Home / ಕವನ / ಅನುವಾದ / ಕಾವ್ಯ

ಕಾವ್ಯ

ಅನಾದಿಯ ವಯಸ್ಸಲ್ಲಿ ಒಮ್ಮೆ
ಕಾವ್ಯ ಬಂದಿತ್ತು ನನ್ನನ್ನು ಹುಡುಕಿಕೊಂಡು.
ಗೊತಿಲ್ಲ, ನನಗೆ ಗೊತಿಲ್ಲ
ಎಲ್ಲಿಂದ ಬಂತೋ, ನದಿಯಿಂದಲೋ, ಚಳಿಯಿಂದಲೋ,
ಹೇಗೆ ಬಂತೋ ಯಾವಾಗ ಬಂತೋ ಗೊತಿಲ್ಲ.
ದಿನಗಳಿರಲಿಲ್ಲ, ಶಬ್ಬಗಳಿರಲಿಲ್ಲ, ನಿಶ್ಯಬ್ದವಿರಲಿಲ್ಲ.
ಬೀದಿಯಲ್ಲಿದ್ದ ನನ್ನನ್ನು ಕರೆಯಿತು.
ಕತ್ತಲ ಕೊಂಬೆಗೆ ಜೋತುಬಿದ್ದವನನ್ನು,
ಬೆಂಕಿಯುರಿಯಲ್ಲಿದ್ದವನನ್ನು,
ಒಬ್ಬನೇ ವಾಪಸ್ಸು ಹೋಗುತ್ತಿದ್ದವನನ್ನು,
ಸಾವಿರ ಜನರಲ್ಲಿ ಒಬ್ಬನಾಗಿ ಮುಖವಿಲ್ಲದಿದ್ದವನನ್ನು,
ಕರೆದು ಮೈದಡವಿತು.

ಏನು ಹೇಳಲಿ? ತಿಳಿಯಲಿಲ್ಲ,
ನಾಲಗೆಯಲ್ಲಿಶಬ್ದವಿರಲಿಲ್ಲ, ಕಣ್ಣಲ್ಲಿ ಬೆಳಕಿರಲಿಲ್ಲ.
ಜ್ವರವೋ, ಹಾರಲು ಮರೆತ ರೆಕ್ಕೆಗಳೋ
ನನ್ನ ಮನಸ್ಸಿನೊಳಗೇನೋ ಚಲನೆ.

ಒಳಗಿನ ಕಿಡಿಯ ಬೆಳಕಿನಲ್ಲಿ
ಒಂದಿಷ್ಟು ದಾರಿಮಾಡಿಕೊಂಡೆ.
ಮೊದಲ ಸಾಲು ಬರೆದೆ.
ಅಸ್ಪಷ್ಟ, ಅರ್ಥಹೀನ, ಅಶಕ್ತಸಾಲು,
ಏನೇನೂ ಗೊತ್ತಿಲ್ಲದವನ
ಶುದ್ಧ ವ್ಯರ್‍ಥಾಲಾಪ, ಶುದ್ಧ ಜ್ಞಾನ.

ತಟ್ಟನೆ ಆಕಾಶದ ಚಿಲಕ ತೆಗೆದು
ಗ್ರಹ ತಾರೆಗಳು ಮೈದೆರೆದು
ಸುತ್ತಿಕೊಂಡ ಕತ್ತಲಲ್ಲಿ
ಜಗದ ಮೇಲೆ
ಬಾಣ, ಬೆಂಕಿ, ಹೂಗಳ ಒಗಟು ತೂರುವ
ನೆರಳ ರಂಧ್ರಗಳು.
ನಾನು, ಅಣುವಿನಣುವಿನಣುವಾದ ನಾನು
ನಕ್ಷತ್ರ ಖಚಿತ ಮಹಾ ಶೂನ್ಯವನ್ನು
ಅಗಾಧ ರಹಸ್ಯದ ಬಿಂಬವನ್ನು ಹೀರಿ
ಪರಿಶುದ್ಧ ಬಯಲ ಅಂಶವಾಗಿ
ನಕ್ಷತ್ರಗಳೊಡನೆ ಹೊರಳಿದೆ.
ನನ್ನೆದೆ ಭಾವ ಗಾಳಿಯೊಡನೆ ತೇಲಿತು.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...