Home / ಲೇಖನ / ಕೃಷಿ / ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಅಸಂಖ್ಯಾತ ಕೀಟಗಳ ಭಾಧೆಯಿಂದಾಗಿ ರೈತ ಬೆಳೆದ ಬೆಳೆಗಳು ನಾಶಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳಿವೆ. ಸಾಲಮಾಡಿ ಉತ್ತು ಬಿತ್ತಿದ ರೈತನಿಗೆ ಈ ಕೀಟಗಳ ಭಾಧೆಯಿಂದ ಬೆಳೆಗಳೆಲ್ಲ ಅಸ್ತಿ ಪಂಜರವಾಗಿ ಉತ್ಪನ್ನ ಶೂನ್ಯವಾಗಿ ಬಿಡುತ್ತದೆ. ಬೌಮಿಸಿಯ ಟಬಾಕಿ ಎನ್ನುವ ವೈಜ್ಞಾನಿಕ ಹೆಸರಿನ ಪ್ರಾಣಿ ಒಂದು ಅಪಾಯಕಾರಿ ಕೀಟವಾಗಿದೆ. ಇದೊಂದು ಬಿಳಿಯಬಣ್ಣದ ನೊಣವಾಗಿದ್ದು ಸು. ೬೦೦ ಬಗೆಯ ಕೃಷಿ ಬೆಳೆಗಳಿಗೆ ಮಾರಕವಾಗಿದೆ. ಜೆಮಿಸಿಯಾ ನೊಣಗಳಲ್ಲಿ ಇರುವ ಬಿ ಜೈಯೋಟೈಪ್, ಎನ್ನುವ ಜಾತಿಯಂತೂ ಕೃಷಿಬೆಳೆಗೆ ಪರಮ ಶತೃವಾಗಿದೆ. ಈ ಜಾತಿಯ ನೊಣಗಳು ೫ ಪಟ್ಟು ಹೆಚ್ಚು ವೇಗವಾಗಿ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಸು. ೬೦ ಬಗೆಯ ರೋಗಕಾರಕ ವೈರಸ್‌ಗಳನ್ನು ಗಿಡದಿಂದ ಗಿಡಕ್ಕೆ ಪ್ರಸಾರ ಮಾಡುತ್ತ ಹೋಗುತ್ತವೆ. ಈ ಕೃಷಿ ಪೀಡೆಯ ವಿರುದ್ದ ಸೂಕ್ತಮದ್ದಿನ ತಯಾರಿಕೆಗಾಗಿ ವಿಜ್ಞಾನಿಗಳು ಬಹುಕಾಲದಿಂದ ಸಂಶೋಧನೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಒಂದು ಪುಟ್ಟ ಗಾತ್ರದ ಗಿಡವೊಂದು ಬೆಮಿಸಿಯಾ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸುವುದು, ಪತ್ತೆಯಾಗಿದೆ. ಹಳದಿ ಬಣ್ಣದ ಹೂಗಳನ್ನು ಬೀರುವ ಈ ಸಸ್ಯದ ವೈಜ್ಞಾನಿಕ ಹೆಸರು “ಕ್ಯಾಲ್ಸಿಯೋಲೇರಿಯಾ ಆಂಡಿನಾ” ಈ ಗಿಡದಲ್ಲಿರುವ ಎರಡು ಬಗೆಯ ರಾಸಾಯನಿಕಗಳು ಬೆಮಿಸಿಯಾ ನೊಣಗಳ ಪೈಕಿ ಹೆಚ್ಚು ಅಪಾಯಕಾರಿಯಾದ ಬಿ ಬಯೋಟೈಟ್, ನೊಣಗಳನ್ನು ಹತೋಟಿಯಲ್ಲಿಡುತ್ತದೆ. ಕ್ಯಾಲ್ಸಿಯೋಲೇರಿಯಾ ಸಸ್ಯದಲ್ಲಿ ಇರುವ ರಾಸಾಯನಿಕಗಳು ಬೆಸಿಮಿಯಾ ನೊಣಗಳನ್ನು ಅಲ್ಲದೇ ಗಿಡಹೇನು ಮತ್ತು ಇನ್ನಿತರೆ ಕೃಷಿ ಪೀಡೆಗಳನ್ನು ಸಹ ನಾಶಪಡಿಸುವುದಾಗಿ ತಿಳಿದು ಬಂದಿದೆ. ಮಹತ್ವದ ಸಂಗತಿ ಎಂದರೆ ಗಿಡದ ಸಾರವನ್ನು ನಿಯಂತ್ರಿಸುವುದಾಗಿ ತಿಳಿದು ಬಂದಿದೆ. ಈ ಕೀಟಗಳು ಈಗ ಆಧುನಿಕ ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳಸಿಕೊಂಡು ಕೃಷಿ ವಿಜ್ಞಾನಿಗಳಿಗೆ ತಲೆನೋವು ತಂದಿದ್ದವು.

ಅಂತರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡವೊಂದು ನಾಲ್ಕು ನೂರಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಕೀಟನಾಶಕ ಗುಣಗಳಿಗಾಗಿ ಸಂಗ್ರಹಿಸಿ ಸಮಗ್ರವಾಗಿ ಅಧ್ಯಯನ ನಡೆಸುತ್ತಿರುವಾಗ ಈ ಗಿಡದ ಕುರಿತು ತಿಳಿದು ಬಂತು. ಚಿಲಿ ವಿಶ್ವವಿದ್ಯಾಲಯದ ಹರ್ಮನ್ ನೈಲೇ ಯರ್ ಎಂಬ ವಿಜ್ಞಾನಿ ಈ ಸಸ್ಯ ಸಂಗ್ರಹಣಾ ಕಾರ್ಯವನ್ನು ಮಾಡಿದ್ದರು. ಕ್ಯಾಲ್ಸಿಯೋಲೇರಿಯಾ ಗಿಡಗಳ ಕೀಟ ನಾಶಕ ಸಾಮರ್ಥ್ಯ ಹೆಚ್ಚಿಸಿದ್ದಾಗಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...