Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಕದಳಿಯ ಸುಳಿಯೇ
ಕದಳಿಯ ಹೂವೇ
ಕದಳಿಯ ಫಲವೇ
ನಿಮ್ಮೆಲ್ಲರನೂ ಒಂದ ಬೇಡುವೆನು

ಹರನೇ ತನಗೆ ಗಂಡನಾಗಬೇಕೆಂದು
ಅನುದಿನವೂ ಹಂಬಲಿಸಿ
ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ
ಚೆಲುವನನು ಬೆಂಬತ್ತಿ ನಿಮ್ಮೀ
ಕದಳಿ ಬನವ ಪೊಕ್ಕ ನನ್ನಕ್ಕ
ಹೊಳೆವ ಕೆಂಜೆಡೆಗಳ ಸುಲಿಪಲ್ಲ
ಗೊರವನನು ಇದಿರಿಸಿದ
ಬಗೆಯ ಬಣ್ಣಿಸಿರೆ…

ಸರ್ವಭರಿತವಾಗಿ ಮುಖದೋರಿದವನ
ನಿರುಕಿಸಿ ನಿಬ್ಬೆರಗಾದಳೆ ನನ್ನಕ್ಕ?
ಆ ಬೆರಗಿನ ಸೊಬಗ ಬಣ್ಣಿಸಿರೆ…

ಭವಗೆದ್ದು ಬಂದ ಮಗಳೆ ಬಾರೆಂದು
ಕರುಣದಿ ಕೈವಿಡಿದು ಬಿಗಿದಪ್ಪಿದನಲ್ಲವೆ
ಆ ಗೊರವ….
ಆ ದಿವ್ಯ ನೋಟದ ಮಾಟವ ಬಣ್ಣಿಸಿದೆ…

ಕಳವಳಿಸಿ ಕಲ್ಪಿಸಿ, ಕಂದಿ, ಕುಂದಿದವಳ
ಕಾಡಿಸಿ ಕೊನೆಗೊಮ್ಮೆ
ಕಾಮನಬಿಲ್ಲಿನಂತೆ ಮುಖದೋರಿದ
ಚನ್ನನನು ಕಂಡು ಉರಿದಳೆ? ಜರಿದಳೆ?
ಹಿರಿಹಿರಿ ಹಿಗ್ಗಿದಳೆ?!

ಆ ಹಿಗ್ಗಿನ ಬುಗ್ಗೆಯಿಂದ ಒಂದಿಷ್ಟು
ಸಿಹಿನೀರ ಮೊಗದು ಎನಗುಣಿಸಿರೆ…

ನಾನಾಕೆಯ ಕೆಳದಿ
ಕುಸುಮದ ಹಂಗು ತೊರೆದು,
ಅಕ್ಕನನು ಅನುಸರಿಸಿ
ಬೆಟ್ಟಗುಡ್ಡ ಕಣಿವೆ ಕಾನನಗಳಲಿ
ಸುಳಿಸುಳಿದು ಬಂದ ಅಣುರೇಣು
ರುಂಡ ಮಾಲೆಯ ಕೊರಳವನ
ಹೃದಯ ಕಮಲದೊಳಡಗಿದವಳ
ಸಡಗರಕ್ಕೆ ಸಾಕ್ಷಿಯಂತಿರುವ
ದಿವ್ಯ ಚಕ್ಷುಗಳೇ…

ನೀವು ಬಣ್ಣಿಸದಿದ್ದರೆ
ನನ್ನಕ್ಕ ಒಲಿದು ಕೂಡಿದ
ಶ್ರೀಗಿರಿಯ ಗಾರುಡಿಗ
ಆ ಮಲ್ಲಿನಾಥನ ಮೇಲಾಣೆ!
*****

Tagged:

One Comment

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...