Home / ಕವನ / ಅನುವಾದ / ನಮಗೆ ಗೊತ್ತು

ನಮಗೆ ಗೊತ್ತು

ಕೂಡಲೇ ಏನಾದರೂ ಮಾಡಬೇಕು…
ಇದಿಷ್ಟು ನಮಗೆ ಗೊತ್ತು.
ಅದಕ್ಕಿನ್ನೂ ಕಾಲ ಬಂದಿಲ್ಲ.
ಈಗ ತಡವಾಗಿದೆ.
ನಮಗೆ ಗೊತ್ತು.

ನಾವು ತಕ್ಕಮಟ್ಟಿಗೆ ಅನುಕೂಲಸ್ಥರು
ಹೀಗೇ ಬದುಕುತ್ತೇವೆ
ಇದರಿಂದೆಲ್ಲಾ ಏನೂ ಫಲವಿಲ್ಲಾ,
ನಮಗೆ ಗೊತ್ತು.

ನಮಗೆ ಗೊತ್ತು, ತಪ್ಪು ನಮ್ಮದೇ.
ಬೈಯುವುದಾದರೆ ತಪ್ಪು ನಮ್ಮದಲ್ಲ
ತಪ್ಪು ನಮ್ಮದಲ್ಲ ಅಂತಲೇ ಬೈಸಿಕೊಳ್ಳುವ ತಪ್ಪು ನಮ್ಮದೆ.
ನಮಗೆ ಗೊತ್ತು, ನಮಗೆ ಸಾಕಾಗಿ ಹೋಗಿದೆ.
ಸುಮ್ಮನೆ ಬಾಯಿಮುಚ್ಚಿಕೊ೦ಡಿರುವುದು ಒಳ್ಳೆಯದು.
ಆದರೆ ನಾವು ಸುಮ್ಮನಿರುವುದಿಲ್ಲ.
ನಮಗೆ ಗೊತ್ತು. ನಮಗೆ ಗೊತ್ತು.

ನಿಜವಾಗಿ ಯಾರಿಗೂ ಹೆಲ್ಪುಮಾಡಲು ಸಾಧ್ಯವಿಲ್ಲ, ನಮಗೆ ಗೊತ್ತು.
ಯಾರೂ ನಮಗೆ ಸಹಾಯಮಾಡಲು ಬರುವುದಿಲ್ಲ ನಮಗೆ ಗೊತ್ತು.
ಗೊತ್ತು, ಗೊತ್ತು.

ನಮಗೆ ಗೊತ್ತು, ನಾವು ಪ್ರತಿಭಾವಂತರು, ನಾವು ಜಾಣರು.
ಇಲ್ಲ ಅಥವ ಏನೂ ಇಲ್ಲ ಅನುವುದರಲ್ಲಿ
ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿದೆ, ಗೊತ್ತು.
ಈ ಸಮಸ್ಯೆಯನ್ನು ಆಳವಾಗಿ ಪರಿಶೀಲಿಸಬೇಕೆಂದು ನಮಗೆ ಗೊತ್ತು.
ಟೀಗೆ ಒಂದೂವರೆ ಚಮಚ ಸಕ್ಕರೆ ಬೇಕು,
ನಮಗೆ ಗೊತ್ತು, ಗೊತ್ತು.

ಶೋಷಣೆಯ ಬಗ್ಗೆ ನಮಗೆಲ್ಲಾಗೊತ್ತು.
ನಾವು ಸದಾ ಶೋಷಣೆಯ ವಿರೋಧಿಗಳು.
ಸಿಗರೇಟಿನ ಬೆಲೆ ಜಾಸ್ತಿಯಾಗಿದೆ,
ನಮಗೆ ಗೊತ್ತು.

ದೇಶ ಸುಂಕಷ್ಟಕ್ಕೆ ಸಿಲುಕಿದೆ ಎಂದು ನಮಗೆ ಚೆನ್ನಾಗಿ ಗೊತ್ತು.
ನಾವು ಹೇಳಿದ ಮಾತು, ಮಾಡಿದ ಊಹೆ ಎಂದೂ ತಪ್ಪುವುದಿಲ್ಲ.
ಆದರೆ ಮಾತು ಊಹೆ ಎರಡೂ ವ್ಯರ್‍ಥ.
ಎಲ್ಲಾ ಬರೀ ಮಾತು.
ನಮಗೆ ಗೊತ್ತು.

ತಗ್ಗಿ ಬಗ್ಗಿ ನಡೆದರೆ ಉಪಯೋಗವಿಲ್ಲ.
ಆದರೂ ತಗ್ಗಿ ಬಗ್ಗಿನಡೆಯುತ್ತೇವೆ.
ನಮಗೆ ಗೊತ್ತು, ಗೊತ್ತು.

ಇದೆಲ್ಲಾ ಹೊಸತೂ ಅಲ್ಲ, ವಿಶೇಷವೂ ಅಲ್ಲ.
ಈ ಲೈಫು ವಂಡರ್‍‍ಫುಲ್ಲು, ನಮಗೆ ಗೊತ್ತು,
ಲೈಫು ಅಂದರೆ ಇಷ್ಟೆ, ನಮಗೆ ಚೆನ್ನಾಗಿ ಗೊತ್ತು.
ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತು ಅಂತ
ನಮಗೆ ಗೊತ್ತು
ಅಂತ ಗೊತ್ತು,
ಗೊತ್ತು.
*****
ಮೂಲ: ಹ್ಯಾನ್ ಮ್ಯಾಗ್ನೆಸ್ ಎನ್‍ಜೆನ್ಸ್‍ಬರ್‍ಗರ್

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...