Home / ಲೇಖನ / ವಿಜ್ಞಾನ / ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು

ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು

ಪ್ರತಿಸೃಷ್ಟಿಯು ಇದುವರೆಗೂ ಅಸಾಧ್ಯವಾಗಿತ್ತು. ಇಂದು ಜೀವ ವಿಜ್ಞಾನದಲ್ಲಿ ನಿರಂತರ ಸಂಶೋಧನೆಗಳು ನಡೆದು ವಿಸ್ಮಯಕರ ಫಲಿತಾಂಶವನ್ನು ದೃಧೀಕರಿಸಿವೆ. ಹಿಂದೆ ನಾವು ಮಾಯಾ, ಮಂತ್ರ, ಮಾಟಗಳಿಂದ ಪ್ರತಿಸೃಷ್ಟಿಸುವ ಕಾದಂಬರಿಗಳನ್ನು ಓದಿದ್ದೇವೆ. ಅದೆಲ್ಲವೂ ಕಾಲ್ಪನಿಕವಾಗಿತ್ತು. ಅದರಿಂದ ಜೈವಿಕ ತಂತ್ರಜ್ಞಾನವು ಪ್ರತಿ ಸೃಷ್ಟಿಯಾಗುತ್ತಿದ್ದು, ಮಾನವನ ಪ್ರತಿಸೃಷ್ಟಿಯ ಸಂಶೋಧನೆಯು ತಾಜಾ ಹೆಜ್ಜೆಯಲ್ಲಿದೆ.

ಸ್ಕಾಟ್ಲ್‌ಂಡಿನ ಜೀವವಿಜ್ಞಾನಿ ಇಮಾನ್‌ವಿಲ್ಮಟ್ ಅವರು ಕುರಿಯೆ ಕೆಚ್ಚಲಿನಿಂದ ಬೆಳೆದ ಜೀವಕೋಶವನ್ನು ಹೊರೆತೆಗೆದು ಸೃಷ್ಟಿಸಿದ ಜೈವಿಕ ಅದ್ಭುತಗಳಲ್ಲಿ ಒಂದಾಗಿ ‘ಡಾಲಿ’ ಜೀವ ತೆಳೆದಿದೆ. ವಿಲ್ಮಟ್‌ರ ಕ್ಲೋನಿಂಗ್‌ನಲ್ಲಿ ಜೀವಕೋಶವನ್ನು ಭ್ರೂಣದಿಂದ ಪಡೆಯದೇ ಹೊಸ ಮೈಲುಗಲ್ಲಾಗಿದೆ. ಇದರಂತೆ ಅನೇಕ ಜೀವಿಗಳ ಪ್ರತಿಸೃಷ್ಟಿಯನ್ನು ಮಾಡಿದ ದಾಖಲೆಗಳು ಈದೀಗ ಬರುತ್ತಲಿವೆ.

ಮಾನವ ಜೀವಕೋಶ ಹೊಂದಿರುವ ಮಿಶ್ರತಳಿ ಕುರಿ ‘ಪಾಲಿ’ ಡಾಲಿಯನ್ನು ಸೃಷ್ಟಿಸಿದ ವಿಜ್ಞಾನಿಗಳೇ ಇದನ್ನು ಸೃಷ್ಟಿಸಿದ್ದಾರೆ. ಪಾಲಿ ಮೊದಲ ಮಿಶ್ರತಳಿಯ ಪ್ರತಿ ಕೃತಿಯಾಗಿದೆ. ಇಲ್ಲಿ ಮಾನವ ಜೀನಮ್ನ ಕುರಿಯ ಜೀವಾಂಶ ಮಧ್ಯ ನ್ಯೂಕ್ಲಿಯಸ್‌ಗೆ ಸೇರಿಸಲಾಗುತ್ತದೆ. ಇದನ್ನು ನಂತರ ಕುರಿಯ ಈ ಮೊದಲೇ ನ್ಯೂಕ್ಲಿಯಸ್ ತೆಗೆದು ಸಿದ್ಡಪಡಿಸಿಟ್ಟಿರುವ ಭ್ರೂಣಕ್ಕೆ ಅಳವಡಿಸುವುದು. ಆಗ ಮಿಶ್ರತಳಿಯ ಪ್ರತಿಕೃತಿಯುಳ್ಳ ಕುರಿ ಜೀವ ತಳೆಯಿತು. ಮಾನವ ವಂಶಾಣುವಿನಿಂದ ‘ಜೈನಿ’ ಯ ಸೃಷ್ಟಿ ಆಶ್ಚರ್ಯವಾದರೂ ಇದು ಹಂದಿಯ ಹೊಟ್ಟೆಯಲ್ಲಿ ಜನಿಸಿದೆ. ಇದರ ರಕ್ತದಲ್ಲಿ ಮಾನವನ ಗುಣಗಳು ಸೇರಿವೆ. ಇದರ ಕೆಚ್ಚಲಿನಿಂದ ಬರುವ ಹಾಲಿನಲ್ಲಿ
ಮಾನವ ಪ್ರೋಟೀನ್ ಇರುತ್ತದೆಂದರೆ ವಿಶೇಷವೆ. ಜೈವಿಕ ತಂತ್ರಜ್ಞಾನದಲ್ಲಿ ಇದು ಮತ್ತೊಂದು ಮೈಲುಗಲ್ಲಾಗಿದೆ. ಇದರಂತೆ ಎಡಿನ್ ಬರೋ ವಿಜ್ಞಾನಿಗಳು ವಿಶ್ವದಲ್ಲಿಯೇ ಮೊದಲ ಬಾರಿಗೆ ‘ದನದ ತದ್ರೂಪಿ’ ಯನ್ನು ಸೃಷ್ಟಿ ಮಾಡಿದರು. ೧೯೯೮ ಫೆಬ್ರುವರಿ ೧೬ ರಂದು ಜನಿಸಿದ ಇದಕ್ಕೆ ‘ಜೆಫರ್‍ಸನ್’ ನಾಮಕರಣ ಮಾಡಲಾಗಿದೆ. ಡಾಲಿಯನ್ನು ಸೃಷ್ಟಿಸಿದ ವಿಧಾನವನ್ನೇ ಈ ಜೆಫರ್‍ಸನ್‌ಗೆ ಬಳಸಲಾಗಿದೆ. ಈ ರೀತಿ ಪ್ರತಿಸೃಷ್ಟಿ ಮಾಡಿದ ದನಗಳು ಹೆಚ್ಚು ರಕ್ತದ ತೆಳುವಾದ ಅಂಶವನ್ನು ಉತ್ಪಾದಿಸುತ್ತವೆ. ಇದನ್ನು ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಬಳಸಲಾಗುವುದು. ಮನುಷ್ಯನಿಗೆ ‘ರೋಸಿಯ’ ವಾಸ್ತವವಾಗಿ ಹಸುವೇ ಆಗಿದ್ದರೂ ಕರೆಯುವುದು ಮಾತ್ರ ಮನುಷ್ಯರ ಹಾಲನ್ನು! ರೋಸಿಯ ಹಾಲಿನ ರಾಸಾಯನಿಕ ಸಂಯೋಜನ ನಮ್ಮ ತಾಯಂದಿರ ಹಾಲಿನಂತೆಯೇ ಇರುತ್ತದೆ. ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಳ್ಳುವ ನತದೃಷ್ಟ ಶಿಶುಗಳ ಜೀವಗಳನ್ನು ಉಳಿಸಬಲ್ಲ ಅಮೃತವಾಗಬಲ್ಲದು ಈ ಹಾಲು.

ಹಿಂದೆ ತಿಳಿಸಿದ ಡಾಲಿಗೆ ೧೯೯೬ ರಲ್ಲಿ ‘ಬಾನಿ’ ಎಂಬ ತದ್ರೂಪಿ ಕುರಿಯು ಜನಿಸಿದೆ. ಈ ಡಾಲಿಯ ಜತೆ ವಾಸಿಸಲು ವಾಲ್ಫ್‌ಮೌಂಟನ್ ಟಗರನ್ನು ಬಿಡಲಾಗಿತ್ತು ಸಹಜ ವಿಧಾನದಲ್ಲಿ ಡಾಲಿ ಗರ್ಭಧರಿಸಿತು. ಇದರ ಗರ್ಭಧಾರಣೆ ಯಾವುದೇ ತೊಂದರೆಗಳಿಲ್ಲದೇ ಪೂರ್ಣ ಗೊಂಡಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...