ಭೂತಾಯಿ ರಕ್ಷಣೆ

ಭೂತಾಯಿ ರಕ್ಷಣೆ

ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ
ಎಳ್ಳು ಜೀರಿಗೆ ಬೆಳಿಯೋಳ-ಭೂಮಿ ತಾಯಿಯ
ಎದ್ದೊಂದ ಗಳಿಗೆ ನೆನೆದೇನ.

ಹಳ್ಳಿಯ ಮಹಿಳೆಯೊಬ್ಬಳು ಈ ಜಾನಪದ ಹಾಡಿನ ಮೂಲಕ ಭೂಮಿತಾಯಿಯ ಬಗ್ಗೆ ಅಭಿಮಾನದಿಂದ ನೆನೆದು ಹಾಡುತ್ತಾಳೆ. ಭಾರತ ಹಳ್ಳಿಗಳ ದೇಶವಾಗಿದೆ. ರೈತನೆ ಅನ್ನದಾತ. ನಮ್ಮೆಲ್ಲರನ್ನು ಸಲಹುವಳೆ ಭೂಮಿತಾಯಿ. ಅಂತಲೇ ಭುದೇವಿಯ ನೆನೆಯದೇ ವಿಧಿಯಿಲ್ಲ. ಬದುಕಿನುದ್ದಕ್ಕೂ ಭೂಮಿಯನ್ನೇ ನಂಬಿಕೊಂಡು ಬಾಳಿರುವ ರೈತ ಅವನ ಬೆವರಿನ ಫಲವೇ ನಮ್ಮ ಕೈಯೊಳಗಿನ ತುತ್ತು. ಆದರೆ ಇಂದು ಕಾಲ ಬದಲಾಗಿದೆ. ನಮ್ಮ ರಕ್ತದ ಕಣ ಕಣದಲ್ಲೂ ಭೂದೇವಿಯು ನೀಡಿದ ಆಹಾರದಂಶವಿದ್ದರೂ ಜಾಗತೀಕರಣದ ಅವಸರದಲ್ಲಿ ಭೂಮಿಯ ಫಲವತತ್ತೆ ಮತ್ತು ಅದರ ಮಹತ್ವ ನಾವು ಮರೆಯುತ್ತಿದ್ದೇವೆ.

ಇವತ್ತು ಹಳ್ಳಿ ಹಳ್ಳಿಗಳಲ್ಲೂ ಜಾಗತೀಕರಣದ ಬಿಸಿ ತಟ್ಟಿದೆ. ಎಲ್ಲರಿಗೂ ಹಣ ಸಂಪಾದನೆಯೇ ಗುರಿಯಾಗಿದೆ. ಟಿವಿಗಳು ನಮ್ಮ ಮನೆಗೆ ಲಗ್ಗೆ ಹಾಕಿದ ಮೇಲೆ ದುಡಿಮೆ, ಪರಿಶ್ರಮಗಳಿಗೆ ಗ್ರಹಣ ಹಿಡಿಯಿತ್ತಿದೆಯೋ ಎನಿಸದೆ ಇರದು. ಅಂತಲೇ ಸರ್‍ವಜ್ಞ ತನ್ನ ತ್ರಿಪದಿಗಳಲ್ಲಿ ಬೇಸಾಯಕ್ಕೆ ಮಹತ್ವ ಕೊಡುತ್ತಾನೆ.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ
ದಾಟವೇ ಕೆಡಗು ಸರ್‍ವಜ್ಞ

ಅನೇಕ ವಿದ್ಯೆಗಳಲ್ಲಿ ವ್ಯವಸಾಯವೇ ಶ್ರೇಷ್ಠ, ಅದು ಮೇಟಿ ವಿದ್ಯೆ. ಅದರಿಂದ ರಾಟಿ ನಡೆದು ದೇಶವೇ ಬೆಳಗುವುದು. ಇಲ್ಲದಿದ್ದರೆ ಇನ್ನಾವ ಆಟವೂ ಕೆಡಗು ಎನ್ನುವ ಕವಿಯ ಭಾವ ನಿಜಕ್ಕೂ ಮೆಚ್ಚುವಂಥದ್ದು. ಆದರೆ ಇಂದು ಬೇಸಾಯಕ್ಕೆ ಜನರು ನಿರ್‍ಲಕ್ಷ್ಯ ಮಾಡುತ್ತಿರುವುದು ದುರ್‍ದೈವದ ಸಂಗತಿ. ಇಂದಿನ ದಿನಗಳಲ್ಲಿ ರೈತನು ವ್ಯವಸಾಯ ಮಾಡಿ ಹೆಚ್ಚಿನ ಇಳುವರಿ ತೆಗೆಯುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರ, ವಿಷಯುಕ್ತ ಔಷಧಗಳನ್ನು ಬೆಳೆಗಳಿಗೆ ನೀಡಿ ಹೆಚ್ಚಿನ ಬೆಳೆ ರಾಶಿಯ ನಿರೀಕ್ಷೆಯಲ್ಲಿ ಭೂಮಿಯನ್ನು ಬಂಜರುಗೊಳಿಸುತ್ತಿದ್ದಾನೆ. ಇದರಿಂದಾಗಿ ವಾತಾವರಣ ಕಲುಷಿತಗೊಳ್ಳುವುದಷ್ಟೇ ಅಲ್ಲದೆ ಬೆಳೆಗಳಲ್ಲಿ ವಿಷದಂಶವು ತುಂಬಿ ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಇಂದು ಇಂಥ ರಾಸಾಯನಿಕ ಪದಾರ್‍ಥಗಳಿಂದ ಮುಕ್ತಗೊಳ್ಳಲು ನಾವು ಸಾವಯವ ಕೃಷಿ ಮಾಡಬೇಕಿದೆ. ಈಗೀಗ ಜಗತ್ತಿನಲ್ಲಿ ಯಂತ್ರ, ವಾಹನಗಳ ಸಂಖ್ಯೆ ಜಾಸ್ತಿಯಾಗಿ ಇಂಧನ ಉಪಯೋಗದಿಂದ ವಾತಾವರಣ ಕೆಡುತಿದ್ದು ಜೈವಿಕ ಇಂಧನಕ್ಕೆ ಸಂಬಂಧಿಸಿದ ಗಿಡ-ಮರಗಳನ್ನು ನೆಟ್ಟು ದೇಶದ ಆರೋಗ್ಯ ಕಾಪಾಡಬೇಕಿದೆ.

ರೈತನು ದೇಶದ ಬೆನ್ನೆಲುಬು, ಅನ್ನದಾತನೆಂದು ಹೊಗಳಿದರೂ ಇಂದು ರೈತನಿಗೆ ಉಳಿಗಾಲವಿಲ್ಲವಾಗಿದೆ. ಬಿತ್ತಿದ ಬೀಜ ಮೊಳಕೆಯೊಡೆಯದಿದ್ದಾಗ ಮೊಳಕೆಯೊಡೆದರೂ ಬೆಳೆ ಬೆಳೆಯದಿದ್ದಾಗ ಬೆಳೆ ಬೆಳೆದರೂ ಧಾನ್ಯಕ್ಕೆ ಕೈತುಂಬ ಹಣ ಬರದೇ ಇದ್ದಾಗ ಅವನ ಬದುಕು ನಿತ್ಯ ಸಾಯುತ್ತಿದೆ. ಬದುಕನ್ನು ಎದುರಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅಂತಲೇ ಇಂದು ಭೂಮಿತಾಯಿ ಅವನ ಮೇಲೆ ಮುನಿದಿದ್ದಾಳೆ, ಹೆಜ್ಜೆ ಹೆಜ್ಜೆಗೂ ರಕ್ಷಿಸುವ ಭೂತಾಯಿ ಫಲವತತ್ತೆ ಕಾಪಾಡುವುದು ನಮ್ಮೆಲ್ಲರ ಕರ್‍ತವ್ಯವಾಗಿದೆ. ಅಂತಲೇ ಇಂದು ಸರ್‍ಕಾರ ಮತ್ತು ಸಮಾಜ ಭೂತಾಯಿಯತ್ತ ವಾಲುತ್ತಿದೆ. ರೈತನಿಗೆ ಭೂಮಿಯ ಮಣ್ಣಿನ ಬಗ್ಗೆ ತಿಳುವಳಿಕೆ, ಬೀಜ, ಗೊಬ್ಬರ, ಸಾವಯವ ಕೃಷಿ ಸೊನ್ನೆ ಬಂಡವಾಳದಲ್ಲಿ ಭೂಮಿಯಲ್ಲಿ ಬೆಳೆ ಇಳುವರಿಗಳತ್ತ ನಾವು ದಾಪುಗಾಲು ಆರೋಗ್ಯಕರ ಲಕ್ಷಣವಾಗಿದೆ. ಹಾಕುತ್ತಿರುವುದು ಆರೋಗ್ಯಕರ ಲಕ್ಷಣವಾಗಿದೆ.

ಸ್ವಚ್ಛವಾದ ಪರಿಸರ, ನಿರಾಂತರವಾದ ಬಾಳಾಗಬೇಕಾದರೆ ಪರಿಸರ ಮಾಲಿನ್ಯ ತಡೆಗಟ್ಟಬೇಕಾದರೆ ಸಾವಯವ ಕೃಷಿ ಮಾಡಬೇಕಿದೆ. ಜೀವನ ಸಾರ್‍ಥಕಗೊಳಿಸಬೇಕಿದೆ. ಭೂಮಿಯ ರಕ್ಷಣೆ ನಮ್ಮೆಲ್ಲರ ಕರ್‍ತವ್ಯವಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒತ್ತಿದೋಟಿನ ಸರಕಾರವೆಲ್ಲಿಹುದು?
Next post ಕರುಳು

ಸಣ್ಣ ಕತೆ

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…