Home / ಕವನ / ಕವಿತೆ / ನವಿಲು ಗದ್ದೆ

ನವಿಲು ಗದ್ದೆ

ಯಾರು ಕೊಯ್ದರೊ ಬೆಳೆಯ
ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ?
ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ
ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ.

ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು
ನೆತ್ತರಲಿ ತೊಯ್ದವರು ಯಾರೊ ಕಾಣೆ
ಬೆವರು ಬಸಿಯುತ್ತ ಬೆಳೆದಂಥ ಬೆಳಕನ್ನು
ಕತ್ತಲಲಿ ಕದ್ದವರು ಯಾರೊ ಕಾಣೆ.

ಕತ್ತಿಕಾಳಗದಲ್ಲಿ ತತ್ತಿಯಿಟ್ಟಿತು ಸೇಡು
ಸತ್ತುಹೋಯಿತು ಪ್ರೀತಿ ಮಣ್ಣಿನಲ್ಲಿ
ಬೀದಿಬೀದಿಯ ತುಂಬ ಹರಿದು ಬಂದಿತು ನೋವು
ಹೆಪ್ಪುಗಟ್ಟಿತು ಇಲ್ಲಿ ಕಣ್ಣಿನಲ್ಲಿ.

ಹರಿವ ನದಿಯಲ್ಲಿ ಬೆವರು, ಉರಿವ ಬಿಸಿಲಲ್ಲಿ ಬೆವರು
ಕವಿದ ಕತ್ತಲೆಯಲ್ಲಿ, ಸೂರ್ಯ ಬೆತ್ತಲೆಯಲ್ಲಿ
ಎಲ್ಲಿ ನೋಡಿದರಲ್ಲಿ ಬೆವರ ಬರಹ
ಜೀವಸಾಗರವನ್ನು ಕುಡಿವ ದಾಹ.

ಬೆವರು ಬಂದೀತೆಂದು ಬತ್ತಿ ಹೋಗುತ್ತಿದೆ-
ಹತ್ತಿ ಉರಿಯುವ ಹುತ್ತ ಈ ಜೀವಸಾಗರ;
ಒಂದೊಂದು ಅಲೆಯು ಮಿಡಿನಾಗರ!

ಇಲ್ಲ, ಬೆಳಗಿನ ಜಾವಕ್ಕೆ ಕಾಯುವ ಬೆವರಿಗೆ
ಇಲ್ಲಿ ಜೀವ ಕೊಡುವುದಿಲ್ಲ.
ಸೂರ್ಯ ಕಣ್ತೆರೆದು ನೋಡುವುದಿಲ್ಲ;
ಸಮುದ್ರ ಕಡೆಯುವುದಿಲ್ಲ.
ಅಮೃತದ ಹನಿ ಉಕ್ಕುವುದಿಲ್ಲ.
ಕಡೆಗೆ ಬೇಡಿದರೂ ಬರುವುದಿಲ್ಲ-
ಒಂದು ಹನಿ ಕಣ್ಣೀರು;
ಬೆವರ ಬೆತ್ತಲು ಮಾಡಿ
ಕದ ಮುಚ್ಚಿ ಕೂತ ಕತ್ತಲ ಕಾರುಬಾರು.

ಬನ್ನಿ ಗೆಳೆಯರೇ ಕತ್ತಲಲ್ಲೇ ಬೆಳೆಯೋಣ
ನಮ್ಮ ನಮ್ಮ ಮನಸುಗಳನ್ನು
ನಮ್ಮ ನಮ್ಮ ಕನಸುಗಳನ್ನು
ಗಾಯಗೊಂಡ ಹೂವುಗಳನ್ನು
ಸಾಯಗೊಡದ ನೋವುಗಳನ್ನು
ಬೆಳೆಯೋಣ, ಬೆಳೆಯುತ್ತ ಬೆಳೆಯುತ್ತ
ಬೆಳಕಾಗೋಣ-
ನವಿಲುಗದ್ದೆಯ ಗರಿಯಾಗೋಣ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...