Home / ಲೇಖನ / ವಿಜ್ಞಾನ / ನೀರಿನ ಶುದ್ದೀಕರಣಕ್ಕೆ ಓಝೋನ್

ನೀರಿನ ಶುದ್ದೀಕರಣಕ್ಕೆ ಓಝೋನ್

ಓಝೋನ್, ಪದರವು ವಾತಾವರಣದಲಿದ್ದು ಸೂರ್‍ಯನ ಅತಿ ನೇರಳೆ ಕಿರಣಗಳು ಭೂಮಿಗೆ ಬರದಂತೆ ಮಾಡುತವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಇದೊಂದು ಅನಿಂಪದರವಾಗಿದ್ದು, ಇದರಿಂದ ಅಶುದ್ದ ನೀರನ್ನು ಶುದ್ಧಿಕರಿಸಬಹುದೆಂದು ಫ್ರಾನ್ಸಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದನ್ನು ವಾತಾವರಣದಿಂದ ಪಡೆಯುವ ಬದಲು ಪ್ರಯೋಗಾಲಯದಲ್ಲಿಯೇ ಅಧಿಕ ವ್ರಮಾಣದಲ್ಲಿ ತಯಾರಿಸಿಕೊಳ್ಳಬಹುದು. ಓಝೋನ್ ಆಮ್ಲಜನಕವು ಒಂದು ಬಹುರೂಪಿಯಾಗಿದೆ. ಓಝೋನಿನ ಒಂದು ಅಣುವಿನಲಿ ಮೂರು ಆಮ್ಲ ಜನಕದ ಪರಮಾಣುಗಳಿರುತ್ತವೆ. ಓಝೋನಿನ ಅಣುಸೂತ್ರ O3 ಹೀಗಾಗಿ ಇದು ಒಳ್ಳೆಯ ಉತ್ಕರ್ಷಕಾರಿಯಾಗಿದೆ. ಮತ್ತು ದೃಢವಲ್ಲವ ಅನಿಲ ಕೂಡ ಬಹಳ ಬೇಗ ನಾಶವಾಗುತ್ತದೆ. ನೀರನ್ನು ಶುದ್ದಗೊಳಿಸಲು ಕ್ಲೋರಿನ್ ಆಮ್ಲಬಳಸಿದರೂ ಅದು ವಾಸನೆಯಿಂದ ಕೂಡಿರುತ್ತದೆ. ಕ್ಲೋರಿನ್ ನಿಂದ ಸಾವಯವ ಕ್ಲೋರಿನ್ ಸಂಯುಕ್ತಗಳು ಉಂಟಾಗುತ್ತವೆ. ಇದರಿಂದ ಕ್ಯಾನ್ಸರ್ ಬರಲೂಬಹುದು. ಓಝೋನ್‌ನಿಂದ ನೀರನ್ನು ಶುದ್ದಿಕರಿಸುವಾಗ ಈ ಅನಿಲವನ್ನು ಸ್ಥಳದಲ್ಲಿಯೇ ತಯಾರಿಸವುದು ಅತಿಮುಖ್ಯ ಏಕೆಂದರೆ ಇದು ದೃಢವಲ್ಲದ ಅನಿಲವಾಗಿದೆ. ವಾತಾವರಣದಲ್ಲಿಯ ಆಮ್ಲಜನಕವನ್ನು ಬಳಸಿಕೊಂಡು ಸರಳವಿಧಾನದಲ್ಲಿ ಓಝೋನನ್ನು ತಯಾರಿಸಬಹುದು. ಒಂದು ಗಂಟೆಯಲ್ಲಿ ಸು. ೩೧೫ ಕಿ. ಗ್ರಾಂ ನಷ್ಟು ಓಝೋನನ್ನು ಆಮ್ಲಜನಕದಿಂದ ತಯಾರಿಸಬಹುದಾಗಿದೆ. ಇದಕ್ಕೆ ನೀರಿನಲ್ಲಿಯ ಸೂಕ್ಷ್ಮಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಶಕ್ತಿ ಇದೆ. ಈ ಅನಿಲವನ್ನು ಅಶುದ್ದ ನೀರಿನ ಮೂಲಕ ಹಾಯಿಸಿದಾಗ ಓಝೋನ ಬ್ಯಾಕ್ಟೀರಿಯಾಗಳನ್ನು ಬಹುಬೇಗ ನಾಶಪಡಿಸುತ್ತದೆ. ಒಂದು ಲೀಟರ್ ಅಶುದ್ಧ ನೀರನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸಲು ಬೇಕಾಗುವ ಓಝೋನ್ ಪ್ರಮಾಣದಲ್ಲಿ ೦.೧ ಮಿಲಿ ಗ್ರಾಂ ಮಾತ್ರ. ಈ ಕ್ರಿಯೆಯಿಂದ ನಮಗೆ ಶೇ೯೯.೯ ಪ್ರಮಾಣದಲ್ಲಿ ಶುದ್ಧನೀರು ದೊರೆಯುತ್ತದೆ.

ಈ ತಂತ್ರಜ್ಞಾನವನ್ನು ಬಳಸಿಕೊಂಡು ಈಗಾಗಲೇ ಫ್ರಾನ್ಸ್, ಇಂಗ್ಲೆಂಡ್, ಅಮೇರಿಕಾ, ಕೋರಿಯಾ, ರಷಿಯಾ, ರುಮೆನೀಯಾ, ಕೆನಡಾ, ಟರ್ಕಿ ಮತ್ತು ಚೀನಾದೇಶಗಳಲ್ಲಿ ಈಗಾಗಲೇ ಅಶುದ್ಧನೀರನ್ನು ಶುದ್ಧೀಕರಿಸುತ್ತಿದ್ದಾರೆ. ಕೈಗಾರಿಕೆಗಳು ಹೊರಚೆಲ್ಲುವ ನೀರನ್ನು ಶುದ್ಧೀಕರಸಲು ಈ ತಂತ್ರವನ್ನು ಬಳಸಬಹುದೆಂದು ಫ್ರಾನ್ಸ್ ಹೇಳಿದ್ದಾರೆ.

ಭಾರತದಂತಹ ಬೃಹತ್ ರಾಷ್ಟ್ರಗಳಿಗೆ ಈ ಒಂದು ತಂತ್ರಜ್ಞಾನ ವರವಾಗಿ ಪರಿಣಮಿಸಲಿದೆ. ಈ ದಿಸೆಯಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಉದ್ದಿಮಿಗಳು ಪ್ರಯತ್ನಿಸಿ ಸಾಮಾನ್ಯರಿಗೆ ಕುಡಿಯಲು ಶುದ್ದವಾದ ನೀರನ್ನು ದೊರಕಿಸಿಕೊಡಬಹುದಾಗಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...