Home / ಲೇಖನ / ಕೃಷಿ / ಬಡವರ ನವಣೆ

ಬಡವರ ನವಣೆ

೧೯೬೩-೧೯೬೪ರಲ್ಲಿ ನಮ್ಮಪ್ಪನ ಹಿಂದಿಂದೆ… ಎರೆಹೊಲ, ಕೆನ್ನೊಲ, ಕಣಗಳಿಗೆ ಸುತ್ತುತ್ತಿದ್ದೆ.

ನೂರಾರು ಎಕರೆ ಬರೀ ನವಣೆಯನ್ನೇ ಬೆಳೆಯುತ್ತಿದ್ದರು. ನೂರಾರು ರೈತರು ಕೂಡಾ ಕಡ್ಡಾಯವಾಗಿ ನೂರಾರು ಚೀಲದಿಂದ ಹಿಡಿದು ಕನಿಷ್ಠ ಹತ್ತು ಚೀಲಗಳಾದರೂ ನವಣೆ ಬೆಳೆದು ಖುಷಿಪಡುತ್ತಿದ್ದರು.

ಕೆಲವರಂತೂ ಪ್ರತಿ ವರ್‍ಷ ನವಣೆ ಬೆಳೆದು ಅವುಗಳನ್ನು ಬಂಡಿಗಳ ಮೇಲೆ ಮೆರವಣಿಗೆ ಮಾಡುತ್ತಾ ತಾಳಮೇಳ ಭಾಜಭಜಂತ್ರಿಯಲ್ಲಿ ಮನೆದುಂಬಿಸಿಕೊಳ್ಳುತ್ತಿದ್ದರಲ್ಲದೆ ಆವತ್ತು ಇಡೀ ಊರು ಕೇರಿಗೆಲ್ಲ ನವಣೆಬಾನ- ಹುರುಳಿಕಟ್ಟು, ಮಜ್ಜಿಗೆ ನವಣೆ ಅನ್ನ… ನೀಡಿ ಸಂಭ್ರಮಿಸುತ್ತಿದ್ದರು!

ನವಣೆ ಬೆಳೆ-ತೆನೆ-ನವಣೆ-ನವಣೆ ಅಕ್ಕಿ ಎಲ್ಲ… ಬಂಗಾರದ ಬಣ್ಣ… ಅದರ ಹೊಳಪು, ಘಮಾ ಘಮಾ.. ಹಬ್ಬ ಹರಿದಿನಗಳಲ್ಲಿ ನವಣೆ ಅನ್ನ ಇದ್ದರೆ ಹಬ್ಬ ಮುಗಿದಂತೇ…

ಒಮ್ಮೆ ನವಣೆ ಹೊಲದಲ್ಲಿ ನಿಂತು ಹರ್‍ಷದ ಹೊನಲು ಹರಿಸಿ ನಾನು ನನ್ನಪ್ಪನ ಕೇಳಿಯೇ ಬಿಟ್ಟೆ ‘ಅಪ್ಪ ನೂರಾರು ಜನರು ನೂರಾರು ಎಕರೆಯಲ್ಲಿ ಬರೀ ಎರೆಹೊಲದಲ್ಲಿ ನೀರು ಗೊಬ್ಬರವಿಲ್ಲದೆ ನವಣೆ ಬೆಳೆಯುವ ಗುಟ್ಟಾದರೂ ಏನು?’ ಅಂತಾ ಅಂದೆ.

‘ನವಣೆ ಗಟ್ಟಿ, ಆಯುಷ್ಯ ವೃದ್ಧಿ, ಮಳೆಯಿಲ್ಲದೆ ಗೊಬ್ಬರವಿಲ್ಲದೆ ಮೂರು ತಿಂಗಳಲ್ಲಿ ಸಮೃದ್ಧಿ ಬೆಳೆ. ನಮ್ಮಪ್ಪ ಬಬ್ಲೆಪ್ಪ, ತಾತ ದೊಡ್ಡೆಲ್ಲಪ್ಪ, ಮುತ್ತಾತ ನಡುವಲ ಯಲ್ಲಪ್ಪ ಇವರೆಲ್ಲ ನವಣೆ ಬೆಳೆದು ನಳನಳಸಿ ಬೆಳೆದಿದ್ದರು ಗಟ್ಟಿ ಮುಟ್ಟಾಗಿದ್ದರು.’ ಎಂದ ಅಪ್ಪ.

‘ಅಪ್ಪ ಇದರಲ್ಲಿ ಏನಿದೆ? ಅಂಥಾದೇನಿದೆ?’ ಎಂದೆ.

ಅಪ್ಪ ಮಾತುಗಾರ.

‘ಇದರಲ್ಲಿ ಏನಿಲ್ಲ ಎಂದು ನನ್ನ ಕೇಳು… ಮೂಳೆ ಬೆಳೆಯಲು ಗಟ್ಟಿಗೊಳ್ಳಲು ಇದರಲ್ಲಿ ಕ್ಯಾಲ್ಸಿಯಂ ಔಷಧಿ ಇದೆ. ಮಲಬದ್ಧತೆಗೆ ಮೂಲ ವ್ಯಾಧಿಗೆ ನಾರಿನಾಂಶವಿದೆ. ಶಕ್ತಿವರ್‍ಧಕವಾಗಿ ಪ್ರೋಟಿನ್ ಅಂಶವಿದೆ. ಜೀರ್‍ಣಶಕ್ತಿಗೆ ಕಾರ್‍ಬೋಹೈಡ್ರೇಟ್ ಅಂಶವಿದೆ. ಕೊಬ್ಬಿನಾಂಶ ಕಡಿಮೆ ಇದೆ. ಸಕ್ಕರೆ ಕಾಯಿಲೆಗೆ ರಾಮಬಾಣ. ಇದು ಮಕ್ಕಳಿಗೆ ವೃದ್ಧರಿಗೆ ಬಾಣಂತಿಯರಿಗೆ ಕಾಯಿಲೆವುಳ್ಳವರಿಗೆ ಸರ್‍ವೋತೋಮುಖ ಆಹಾರ. ಕ್ಯಾನ್ಸರ್ ನೀಗಿಸುವ ಗುಣ ಹೊಂದಿದೆ. ನವಣೆಯಿಂದ ಅನ್ನ-ಗಂಜಿ-ಮುದ್ದೆ-ರೊಟ್ಟಿ, ದೋಸೆ-ಹಪ್ಪಳ, ಸಂಡಿಗೆ, ಸಿಹಿತಿಂಡಿಗಳು ಖಾರದ ತಿಂಡಿ ತಿನಿಸುಗಳನ್ನು ಮಾಡಿ, ತಿನ್ನಬಹುದು. ಮೂರು ಹೊತ್ತು ತಿಂದರೆ ಅಡ್ಡ ಪರಿಣಾಮವಿಲ್ಲ! ಬದಲಿಗೆ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳುವುದೆಂದು ಅಪ್ಪ ವಿವರಿಸಿ ಹೇಳಿದ.

ಇದು ಬರೀ ಬಡವರ ನವಣೆಯಲ್ಲ. ಸರ್‍ವಜನರ ಸರ್‍ವೋತೋಮುಖ ಆಹಾರ.

ಇದನ್ನು ಮಕ್ಕಳೆಲ್ಲ ತಿಂದು, ಆರೋಗ್ಯವಂತರಾಗುವಿರಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...