Home / ಲೇಖನ / ಕೃಷಿ / ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಅಸಂಖ್ಯಾತ ಕೀಟಗಳ ಭಾಧೆಯಿಂದಾಗಿ ರೈತ ಬೆಳೆದ ಬೆಳೆಗಳು ನಾಶಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳಿವೆ. ಸಾಲಮಾಡಿ ಉತ್ತು ಬಿತ್ತಿದ ರೈತನಿಗೆ ಈ ಕೀಟಗಳ ಭಾಧೆಯಿಂದ ಬೆಳೆಗಳೆಲ್ಲ ಅಸ್ತಿ ಪಂಜರವಾಗಿ ಉತ್ಪನ್ನ ಶೂನ್ಯವಾಗಿ ಬಿಡುತ್ತದೆ. ಬೌಮಿಸಿಯ ಟಬಾಕಿ ಎನ್ನುವ ವೈಜ್ಞಾನಿಕ ಹೆಸರಿನ ಪ್ರಾಣಿ ಒಂದು ಅಪಾಯಕಾರಿ ಕೀಟವಾಗಿದೆ. ಇದೊಂದು ಬಿಳಿಯಬಣ್ಣದ ನೊಣವಾಗಿದ್ದು ಸು. ೬೦೦ ಬಗೆಯ ಕೃಷಿ ಬೆಳೆಗಳಿಗೆ ಮಾರಕವಾಗಿದೆ. ಜೆಮಿಸಿಯಾ ನೊಣಗಳಲ್ಲಿ ಇರುವ ಬಿ ಜೈಯೋಟೈಪ್, ಎನ್ನುವ ಜಾತಿಯಂತೂ ಕೃಷಿಬೆಳೆಗೆ ಪರಮ ಶತೃವಾಗಿದೆ. ಈ ಜಾತಿಯ ನೊಣಗಳು ೫ ಪಟ್ಟು ಹೆಚ್ಚು ವೇಗವಾಗಿ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಸು. ೬೦ ಬಗೆಯ ರೋಗಕಾರಕ ವೈರಸ್‌ಗಳನ್ನು ಗಿಡದಿಂದ ಗಿಡಕ್ಕೆ ಪ್ರಸಾರ ಮಾಡುತ್ತ ಹೋಗುತ್ತವೆ. ಈ ಕೃಷಿ ಪೀಡೆಯ ವಿರುದ್ದ ಸೂಕ್ತಮದ್ದಿನ ತಯಾರಿಕೆಗಾಗಿ ವಿಜ್ಞಾನಿಗಳು ಬಹುಕಾಲದಿಂದ ಸಂಶೋಧನೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಒಂದು ಪುಟ್ಟ ಗಾತ್ರದ ಗಿಡವೊಂದು ಬೆಮಿಸಿಯಾ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸುವುದು, ಪತ್ತೆಯಾಗಿದೆ. ಹಳದಿ ಬಣ್ಣದ ಹೂಗಳನ್ನು ಬೀರುವ ಈ ಸಸ್ಯದ ವೈಜ್ಞಾನಿಕ ಹೆಸರು “ಕ್ಯಾಲ್ಸಿಯೋಲೇರಿಯಾ ಆಂಡಿನಾ” ಈ ಗಿಡದಲ್ಲಿರುವ ಎರಡು ಬಗೆಯ ರಾಸಾಯನಿಕಗಳು ಬೆಮಿಸಿಯಾ ನೊಣಗಳ ಪೈಕಿ ಹೆಚ್ಚು ಅಪಾಯಕಾರಿಯಾದ ಬಿ ಬಯೋಟೈಟ್, ನೊಣಗಳನ್ನು ಹತೋಟಿಯಲ್ಲಿಡುತ್ತದೆ. ಕ್ಯಾಲ್ಸಿಯೋಲೇರಿಯಾ ಸಸ್ಯದಲ್ಲಿ ಇರುವ ರಾಸಾಯನಿಕಗಳು ಬೆಸಿಮಿಯಾ ನೊಣಗಳನ್ನು ಅಲ್ಲದೇ ಗಿಡಹೇನು ಮತ್ತು ಇನ್ನಿತರೆ ಕೃಷಿ ಪೀಡೆಗಳನ್ನು ಸಹ ನಾಶಪಡಿಸುವುದಾಗಿ ತಿಳಿದು ಬಂದಿದೆ. ಮಹತ್ವದ ಸಂಗತಿ ಎಂದರೆ ಗಿಡದ ಸಾರವನ್ನು ನಿಯಂತ್ರಿಸುವುದಾಗಿ ತಿಳಿದು ಬಂದಿದೆ. ಈ ಕೀಟಗಳು ಈಗ ಆಧುನಿಕ ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳಸಿಕೊಂಡು ಕೃಷಿ ವಿಜ್ಞಾನಿಗಳಿಗೆ ತಲೆನೋವು ತಂದಿದ್ದವು.

ಅಂತರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡವೊಂದು ನಾಲ್ಕು ನೂರಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಕೀಟನಾಶಕ ಗುಣಗಳಿಗಾಗಿ ಸಂಗ್ರಹಿಸಿ ಸಮಗ್ರವಾಗಿ ಅಧ್ಯಯನ ನಡೆಸುತ್ತಿರುವಾಗ ಈ ಗಿಡದ ಕುರಿತು ತಿಳಿದು ಬಂತು. ಚಿಲಿ ವಿಶ್ವವಿದ್ಯಾಲಯದ ಹರ್ಮನ್ ನೈಲೇ ಯರ್ ಎಂಬ ವಿಜ್ಞಾನಿ ಈ ಸಸ್ಯ ಸಂಗ್ರಹಣಾ ಕಾರ್ಯವನ್ನು ಮಾಡಿದ್ದರು. ಕ್ಯಾಲ್ಸಿಯೋಲೇರಿಯಾ ಗಿಡಗಳ ಕೀಟ ನಾಶಕ ಸಾಮರ್ಥ್ಯ ಹೆಚ್ಚಿಸಿದ್ದಾಗಿದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್