Home / ಕವನ / ಅನುವಾದ / ನಮಗೆ ಗೊತ್ತು

ನಮಗೆ ಗೊತ್ತು

ಕೂಡಲೇ ಏನಾದರೂ ಮಾಡಬೇಕು…
ಇದಿಷ್ಟು ನಮಗೆ ಗೊತ್ತು.
ಅದಕ್ಕಿನ್ನೂ ಕಾಲ ಬಂದಿಲ್ಲ.
ಈಗ ತಡವಾಗಿದೆ.
ನಮಗೆ ಗೊತ್ತು.

ನಾವು ತಕ್ಕಮಟ್ಟಿಗೆ ಅನುಕೂಲಸ್ಥರು
ಹೀಗೇ ಬದುಕುತ್ತೇವೆ
ಇದರಿಂದೆಲ್ಲಾ ಏನೂ ಫಲವಿಲ್ಲಾ,
ನಮಗೆ ಗೊತ್ತು.

ನಮಗೆ ಗೊತ್ತು, ತಪ್ಪು ನಮ್ಮದೇ.
ಬೈಯುವುದಾದರೆ ತಪ್ಪು ನಮ್ಮದಲ್ಲ
ತಪ್ಪು ನಮ್ಮದಲ್ಲ ಅಂತಲೇ ಬೈಸಿಕೊಳ್ಳುವ ತಪ್ಪು ನಮ್ಮದೆ.
ನಮಗೆ ಗೊತ್ತು, ನಮಗೆ ಸಾಕಾಗಿ ಹೋಗಿದೆ.
ಸುಮ್ಮನೆ ಬಾಯಿಮುಚ್ಚಿಕೊ೦ಡಿರುವುದು ಒಳ್ಳೆಯದು.
ಆದರೆ ನಾವು ಸುಮ್ಮನಿರುವುದಿಲ್ಲ.
ನಮಗೆ ಗೊತ್ತು. ನಮಗೆ ಗೊತ್ತು.

ನಿಜವಾಗಿ ಯಾರಿಗೂ ಹೆಲ್ಪುಮಾಡಲು ಸಾಧ್ಯವಿಲ್ಲ, ನಮಗೆ ಗೊತ್ತು.
ಯಾರೂ ನಮಗೆ ಸಹಾಯಮಾಡಲು ಬರುವುದಿಲ್ಲ ನಮಗೆ ಗೊತ್ತು.
ಗೊತ್ತು, ಗೊತ್ತು.

ನಮಗೆ ಗೊತ್ತು, ನಾವು ಪ್ರತಿಭಾವಂತರು, ನಾವು ಜಾಣರು.
ಇಲ್ಲ ಅಥವ ಏನೂ ಇಲ್ಲ ಅನುವುದರಲ್ಲಿ
ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿದೆ, ಗೊತ್ತು.
ಈ ಸಮಸ್ಯೆಯನ್ನು ಆಳವಾಗಿ ಪರಿಶೀಲಿಸಬೇಕೆಂದು ನಮಗೆ ಗೊತ್ತು.
ಟೀಗೆ ಒಂದೂವರೆ ಚಮಚ ಸಕ್ಕರೆ ಬೇಕು,
ನಮಗೆ ಗೊತ್ತು, ಗೊತ್ತು.

ಶೋಷಣೆಯ ಬಗ್ಗೆ ನಮಗೆಲ್ಲಾಗೊತ್ತು.
ನಾವು ಸದಾ ಶೋಷಣೆಯ ವಿರೋಧಿಗಳು.
ಸಿಗರೇಟಿನ ಬೆಲೆ ಜಾಸ್ತಿಯಾಗಿದೆ,
ನಮಗೆ ಗೊತ್ತು.

ದೇಶ ಸುಂಕಷ್ಟಕ್ಕೆ ಸಿಲುಕಿದೆ ಎಂದು ನಮಗೆ ಚೆನ್ನಾಗಿ ಗೊತ್ತು.
ನಾವು ಹೇಳಿದ ಮಾತು, ಮಾಡಿದ ಊಹೆ ಎಂದೂ ತಪ್ಪುವುದಿಲ್ಲ.
ಆದರೆ ಮಾತು ಊಹೆ ಎರಡೂ ವ್ಯರ್‍ಥ.
ಎಲ್ಲಾ ಬರೀ ಮಾತು.
ನಮಗೆ ಗೊತ್ತು.

ತಗ್ಗಿ ಬಗ್ಗಿ ನಡೆದರೆ ಉಪಯೋಗವಿಲ್ಲ.
ಆದರೂ ತಗ್ಗಿ ಬಗ್ಗಿನಡೆಯುತ್ತೇವೆ.
ನಮಗೆ ಗೊತ್ತು, ಗೊತ್ತು.

ಇದೆಲ್ಲಾ ಹೊಸತೂ ಅಲ್ಲ, ವಿಶೇಷವೂ ಅಲ್ಲ.
ಈ ಲೈಫು ವಂಡರ್‍‍ಫುಲ್ಲು, ನಮಗೆ ಗೊತ್ತು,
ಲೈಫು ಅಂದರೆ ಇಷ್ಟೆ, ನಮಗೆ ಚೆನ್ನಾಗಿ ಗೊತ್ತು.
ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತು ಅಂತ
ನಮಗೆ ಗೊತ್ತು
ಅಂತ ಗೊತ್ತು,
ಗೊತ್ತು.
*****
ಮೂಲ: ಹ್ಯಾನ್ ಮ್ಯಾಗ್ನೆಸ್ ಎನ್‍ಜೆನ್ಸ್‍ಬರ್‍ಗರ್

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...