Home / ಕಥೆ / ಕಿರು ಕಥೆ / ನಾನು ಬದುಕುತ್ತೇನೆ

ನಾನು ಬದುಕುತ್ತೇನೆ

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ. ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು. ಹುಡುಗಿಯೂ ಅವನನ್ನು ಮೆಚ್ಚಿಕೊಂಡಳು.

ಎರಡೂ ಕಡೆಯ ಹಿರಿಯರು ಮಾತುಕತೆ ಆರಂಭಿಸಿಯೇಬಿಟ್ಟರು.

“ನಮ್ಮ ಮಗನಿಗೆ ಒಂದು ಲಕ್ಷ ವರದಕ್ಷಿಣೆ ಕೊಡಬೇಕು” ಹುಡುಗನ ತಾಯಿ ಮೊದಲು ಬೇಡಿಕೆ ಇತ್ತಳು.

“ಕಿಮ್ಮತ್ತಿನ ಎರಡು ಜತೆ ಬಟ್ಟೆ, ಉಂಗುರ, ಚೈನು, ವಾಚು ಕೊಡಬೇಕು” ಸಂಬಂಧಿಕರಲ್ಲಿ ಒಬ್ಬರು ತಮ್ಮ ಅಹವಾಲು ಸಲ್ಲಿಸಿದರು.

“ನನಗೆ ಓಡಾಡಲು ಇಂಡಿಕಾ ಕಾರು ಬೇಕು” ಹುಡುಗ ತನ್ನ ಡಿಮ್ಯಾಂಡ್ ಮುಂದಿಟ್ಟ.

“ನಮ್ಮ ಹುಡುಗ ದೊಡ್ಡ ಸ್ಥಾನದಲ್ಲಿದ್ದವನು. ಅವನ ಮದುವೆಯನ್ನು ನಾವು ಹೇಳಿದ ಕಲ್ಯಾಣ ಮಂಟಪದಲ್ಲಿಯೇ ಮಾಡಿಕೊಡಬೇಕು” ಎಂದು ಕರಾರು ಹಾಕಿದರು ಹುಡುಗನ ತಂದೆ.

ಇದುವರೆವಿಗೂ ಸುಮ್ಮನೆ ಕುಳಿತಿದ್ದ ಹುಡುಗಿಯ ಕಡೆಯ ಹಿರಿಯರೊಬ್ಬರು: “ವರೋಪಚಾರದಲ್ಲಿ ಕೊರತೆ ಇರುವುದಿಲ್ಲ. ನಿಮ್ಮ ಮರ್ಯಾದೆಗೆ ಕುಂದು ಬಾರದಂತೆ ನಾವು ಮದುವೆ ಮಾಡಿಕೊಡುತ್ತೇವೆ. ಆದರೆ ಇಂಥದ್ದೆ ಬೇಕು. ಇಷ್ಟು ಬೇಕು ಎಂದು ಗೆರೆಕೊರೆದು ಹೇಳಬೇಡಿರಿ” ಎಂದರು.

ಅವರು ಮಾತಿನಿಂದ ವ್ಯಗ್ರಗೊಂಡ ಹುಡುಗನ ತಾಯಿ “ನಾವೇನು ಭಿಕಾರಿಗಳಲ್ಲ” ಎಂದಳು.

“ಅಂಥವರಾಗಿದ್ದರೆ ಎಷ್ಟೊ ಒಳ್ಳೆಯದಿತ್ತು. ಕನಿಷ್ಟ ಪಕ್ಷ ಅವರಿಗೆ ಮನುಷ್ಯತ್ವವಾದರೂ ಇರುತ್ತಿತ್ತು. ನೀವು ದರೋಡೆಕೋರರು!” ಬಾಗಿಲಲ್ಲಿ ನಿಂತು ಹೇಳಿದಳು ಹುಡುಗಿ.

ಅವಳ ಮಾತಿನಿಂದ ಅಪಮಾನಿತರಾದ ಹುಡುಗನ ಕಡೆಯವರ ಮೂಗಿನ ಹೊರಳೆ ಹಿಗ್ಗಿದವು. “ಹುಡುಗಿ ಮದುವೆ ಮೊದಲೆ ಹೀಗೆ. ನಾಳೆ ಏನು ಗತಿ?” ಅವರ ಜತೆಗೆ ಬಂದ ಮುದುಕ ಮುಖದ ಮೇಲೆ ಹೊಡೆದಂತೆ ಹೇಳಿದ.

“ಹುಡುಗಿ ಒಳ್ಳೆಯವಳು. ಆದರೆ ನೇರ” ಮೊಮ್ಮಗಳನ್ನು ಸಮರ್ಥಿಸಿಕೊಂಡಳು ಅಜ್ಜಿ.

“ನೀವು ನ್ಯಾಯವಾಗಿ ಮಾತಾಡಿರಿ” ಎಂದರು ಹುಡುಗಿಯ ತಂದೆ.

“ಅಪ್ಪ ಇವರೊಂದಿಗೆ ಚೌಕಾಸಿ ವ್ಯವಹಾರ ಬೇಡ” ನಿಷ್ಠುರವಾಗಿ ಹೇಳಿದಳು ಹುಡುಗಿ.

ಹುಡುಗನ ಕಡೆಯವರು ಎದ್ದು ಬಿರುಗಾಳಿಯಂತೆ ಹೊರಟರು. ಹುಡುಗನ ತಾಯಿ ಹೊಸ್ತಿಲು ದಾಡುವಾಗ “ಈ ಜನ್ಮದಲ್ಲೇ ನಿನಗೆ ಮದುವೆ ಆಗುವುದಿಲ್ಲ” ಎಂದು ಶಪಿಸಿದಳು.

“ಆಗದಿದ್ದರು ಚಿಂತೆಯಿಲ್ಲ. ನಾನು ಬದುಕುತ್ತೇನೆ” ಗಟ್ಟಿಯಾಗಿ ಹೇಳಿದಳು ಹುಡುಗಿ.

*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...