Home / ಕವನ / ಕವಿತೆ / ವಿರೋಧ ಭಾಸ

ವಿರೋಧ ಭಾಸ

ಕತ್ತಲು ಕೋಣೆಯಲಿ ಬೆಳಕಿನ ಅಕ್ಷರಗಳು
ಮೌನ ಆವರಣದಲ್ಲಿ ಮಾತುಗಳ ಶಬ್ಧಗಳು
ಕತ್ತಲು ಬೆಳಕು ಮೌನ ಮಾತು ಎಲ್ಲವೂ
ಒಂದೇ ನಾಣ್ಯವಾದಾಗ, ಹುಡುಕುವುದು ಏನನ್ನೂ
ಗಾಯಕ್ಕೆ, ಸವರಿದ ಮೂಲಾಮಿನ ತಣ್ಣನೆ ಸ್ಪರ್ಶ
ಮರದಲ್ಲಿ ಚಿಗುರಿದ ಹಸಿರು, ಯಾತನೆಯಲ್ಲಿ
ಸಾವಿನ ಖುಷಿ, ಎಲ್ಲವೂ ಮಾಂತ್ರಿಕ ವಿರುದ್ಧ
ಅರ್ಥಗಳು ಒಂದರಲ್ಲೊಂದು ಬೆಸೆದಾಗ.

ಹೂವಿನ ಮಕರಂದ ಹೀರಿದ
ಚಿಟ್ಟೆ ಜೇನಿದಾಗ ಮತ್ತೆ ಹುಟ್ಟು ಸಾವು
ಎಲ್ಲ ಮುಗಿಯುವುದಿಲ್ಲ ನಾನು ನೀನು
ದೂರ ಸರಿದಾಗ ಯಾಕೆಂದರೆ ಭಿನ್ನ ಸಂವೇದನೆಗಳು
ಒಂದನ್ನೊಂದು ಆಕರ್ಷಿಸುತ್ತದೆ.

ಯುದ್ಧ ನಡೆದು ರಕ್ತ ಪಾತ ಹರಿದರೂ
ನದಿಗಳು ತಪ್ಪಲಲ್ಲಿ ಹರಿಯುತ್ತವೆ.
ಸಮುದ್ರದಲೆಗಳು ಉಕ್ಕುತ್ತವೆ ಸಂಘರ್ಷದಲ್ಲಿ
ಎಲ್ಲವೂ ನನ್ನವು ಅಂದಾಗ ಅದೆಲ್ಲವೂ
ನಿನ್ನದಾಗಿರುತ್ತವೆ, ಮರ-ಚಿಗುರು-ಮೋಡ ಮಳೆ ಹುಟ್ಟು-ಸಾವು.

ಎಲ್ಲಾ ಶಬ್ಧಗಳು ನಿಶಬ್ಧಗಳಾಗಿ ಪರಿವರ್ತನೆ
ಹೊಂದಿದರೂ ದಿನದ ಬೆಳಗು ರಾತ್ರಿಯ ಕತ್ತಲೆ
ವಾಸ್ತವ ದಿಕ್ಕುಗಳು ಬೇರೆ ಬೇರೆ ಕಡೆ ಇದ್ದರೂ
ಕ್ಷಣ ಕ್ಷಣಕ್ಕೆ ಬದಲಾಗುವ ಜೀವರಾಶಿ ಚಿಗುರಿ
ಮುರುಟಿ ಹುಟ್ಟಿ-ಸತ್ತು ಬಿಂಬ ಪ್ರೀತಿ ಬಿಂಬಗಳಾಗಿ
ಲೋಕ ತೇಲಾಡುವುದು ವಿರೋಧಗಳ ಹುಟ್ಟಿನಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...