಿ ನನ್ನ ನಮನ //ಪ//

ಬೆಳಕ ಚೆಲ್ಲಿದ ಬೆಳ್ಳಿ ಸೂರ್ಯನಿಗೆ
ಕತ್ತಲ ಪರದೆಗಳಿಲ್ಲಿ
ತಂಪು ನೀಡುವ ತುಂಬು ಚಂದ್ರನಿಗೆ
ತಾಪದ ಮುತ್ತಿಗೆಯಿಲ್ಲಿ
ಬೀಸಿ ಬರುವ ತಂಗಾಳಿಗೆ ಕೂಡ
ಕಪ್ಪು ಹೊಗೆಯ ಘಾಟು
ಆಮ್ಲಜನಕ ಬೇಕೆನ್ನುವವರಿಗೆ
ಫಿಕ್ಸಾಗಿದೆ ರೇಟು!

ಜಲದ ಕರುಣೆಯ ಭೂಮಿ ತಾಯಿಗೆ
ಬೋರ್‌ವೆಲ್‌ಗಳ ತಿವಿತ
ಚಿನ್ನ ಕೊಟ್ಟರೂ ಕನ್ನ ಹಾಕುವ
ಗಣಿಗಳ್ಳರ ಇರಿತ
ಅನ್ನ ಕೊಡುವ ನೆಲದವ್ವನೊಡಲಿಗೆ
ರಾಸಾಯನಿಕ ವಿಷ
ವಿಷವ ನುಂಗುವ ಮಂದಿ ರಕ್ತ ವಿಷ
ಬದುಕು ಹೇಗೆ ಹರುಷ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನಿರುವ ತನಕ
Next post ಮರ್ಯಾದಸ್ಥ ಮನುಷ್ಯರಾಗೋಣ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…