Home / ಕವನ / ಕವಿತೆ / ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ?

ಏಕೆ ಹುಡುಕಲಿ ನಿನ್ನ?
ಜಗಜ್ಜಾಹೀರವಾಗಿರಲು ನೀನು|
ಏಕೆ ಕಾಣಿಸುವುದಿಲ್ಲವೆನ್ನಲಿ
ಸರ್ವವ್ಯಾಪಿಯಾಗಿರುವ ನಿನ್ನ|
ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ
ಸರ್ವಾಂತರ್ಯಾಮಿಯಾದ ನಿನ್ನ||

ನಿನ್ನ ಒಂದು ಈ ಭೂ‌ಅರಮನೆಯಲಿ
ಗಾಳಿ, ನೀರು, ಬೆಳಕು
ಶಕ್ತಿಯಾಗಿ ನಿರಂತರ ಚಲಿಸುತಿರಲು|
ಎಂದೋ ಅತಿಥಿಯಾಗಿ
ಬಂದು ಹೋಗುವ ನಾನು
ನಿನ್ನ ಅರಿಯಲು ಸಾಧ್ಯವೇ||

ಅನಂತ ಶತಮಾನಗಳ ಹಿಂದೆ
ನೀ ಸೃಷ್ಟಿಸಿರುವ ನಿನ್ನ ಕುರುಹುಗಳ
ಸರಿಯಾಗಿ ಅರಿಯದಲೆ
ನಿನ್ನ ಅಲ್ಲಗಳೆವುದು ನ್ಯಾಯವೇ?
ನೀನಿತ್ತ ಮತಿಯ ಉಪಯೋಗಿಸಿ
ನಿನ್ನ ಪ್ರಶ್ನೆಮಾಡುವುದು ಸರಿಯೇ||

ಕುರುಡನೊಬ್ಬ ಆನೆಯ ಕಾಲ ಮುಟ್ಟಿ
ಅದು ಕಂಬದಂತಿದೆ ಎಂದಂತೆ
ಪರಿಕಲ್ಪಿಸುವುದು ಸರಿಯೇ?
ನಿನ್ನನರಿಲುಬೇಕು ಅಂತರಂಗದ ಕಣ್ಣು,
ಸತ್ಯವನರಿಯುವ ಕಣ್ಣು||

ಚಂದ್ರ, ಮಂಗಳನ ಮೇಲೆ ಕಾಲಿರುಸಿದಕೆ|
ತಂತ್ರಜ್ಞಾನದಿ ಹಕ್ಕಿಯಂದದಿ
ಹಾರಾಡುವುದ, ಪ್ರಾಣಿಯಂತೆ ನೀರಲಿ
ಚಲಿಸುವುದ ಕಲಿತಿದಕೆ,
ಅಂತರಿಕ್ಷದಲಿ ಸಂಚರಿಸುವುದ
ಅರಿತಿರುವುದಕೆ
ದೇವರಿಲ್ಲವೆಂಬುದು ತರವೇ?||

ಕೋಟ್ಯಾನು ಕೋಟಿ
ಜೀವ ಜಂಗುಳಿಯ ಸೃಷ್ಟಿಸಿ
ಅನ್ನಾದಿಗಳನಿತ್ತು ಸಲಹುವ
ಆ ದೈವವ ಅಪಮಾನಿಸುವುದು
ನ್ಯಾಯವೇ, ಧರ್ಮವೇ ? ||

ಬೇಡ, ಹೆತ್ತತಾಯಿಯನೇ
ಶಂಕಿಸಿಸುವುದು ದೂಷಿಸುವುದು|
ತಾಯಿ ಎದೆಹಾಲು ಕುಡಿದು
ಬೆಳೆದಾದ ಮೇಲೆ,
ಅದು ನಿನ್ನೆಯದೊ ಇಂದಿನದೊ
ಎಂಬ ರಾಜಕೀಯತೆ||

ನೀ ಚಲಿಸುತ್ತಿರುವುದು
ನಿನ್ನ ಶಕ್ತಿಯಿಂದ ಎನ್ನುವುದಾದರೆ!
ಈ ಭೂಮಿ, ಈ ಬ್ರಹ್ಮಾಂಡ
ಸಹಾಸ್ರಾರು ವರುಷ ನಿರಂತರ
ಹೀಗೆ ಸಾಗುತ್ತಿರುವುದು
ಆ ದೈವದಶಕ್ತಿ ಇರುವುದರಿಂದಲೇ|
ಅನ್ಯತಾ ಕಾಲಹರಣವ ಮಾಡದಲೆ
ಅನ್ಯರ ಮಾರ್ಗದಲಿ ತೊಡಕಾಗದೆ
ನೀ ಬಂದ ಕಾರ್ಯ ಮುಗಿಸುವುದೇ ಲೇಸು||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...