Home / ಕವನ / ಅನುವಾದ / ನಮಗೆ ಗೊತ್ತು

ನಮಗೆ ಗೊತ್ತು

ಕೂಡಲೇ ಏನಾದರೂ ಮಾಡಬೇಕು…
ಇದಿಷ್ಟು ನಮಗೆ ಗೊತ್ತು.
ಅದಕ್ಕಿನ್ನೂ ಕಾಲ ಬಂದಿಲ್ಲ.
ಈಗ ತಡವಾಗಿದೆ.
ನಮಗೆ ಗೊತ್ತು.

ನಾವು ತಕ್ಕಮಟ್ಟಿಗೆ ಅನುಕೂಲಸ್ಥರು
ಹೀಗೇ ಬದುಕುತ್ತೇವೆ
ಇದರಿಂದೆಲ್ಲಾ ಏನೂ ಫಲವಿಲ್ಲಾ,
ನಮಗೆ ಗೊತ್ತು.

ನಮಗೆ ಗೊತ್ತು, ತಪ್ಪು ನಮ್ಮದೇ.
ಬೈಯುವುದಾದರೆ ತಪ್ಪು ನಮ್ಮದಲ್ಲ
ತಪ್ಪು ನಮ್ಮದಲ್ಲ ಅಂತಲೇ ಬೈಸಿಕೊಳ್ಳುವ ತಪ್ಪು ನಮ್ಮದೆ.
ನಮಗೆ ಗೊತ್ತು, ನಮಗೆ ಸಾಕಾಗಿ ಹೋಗಿದೆ.
ಸುಮ್ಮನೆ ಬಾಯಿಮುಚ್ಚಿಕೊ೦ಡಿರುವುದು ಒಳ್ಳೆಯದು.
ಆದರೆ ನಾವು ಸುಮ್ಮನಿರುವುದಿಲ್ಲ.
ನಮಗೆ ಗೊತ್ತು. ನಮಗೆ ಗೊತ್ತು.

ನಿಜವಾಗಿ ಯಾರಿಗೂ ಹೆಲ್ಪುಮಾಡಲು ಸಾಧ್ಯವಿಲ್ಲ, ನಮಗೆ ಗೊತ್ತು.
ಯಾರೂ ನಮಗೆ ಸಹಾಯಮಾಡಲು ಬರುವುದಿಲ್ಲ ನಮಗೆ ಗೊತ್ತು.
ಗೊತ್ತು, ಗೊತ್ತು.

ನಮಗೆ ಗೊತ್ತು, ನಾವು ಪ್ರತಿಭಾವಂತರು, ನಾವು ಜಾಣರು.
ಇಲ್ಲ ಅಥವ ಏನೂ ಇಲ್ಲ ಅನುವುದರಲ್ಲಿ
ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿದೆ, ಗೊತ್ತು.
ಈ ಸಮಸ್ಯೆಯನ್ನು ಆಳವಾಗಿ ಪರಿಶೀಲಿಸಬೇಕೆಂದು ನಮಗೆ ಗೊತ್ತು.
ಟೀಗೆ ಒಂದೂವರೆ ಚಮಚ ಸಕ್ಕರೆ ಬೇಕು,
ನಮಗೆ ಗೊತ್ತು, ಗೊತ್ತು.

ಶೋಷಣೆಯ ಬಗ್ಗೆ ನಮಗೆಲ್ಲಾಗೊತ್ತು.
ನಾವು ಸದಾ ಶೋಷಣೆಯ ವಿರೋಧಿಗಳು.
ಸಿಗರೇಟಿನ ಬೆಲೆ ಜಾಸ್ತಿಯಾಗಿದೆ,
ನಮಗೆ ಗೊತ್ತು.

ದೇಶ ಸುಂಕಷ್ಟಕ್ಕೆ ಸಿಲುಕಿದೆ ಎಂದು ನಮಗೆ ಚೆನ್ನಾಗಿ ಗೊತ್ತು.
ನಾವು ಹೇಳಿದ ಮಾತು, ಮಾಡಿದ ಊಹೆ ಎಂದೂ ತಪ್ಪುವುದಿಲ್ಲ.
ಆದರೆ ಮಾತು ಊಹೆ ಎರಡೂ ವ್ಯರ್‍ಥ.
ಎಲ್ಲಾ ಬರೀ ಮಾತು.
ನಮಗೆ ಗೊತ್ತು.

ತಗ್ಗಿ ಬಗ್ಗಿ ನಡೆದರೆ ಉಪಯೋಗವಿಲ್ಲ.
ಆದರೂ ತಗ್ಗಿ ಬಗ್ಗಿನಡೆಯುತ್ತೇವೆ.
ನಮಗೆ ಗೊತ್ತು, ಗೊತ್ತು.

ಇದೆಲ್ಲಾ ಹೊಸತೂ ಅಲ್ಲ, ವಿಶೇಷವೂ ಅಲ್ಲ.
ಈ ಲೈಫು ವಂಡರ್‍‍ಫುಲ್ಲು, ನಮಗೆ ಗೊತ್ತು,
ಲೈಫು ಅಂದರೆ ಇಷ್ಟೆ, ನಮಗೆ ಚೆನ್ನಾಗಿ ಗೊತ್ತು.
ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತು ಅಂತ
ನಮಗೆ ಗೊತ್ತು
ಅಂತ ಗೊತ್ತು,
ಗೊತ್ತು.
*****
ಮೂಲ: ಹ್ಯಾನ್ ಮ್ಯಾಗ್ನೆಸ್ ಎನ್‍ಜೆನ್ಸ್‍ಬರ್‍ಗರ್

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...