Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಕದಳಿಯ ಸುಳಿಯೇ
ಕದಳಿಯ ಹೂವೇ
ಕದಳಿಯ ಫಲವೇ
ನಿಮ್ಮೆಲ್ಲರನೂ ಒಂದ ಬೇಡುವೆನು

ಹರನೇ ತನಗೆ ಗಂಡನಾಗಬೇಕೆಂದು
ಅನುದಿನವೂ ಹಂಬಲಿಸಿ
ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ
ಚೆಲುವನನು ಬೆಂಬತ್ತಿ ನಿಮ್ಮೀ
ಕದಳಿ ಬನವ ಪೊಕ್ಕ ನನ್ನಕ್ಕ
ಹೊಳೆವ ಕೆಂಜೆಡೆಗಳ ಸುಲಿಪಲ್ಲ
ಗೊರವನನು ಇದಿರಿಸಿದ
ಬಗೆಯ ಬಣ್ಣಿಸಿರೆ…

ಸರ್ವಭರಿತವಾಗಿ ಮುಖದೋರಿದವನ
ನಿರುಕಿಸಿ ನಿಬ್ಬೆರಗಾದಳೆ ನನ್ನಕ್ಕ?
ಆ ಬೆರಗಿನ ಸೊಬಗ ಬಣ್ಣಿಸಿರೆ…

ಭವಗೆದ್ದು ಬಂದ ಮಗಳೆ ಬಾರೆಂದು
ಕರುಣದಿ ಕೈವಿಡಿದು ಬಿಗಿದಪ್ಪಿದನಲ್ಲವೆ
ಆ ಗೊರವ….
ಆ ದಿವ್ಯ ನೋಟದ ಮಾಟವ ಬಣ್ಣಿಸಿದೆ…

ಕಳವಳಿಸಿ ಕಲ್ಪಿಸಿ, ಕಂದಿ, ಕುಂದಿದವಳ
ಕಾಡಿಸಿ ಕೊನೆಗೊಮ್ಮೆ
ಕಾಮನಬಿಲ್ಲಿನಂತೆ ಮುಖದೋರಿದ
ಚನ್ನನನು ಕಂಡು ಉರಿದಳೆ? ಜರಿದಳೆ?
ಹಿರಿಹಿರಿ ಹಿಗ್ಗಿದಳೆ?!

ಆ ಹಿಗ್ಗಿನ ಬುಗ್ಗೆಯಿಂದ ಒಂದಿಷ್ಟು
ಸಿಹಿನೀರ ಮೊಗದು ಎನಗುಣಿಸಿರೆ…

ನಾನಾಕೆಯ ಕೆಳದಿ
ಕುಸುಮದ ಹಂಗು ತೊರೆದು,
ಅಕ್ಕನನು ಅನುಸರಿಸಿ
ಬೆಟ್ಟಗುಡ್ಡ ಕಣಿವೆ ಕಾನನಗಳಲಿ
ಸುಳಿಸುಳಿದು ಬಂದ ಅಣುರೇಣು
ರುಂಡ ಮಾಲೆಯ ಕೊರಳವನ
ಹೃದಯ ಕಮಲದೊಳಡಗಿದವಳ
ಸಡಗರಕ್ಕೆ ಸಾಕ್ಷಿಯಂತಿರುವ
ದಿವ್ಯ ಚಕ್ಷುಗಳೇ…

ನೀವು ಬಣ್ಣಿಸದಿದ್ದರೆ
ನನ್ನಕ್ಕ ಒಲಿದು ಕೂಡಿದ
ಶ್ರೀಗಿರಿಯ ಗಾರುಡಿಗ
ಆ ಮಲ್ಲಿನಾಥನ ಮೇಲಾಣೆ!
*****

Tagged:

One Comment

Leave a Reply to Basavaraj Cancel reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...