Home / ಲೇಖನ / ವಿಜ್ಞಾನ / ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಜಗತ್ತಿನಲ್ಲಿ ದಿನನಿತ್ಯ ಹಿಂಸಾತ್ಮಕ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಒಬ್ಬ ವ್ಯಕ್ತಿ ನಿರ್ಧಯಿಯಾಗಿ ಅನೇಕ ವ್ಯಕ್ತಿಗಳನ್ನು ಕೊಲೆಗೈದು, ಅತ್ಯಾಚಾರವೆಸಗಿ, ರಕ್ತ ಪಿಪಾಸಿಯಾಗಿ ನಿರಂತರವಾಗಿ ನಡೆದುಕೊಳ್ಳುತ್ತಲೇ ಇರುತ್ತಾನೆ. ಇವನಲ್ಲಿ ಕರುಣೆ, ವಾತ್ಸಲ್ಯ, ಮಾನವತಾವಾದಗಳೆಲ್ಲ ಬತ್ತಿ ಕೇವಲ ಕ್ರೌರ್ಯ, ಹಿಂಸೆ, ನಿಷ್ಕರುಣೆಗಳು ಮಡುಗಟ್ಟಿರುತ್ತವೆ. ಏಕೆ ಹೀಗೆ ಈ ವ್ಯಕ್ತಿಗಳು ಮೆದುಳಿನ ಸಂದೇಶಗಳಲ್ಲಿ ಏನಾದರೂ ತಪ್ಪಾಗಿ ಹೀಗೆ ವರ್ತಿಸುತ್ತಿರಬಹುದೇ? ಎಂದು ಸಂಶೋಧನೆಗಳು ನಡೆದವು.

ಹಿಂಸಾತ್ಮಕ ಅಪರಾಧಗಳನ್ನು ಮಾಡುವವರ ಮೆದುಳಿನಲ್ಲಿ ಕೆಲವೊಂದು ಅಪಾಯಕಾರಿ ಲೋಹಗಳಿರುವುದನ್ನು ಇಬ್ಬರು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಲೋಹಮಾಲಿನ್ಯವುಳ್ಳ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರಗಳು ನಡೆದಿರುವ ನಿದರ್ಶನಗಳಿವೆ. ಕ್ಯಾಲಿಪೋರ್ನಿಯಾದಲ್ಲಿ ಜೇಮ್ಸ್ ಆಲಿವರ್ ಹಬರ್ಟ್ ಎಂಬಾತ ೧೯೮೪ ರಲ್ಲಿ ೨೧ ಜನರ ಸಮೂಹವನ್ನು ಕೊಲೆಮಾಡಿದ. ಆತನ ಕೂದಲಿನ ರಾಸಾಯನಿಕ ರಚನೆಯನ್ನು ಪರೀಕ್ಷಿಸಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ‘ಕ್ಯಾಡ್ಮಿಯಂ’ ಇದ್ದದ್ದು ಕಂಡು ಬಂದಿತು. ಕ್ಯಾಡ್ಮಿಯಂ ಲೋಹವು ಮೂತ್ರ ಜನಕಾಂಗವನ್ನು ನಾಶಮಾಡುತ್ತದೆ. ಹಬರ್ಟಿಯ ಮೂತ್ರ ಜನಕಾಂಗವನ್ನು ಪರೀಕ್ಷಿಸಿದಾಗ ಅದು ಮೊದಲೇ ಸಾಕಷ್ಟು ನಾಶವಾಗಿದ್ದುದು ಕಂಡು ಬಂದಿತು. ಇಲನೋಯಿಸ್‌ನ ಪಿಫೀಫರ್ ಚಿಕಿತ್ಸಾ ಕೇಂದ್ರ ಅಧ್ಯಕ್ಷರಾದ ವಿಲಿಯಂ.ಜೆ. ವಾಲ್ಫ್ ಅವರು ಇಂಥಹ ಅನೇಕ ನಿದರ್ಶನಗಳನ್ನು ಕಂಡಿದ್ದಾರೆ. ಶರೀರವು ಕೆಲವೊಂದು ಅಪಾಯಕಾರಿ ಲೋಹಗಳನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಮನುಷ್ಯನಿಗೆ ಸರಿ, ತಪ್ಪುಗಳ ಪರಿಕಲ್ಪನೆ ಇಲ್ಲದಂತಾಗುತ್ತದೆ ಎಂದು ಅವರು ಹೇಳುತ್ತಾರೆ. ೧೯೮೯ ರಲ್ಲಿ ಪಿಫೀಫರ್‌ನಲ್ಲಿ ಅನೇಕ ಹಿಂಸಾಚಾರಿ ಮಕ್ಕಳನ್ನು ಗಮನಿಸಲಾಯಿತು. ಇವರೆಲ್ಲ ತಮ್ಮ ೨ ವರ್ಷದ ವಯಸ್ಸಿನಿಂದಲೇ ಬೆಕ್ಕುಗಳಿಗೆ ಅತೀವ ಹಿಂಸೆ ಕೊಡುತ್ತಿದ್ದುದನ್ನು ಗಮನಿಸಿ ಅವರಿಗೆ ಕೊಡುತ್ತಿದ್ದ ಆಹಾರವನ್ನು ನಿಯಂತ್ರಿಸಿ ಅವರ ವರ್ತನೆಗಳನ್ನು ಹಿಡಿತಗೊಳಿಸಲಾಯಿತು.

ಡಾರ್ಟ್‌ಮೌಲ್ ಕಾಲೇಜಿನ ಪ್ರಾಧ್ಯಾಪಕರಾದ ರೆವೀಗರ್ ಡಿ- ಮಾಸ್ಟರ್‍ಸ್ ಎಂಬುವವರು ಇದೇ ರೀತಿಯಾದ ಸಂಶೋಧನೆಗಳನ್ನು ಮಾಡಿ ದೃಡೀಕರಿಸಿದ್ದಾರೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಸಹ ಮೆದುಳಿನ ರಾಸಾಯನಿಕ ರಚನೆಯಲ್ಲಿ ಬದಲಾವಣೆಗಳನ್ನು ಮಾಡಿ ಕಲಿಕೆಯ ಸಮಸ್ಯೆಗಳು, ವರಟು ವರ್ತನೆ, ಹಿಂಸೆ ಇತ್ಯಾದಿಗಳಿಗೆ ಕಾರಣವಾಗುವವು ಎಂದು ಕಂಡು ಹಿಡಿಯಲಾಯಿತು. ಕೆಲವೊಂದು ಗ್ರಾಮೀಣ ಬಾಲಕರಲ್ಲಿ ಬುದ್ಧಮಾಂದ್ಯತೆಗೂ ಇದು ಕಾರಣವಾಗಿದೆ, ಎಂದು ತಿಳಿದು ಬರುತ್ತದೆ. ಮ್ಯಾಂಗನೀಜ್‌ನಿಂದ ಮಾನಸಿಕ ಪ್ರತಿಕ್ರಿಯೆಗಳ ನಿಯಂತ್ರಣವು ಕ್ಷೀಣಿಸಿ ಹಿಂಸಾತ್ಮಕ ವರ್ತನೆ ತೋರುವುದೆಂದು ತಿಳಿದು ಬಂದಿದೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಎಲ್ಲ ಕಡೆ ಹರಡುತ್ತಲಿವೆ. ನರವಿಜ್ಞಾನಿಗಳ ಪ್ರಕಾರ ಮ್ಯಾಂಗನೀಸ್ ವಸ್ತುವು ಮೆದುಳಿನಲ್ಲಿರುವ ‘ಸಿರೋಟೋನಿನ್’ ಎಂಬ ಪದಾರ್ಥದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದೊಂದು ನರಪ್ರಸರಣ ದ್ರವ (Neurotransmitter) ಮೆದುಳಿನ ಸಂದೇಶಗಳು ಪ್ರಸಾರವಾಗಲು ಈ ದ್ರವವೇ ಕಾರಣವಾಗುತ್ತದೆ. ಮಾಸ್ಟರ್ಸ್ ಅವರ ಪ್ರಕಾರ ಎಲ್ಲ ಹಿಂಸಾತ್ಮಕ (ಒರಟುತನ, ಅಪತ್ಕಾರಿತನ) ಮತ್ತು ಇತರ ಮನೋವೈಜ್ಞಾನಿಕ ತೊಂದರೆಗಳಿಗೆ ಸಿರೋಟೋನಿನ್‌ನ ಕೊರತೆಯೇ ಕಾರಣವಾಗಿದೆ. ಸರಿಯಾದ ವಿಟಾಮಿನ್‌ಗಳ ಪೂರೈಕೆಗಳಿಂದ ಈ ವೈಪರೀತ್ಯವನ್ನು ಸರಿಪಡಿಸಿಬಹುದೆಂದು ಅವರು ಹೇಳುತ್ತಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...