Home / ಲೇಖನ / ಕೃಷಿ / ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಕೃಷಿ ಸಸ್ಯಗಳಲ್ಲೇ ಕಳೆನಾಶಕ ರಾಸಾಯನ

ಚಿತ್ರ: ಐಲೋನ

ನಿಮ್ಮ ಹೊಲದ ಬೇಲಿಗುಂಟ ನೀಲಗಿರಿ ಗಿಡಗಳನ್ನು ಹಚ್ಚಿರುತ್ತೀರಿ. ಆ ಗಿಡಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುತ್ತಿರುವ ಇನ್ನಿತರ ಯಾವುದೇ ಸಸ್ಯಗಳು ಕ್ರಮೇಣ ಸತ್ತು ಹೋಗುತ್ತವೆ, ಅಥವಾ ಯಾವುದೇ ಹೊಸ ಸಸ್ಯಗಳು ಅದರ ಅಡಿಯಲ್ಲಿ ಬೆಳೆಯುವುದುದಿಲ್ಲ. ಇದನ್ನು ಗಮನಿಸಿದ್ದೀರಾ? ಇದಕ್ಕೆ ಕಾರಣ ಸಸ್ಯಗಳಲ್ಲಿ ನಡೆಯುವ ರಾಸಾಯನಿಕ ಸಮರ! ಅಂದರೆ ಕೆಲವು ಸಸ್ಯಗಳು ನಿಷೇಧಕ ರಾಶಯನಿಕಗಳನ್ನು ತಯಾರಿಸಿ ಇನ್ನಿತರ ಸಸ್ಯಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತವೆ.

ಕಳೆನಾಶಕ ರಸಾಯನ
ಸಸ್ಯಗಳಲ್ಲಿ ದ್ವಿತೀಯಕ ಪದಾರ್ಥಗಳು ಉತ್ಪತ್ತಿಯಾಗುತ್ತವಷ್ಟೇ. ಅವು ಬೇರು ಅಥವಾ ಎಲೆಗಳ ಮುಖಾಂತರ ಮಣ್ಣನ್ನು ಸೇರುತ್ತವೆ. ಅಲ್ಲಿ ಕಳೆನಾಶಕ ರಸಾಯನದ ಹಾಗೆ ವರ್ತಿಸುತ್ತವೆ.

ಅಕ್ರೋಡ ಗಿಡದ ಸುತ್ತಮುತ್ತಲಿನ ಸಸ್ಯಗಳು ಮತ್ತು ಹುಲ್ಲು ಸರಿಯಾಗಿ ಏಕೆ ಬೆಳೆಯುತ್ತಿಲ್ಲ ಎಂದು ವಿಜ್ಞಾನಿಗಳು ಪ್ರಶ್ನೆ ಹಾಕಿಕೊಂಡು ಸಂಶೋಧನೆ ನಡೆಸಿದರು. ಪರೀಕ್ಷಿಸಿದಾಗ ಅದರ ಎಲೆ, ತೊಗಟೆ, ಹಣ್ಣಿನ ಸಿಪ್ಪೆ ಮತ್ತಿತರ ಅಂಗಾಂಗಗಳಿಂದ ‘ಜುಗ್ಲೋನ್’ ಎಂಬ ರಾಸಾಯನಿಕ ಬೇರ್ಪಡಿಸಲಾಯಿತು. ಈ ರಾಸಾಯನಿಕ ಮಣ್ಣನ್ನು ಸೇರಿ, ಆಕ್ಸೀಡೀಕರಣವಾಗಿ ಇತರ ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸಿತ್ತು.

ಮಣ್ಣಿಗೆ ಆವಿಶೀಲ ತೈಲ
ಸಾಲ್ವಿಯಾ ಜಾತಿಯ ಮರಗಳ ಎಲೆಗಳು ನೆಲಕ್ಕೆ ಬಿದ್ದಾಗ ಆವಿಶೀಲ ತೈಲವನ್ನು ಮಣ್ಣಿಗೆ ಬಿಡುತ್ತವೆ. ಅದು ಇನ್ನಿತರ ಸಸ್ಯಗಳ ಬೀಜಗಳು ಮೊಳಕೆಒಡೆಯದ ಹಾಗೆ ತಡೆ ಒಡ್ಡುತ್ತವೆ. ಕ್ಲಿರೋಡೆಂಡ್ರಾನ್ ಸಸ್ಯವು ವಿಸರ್ಜಿಸುವ ರಾಸಾಯನಿಕದಿಂದ ತುರುಬಿಗಿಡ, ಮುಳ್ಳ ಕೀರೆ ಸೊಪ್ಪು, ಚಗಚಿ ಇತ್ಯಾದಿ ಸಸ್ಯಗಳು ಒಣಗಿಹೋಗುತ್ತವೆ. ಪಾರ್ಥೇನಿಯಂ, ಆಡನ್‌ಸೋನಿಯ ಮತ್ತಿತರ ಸಸ್ಯಗಳೂ ರಾಸಾಯನಿಕಗಳನ್ನು ವಿಸರ್ಜಿಸುತ್ತವೆ.

ಮಣ್ಣಿನಲ್ಲಿರುವ ಪೆನಿಸಿಲಿಯಂ ಶಿಲೀಂಧ್ರ ಪ್ರತಿ ಜೈವಿಕ ಪದಾರ್ಥ ಉತ್ಪತ್ತಿ ಮಾಡಿ ಬಿಡುಗಡೆ ಮಾಡುತ್ತದೆ. ಅದರಿಂದ ಅನೇಕ ಬ್ಯಾಕ್ಟೀರಿಯಾ ಪ್ರಭೇದಗಳು ನಾಶವಾಗುತ್ತವೆ. ಹೀಗೆ ಸಸ್ಯಗಳು ಒಸರುವ ರಾಸಾಯನಿಕಗಳಲ್ಲಿ ಕೆಲವನ್ನು ಮಾತ್ರ ಗುರುತಿಸಲಾಗಿದೆ. ಅವು ಫಿನೋಲಿಕ್ ಆಮ್ಲ, ಲ್ಯಾಕ್ಟೋನ್‌ಗಳು, ಕ್ಯಾಂಫರ್‍, ನಾರಿಂಗಿನಿನ್, ಸ್ಕೇಲಿನ್, ಆರ್ಬುಟಿವ್ ಇತ್ಯಾದಿ. ಗುರುತಿಸಲಾಗದ ಅನೇಕ ರಾಸಾಯನಿಕಗಳು ಸವಾಲಾಗಿ ನಿಂತಿವೆ. ಸಸ್ಯಗಳು ವಿಸರ್ಜಿಸುವ ರಾಸಾಯನಿಕವು ಒಂದು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದರೆ ಇನ್ನೊಂದರ ಬೆಳವಣಿಗೆ ಶೀಘ್ರಗೊಳಿಸಲೂಬಹುದು!

ಸಸ್ಯಗಳು ರಾಸಾಯನಿಕ ಸಮರದಿಂದ ತಮ್ಮ ವೈರಿಯನ್ನು ಹೀಗೆ ಹತೋಟಿಯಲ್ಲಿಡುತ್ತವೆ. ಇದು ವಿನಾಶಕಾರಿ ಕಳೆ ಗಿಡಗಳನ್ನು ನಿಯಂತ್ರಿಸಲು ಹೊಸದೊಂದು ಪರಿಣಾಮಕಾರಿ ರಾಸಾಯನಿಕಗಳ ಆವಿಷ್ಕಾರಕ್ಕೆ ನಾಂದಿ ಆಗಬಹುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...