Home / ಲೇಖನ / ಕೃಷಿ / ಬರಡು ನೆಲವನ್ನು ಖಸುಗೊಳಿಸುವ ಶೋಧನೆ

ಬರಡು ನೆಲವನ್ನು ಖಸುಗೊಳಿಸುವ ಶೋಧನೆ

ಹೊಲದ ತುಂಬೆಲ್ಲಗರಿಕೆ, ಕಲ್ಲು ನಿರುಪಯುಕ್ತ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ರೈತರಿಗೆ ಇದೀಗ ಹೂಸ ‘ಕ್ಷ’ ಕಿರಣವೊಂದು ಮೂಡಿ ಬಂದಿದೆ. ಕ್ಷಾರಯುಕ್ತ ಅಥವಾ ಅಯೋಗ್ಯ ಎನ್ನುವ ಭೂಮಿಯಲ್ಲಿ ಫಲವತ್ತಾಗಿ ಸಮೃದ್ಧಿವಾಗಿ ಬೆಳೆಬರುವುದೆಂದರೆ ಬೇಡವೆಂದವರಾರು? ಇಂಥಹ ಬರಡು ಭೂಮಿಯನ್ನು ಸಂಪದ್ಭರಿತ ಗೊಳಿಸುವಲ್ಲಿ ಪ್ರಯತ್ನ ಪೂರ್ವಕವಾಗಿ ಶೋಧನೆ ನಡಿಸಿ ಫಲಕಂಡರು. ಉತ್ತರ ಪ್ರದೇಶದ ಕಬ್ಬು ಸಂಶೋಧನಾ ಮಂಡಳಿಯ ವಿಜ್ಞಾನಿಗಳು. ಸಕ್ಕರೆ ಕಾರ್ಖಾನೆಗಳಲ್ಲಿತಯಾರಾಗುವ ಅದರ ಕೊಳೆಯನ್ನು ಜೈವಿಕ ಕಾರ್ಬೋನಿಕ್ ಗೊಬ್ಬರವಾಗಿ ಪರಿವರ್ತಿಸಿ ಗದ್ದೆಹೊಲಗಳಿಗೆ ಹಾಕಿದರೆ ಸಾಕು. ಬಂಜರುತನ ಕಳೆದುಕೊಂಡು ಫಲವತ್ತೆಗೊಳ್ಳುತ್ತದೆ. ಸಕ್ಕರೆಯ ಕೊಳೆಯಲ್ಲಿ ರಾಸಾಯನಿಕ ಕ್ರಿಯೆ ಹೊಂದಿ ಶೇ. ೩೪ ಜೈವಿಕ್ ಕಾರ್ಬನ್, ಶೇ. ೧.೬೩ ನೆಟ್ರೋಜಿನ್ ಶೇ. ೨.೫೨ ಪಾಸ್ಫೇಟ್, ಶೇ. ೦.೫೫ ಪೋಟ್ಯಾಶ್, ಶೇ ೪.೭೪ ಕ್ಯಾಲ್ಸಿಯಂ ಆಕ್ಸೈಡ್ ಅಲ್ಲದೆ ಕಬ್ಬಿಣ ಮ್ಯಾಂಗನೀಸ್ ಮತ್ತು ಜಿಂಕ್ ಸಹ ಅಡಕವಾಗಿರುತ್ತದೆ.

ಈ ಸಕ್ಕರೆಯ ಕೊಳೆಯಲ್ಲಿರುವ ಜೈವಿಕ ಕಾರ್ಬನನ್ನು ಗೊಬ್ಬರವಾಗಿ ಉಪಯೋಗಿಸುವುದರಿಂದ ಭೂಮಿಯ ಭೌತಿಕ ಸ್ವರೂಪವು, ಜಲರಕ್ಷಣೆಯ ಸಾಮರ್ಥ್ಯ ಹಾಗೂ ಫಲವತ್ತತೆಯಲ್ಲಿ ಅಭಿವೃದ್ದಿ ಆಗುವುದು ಮತ್ತು ಜಮೀನಿನೊಳಗೆ ವಾಯುವಿನ ಸುಗಮ ಚಲನವಲನಕ್ಕೂ ಅನುಕೂಲವಾಗುವುದು. ಇದರ ಬಳಕೆಯ ಕುರಿತು ವಿಜ್ಞಾನಿಗಳು ರೈತರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತಾರೆ. ಇದನ್ನು ನೇರವಾಗಿ ಹೊಲದಲ್ಲಿ ಹಾಕದೇ ಸಗಣಿ, ಸೊಪ್ಪು, ಕಸಕಡ್ಡಿ ಒಂದಿಷ್ಟು ಪಾಸ್ಫೇಟ್ ಹಾಗೂ ಜೀವಾಣು ಪಲ್ಪರ್ ಸೇರಿಸಿ ಕನಿಷ್ಟ ೯೦ ದಿನಗಳವರೆಗೆ ಕೊಳೆಯಿಸಿ ನಂತರವೇ ಗದ್ದೆಗಳಲ್ಲಿ ಪ್ರಯೋಗಿಸಬೇಕು. ಇದರಂತೆ ಒದಗಿಸಿದಲ್ಲಿ ಬಂಜರು ಭೂಮಿಯನ್ನು ಫಲವತ್ತತೆಯನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಕಂಡು ಹಿಡಿದ ಈ ನಾಡಿನಲ್ಲಿ೩೨ ಲಕ್ಷ ರೈತರು ೨೦ ಲಕ್ಷ ಹೆಕ್ಟೇರುಗಳಲ್ಲಿ ಇದನ್ನು ಹಾಕಿ ಕೃಷಿ ಮಾಡುತ್ತಿದ್ದಾರೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...