Home / ಲೇಖನ / ಕೃಷಿ / ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಬೆಳೆನಾಶಗೊಳಿಸುವ ಕೀಟಗಳ ವಿರುದ್ಧ ಹೊಸ ಅಸ್ತ್ರ

ಅಸಂಖ್ಯಾತ ಕೀಟಗಳ ಭಾಧೆಯಿಂದಾಗಿ ರೈತ ಬೆಳೆದ ಬೆಳೆಗಳು ನಾಶಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳಿವೆ. ಸಾಲಮಾಡಿ ಉತ್ತು ಬಿತ್ತಿದ ರೈತನಿಗೆ ಈ ಕೀಟಗಳ ಭಾಧೆಯಿಂದ ಬೆಳೆಗಳೆಲ್ಲ ಅಸ್ತಿ ಪಂಜರವಾಗಿ ಉತ್ಪನ್ನ ಶೂನ್ಯವಾಗಿ ಬಿಡುತ್ತದೆ. ಬೌಮಿಸಿಯ ಟಬಾಕಿ ಎನ್ನುವ ವೈಜ್ಞಾನಿಕ ಹೆಸರಿನ ಪ್ರಾಣಿ ಒಂದು ಅಪಾಯಕಾರಿ ಕೀಟವಾಗಿದೆ. ಇದೊಂದು ಬಿಳಿಯಬಣ್ಣದ ನೊಣವಾಗಿದ್ದು ಸು. ೬೦೦ ಬಗೆಯ ಕೃಷಿ ಬೆಳೆಗಳಿಗೆ ಮಾರಕವಾಗಿದೆ. ಜೆಮಿಸಿಯಾ ನೊಣಗಳಲ್ಲಿ ಇರುವ ಬಿ ಜೈಯೋಟೈಪ್, ಎನ್ನುವ ಜಾತಿಯಂತೂ ಕೃಷಿಬೆಳೆಗೆ ಪರಮ ಶತೃವಾಗಿದೆ. ಈ ಜಾತಿಯ ನೊಣಗಳು ೫ ಪಟ್ಟು ಹೆಚ್ಚು ವೇಗವಾಗಿ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಸು. ೬೦ ಬಗೆಯ ರೋಗಕಾರಕ ವೈರಸ್‌ಗಳನ್ನು ಗಿಡದಿಂದ ಗಿಡಕ್ಕೆ ಪ್ರಸಾರ ಮಾಡುತ್ತ ಹೋಗುತ್ತವೆ. ಈ ಕೃಷಿ ಪೀಡೆಯ ವಿರುದ್ದ ಸೂಕ್ತಮದ್ದಿನ ತಯಾರಿಕೆಗಾಗಿ ವಿಜ್ಞಾನಿಗಳು ಬಹುಕಾಲದಿಂದ ಸಂಶೋಧನೆ ನಡೆಯಿಸಿ ಯಶಸ್ವಿಯಾಗಿದ್ದಾರೆ. ಒಂದು ಪುಟ್ಟ ಗಾತ್ರದ ಗಿಡವೊಂದು ಬೆಮಿಸಿಯಾ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸುವುದು, ಪತ್ತೆಯಾಗಿದೆ. ಹಳದಿ ಬಣ್ಣದ ಹೂಗಳನ್ನು ಬೀರುವ ಈ ಸಸ್ಯದ ವೈಜ್ಞಾನಿಕ ಹೆಸರು “ಕ್ಯಾಲ್ಸಿಯೋಲೇರಿಯಾ ಆಂಡಿನಾ” ಈ ಗಿಡದಲ್ಲಿರುವ ಎರಡು ಬಗೆಯ ರಾಸಾಯನಿಕಗಳು ಬೆಮಿಸಿಯಾ ನೊಣಗಳ ಪೈಕಿ ಹೆಚ್ಚು ಅಪಾಯಕಾರಿಯಾದ ಬಿ ಬಯೋಟೈಟ್, ನೊಣಗಳನ್ನು ಹತೋಟಿಯಲ್ಲಿಡುತ್ತದೆ. ಕ್ಯಾಲ್ಸಿಯೋಲೇರಿಯಾ ಸಸ್ಯದಲ್ಲಿ ಇರುವ ರಾಸಾಯನಿಕಗಳು ಬೆಸಿಮಿಯಾ ನೊಣಗಳನ್ನು ಅಲ್ಲದೇ ಗಿಡಹೇನು ಮತ್ತು ಇನ್ನಿತರೆ ಕೃಷಿ ಪೀಡೆಗಳನ್ನು ಸಹ ನಾಶಪಡಿಸುವುದಾಗಿ ತಿಳಿದು ಬಂದಿದೆ. ಮಹತ್ವದ ಸಂಗತಿ ಎಂದರೆ ಗಿಡದ ಸಾರವನ್ನು ನಿಯಂತ್ರಿಸುವುದಾಗಿ ತಿಳಿದು ಬಂದಿದೆ. ಈ ಕೀಟಗಳು ಈಗ ಆಧುನಿಕ ಕೀಟನಾಶಕಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳಸಿಕೊಂಡು ಕೃಷಿ ವಿಜ್ಞಾನಿಗಳಿಗೆ ತಲೆನೋವು ತಂದಿದ್ದವು.

ಅಂತರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡವೊಂದು ನಾಲ್ಕು ನೂರಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಕೀಟನಾಶಕ ಗುಣಗಳಿಗಾಗಿ ಸಂಗ್ರಹಿಸಿ ಸಮಗ್ರವಾಗಿ ಅಧ್ಯಯನ ನಡೆಸುತ್ತಿರುವಾಗ ಈ ಗಿಡದ ಕುರಿತು ತಿಳಿದು ಬಂತು. ಚಿಲಿ ವಿಶ್ವವಿದ್ಯಾಲಯದ ಹರ್ಮನ್ ನೈಲೇ ಯರ್ ಎಂಬ ವಿಜ್ಞಾನಿ ಈ ಸಸ್ಯ ಸಂಗ್ರಹಣಾ ಕಾರ್ಯವನ್ನು ಮಾಡಿದ್ದರು. ಕ್ಯಾಲ್ಸಿಯೋಲೇರಿಯಾ ಗಿಡಗಳ ಕೀಟ ನಾಶಕ ಸಾಮರ್ಥ್ಯ ಹೆಚ್ಚಿಸಿದ್ದಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...