Home / ಕವನ / ಕವಿತೆ / ಹದಿನಾರರ ಹರೆಯ

ಹದಿನಾರರ ಹರೆಯ

ಹದಿನಾರರ ಹರೆಯ ಬೆಡಗಿ
ನೀನು ಮಾನಸಕಂಡ ಗೆಳತಿ
ನಿನ್ನ ಮನದ ಪಯಣವೆಲ್ಲಿಗೆ?

ನಾಲ್ಕು ದಿಕ್ಕು ನಾಲ್ಕು ದೋಣಿ
ಬದುಕಿದು ಮಹಾಸಾಗರ
ಯಾವ ದಿಕ್ಕು ಯಾವ ದೋಣಿ
ಎತ್ತ ನೋಡೆ ಸುಂದರ ||

ಕನಸು ಕಟ್ಟಿ ಹೊರಟೆ ಏನು
ದಡವ ಹೇಗೆ ಮುಟ್ಟುವೆ
ಮೊರೆವ ಶರಧಿ ಮನದಿ ಕಷ್ಟ
ಅದನು ಹೇಗೆ ಅರಿಯುವೆ ||

ಶರದಿಯಲ್ಲಿ ಕಾಯುತಿಹವು
ಹಲವಾರು ಜೀವಿಗಳು
ಎಚ್ಚರವಿರಲಿ ಪಯಣ ಬೆಳೆಸು
ಹೊಂಚುತಿಹುದು ಅವುಗಳು ||

ನಿನ್ನ ದೋಣಿ ಭದ್ರವಿರಲಿ
ಪಯಣ ಬಹಳ ದೂರವು
ದಡವು ಸೇರಿ ಮೆರೆವನೆಂಬ
ಲೆಕ್ಕ ಛಲವು ಸುಲಭವು ||

ಇಡುವ ಹೆಜ್ಜೆ ಹೆಜ್ಜೆಗಳಲಿ
ಇರಲೆಚ್ಚರ ಗೆಳತಿ ನಿನಗೆ
ಕಾಣದಂಥ ಕಲ್ಲು ಮುಳ್ಳು
ಅಡಗಿರುವವು ಅಲ್ಲಿಯೇ ||

ದೂರ ಬೆಟ್ಟ ಬಹು ಸುಂದರ
ಕಾಣುತಿಹುದು ಕಣ್ಣಿಗೆ
ಕಾಡು ಮೃಗಗಳು ಇವು
ಹೊಂಚುತಿಹುವು ಮೆಲ್ಲಗೆ ||

ಹದಿನಾರರ ಶೋಡಷಿ ನಿನಗೆ
ಜಗವೆಲ್ಲವು ಸುಂದರ
ಬಲು ಸುಂದರತೆಯ ಖಣಿ
ನಿನ್ನ ಹಿಡಿವ ಪಂಜರ ||

ಹೆಜ್ಜೆ ಇಡುವ ಮುನ್ನ ನಿನಗೆ
ಬುದ್ಧಿ ಇರಲಿ ಎಚ್ಚರ
ತಗ್ಗು ದಿಣ್ಣೆ ಇಹವು ನೂರು
ಬೇಡ ನಿನಗೆ ಆತುರ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...