Home / ಕವನ / ಕವಿತೆ / ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ
ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ
ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ
ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ
ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣೆ
ಓದುಗರು ಬಯಸುತ್ತಾರೆ ಕಲ್ಪನೆಯ ಕವಣೆ
ಆಹ! ಬಯಸುತ್ತಾರೆ ಕೆಲವು ಲೇಖಕರು ಬರಿ ಕೀರ್ತಿ
ಇನ್ನು ಕೆಲವರು ಮುಗ್ಧ ಹೆಣ್ಣುಗಳಿಂದ ಸ್ಫೂರ್ತಿ
ಅಡಿಗರು ಬಯಸುತ್ತಾರೆ ಇಂದಿರಾ ಗಾಂಧಿಯ ವಿನಾಶ
ಹಾಗೂ ಶ್ರೀರಾಮಚಂದ್ರನಾಳಿದ ಸನಾತನ ದೇಶ
ಓದಲು ಬಾರದ ಹಳ್ಳಿಗರು ಬಯಸುತ್ತಾರೆ ಕಾಲಕಾಲಕ್ಕೆ ಮಳೆ
ಬಿತ್ತಿದ ಗದ್ದೆಗಳಲ್ಲಿ ತಿಂದು ಮುಗಿಯದಷ್ಟು ಬೆಳೆ

ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ?
ವೈಣಿಕರು ಬಯಸುತ್ತಾರೆ ಅಪರೂಪದ ರಾಗಗಳನ್ನು ವೈದ್ಯರು
ಬಯಸುತ್ತಾರೆ ಸಾಂಕ್ರಾಮಿಕ ರೋಗಗಳನ್ನು ದಾಮರು ಹಾಕುವವರು
ಬಯಸುತ್ತಾರೆ ದಟ್ಟ ನೆರಳಿನ ಮರಗಳನ್ನು ತಪಸ್ಸಿಗೆ ಕೂತ
ಭಕ್ತರು ಬಯಸುತ್ತಾರೆ ಕೋರಿದ ವರಗಳನ್ನು ಕೃಷಿಕರು
ಬಯಸುತ್ತಾರೆ ಫಲವತ್ತಾದ ಮಣ್ಣುಗಳನ್ನು ಅರೇಬಿಯದ ಶೇಖರು
ಬಯಸುತ್ತಾರೆ ಪ್ರತಿದಿನವೂ ಹೊಸ ಹೆಣ್ಣುಗಳನ್ನು ಕಾಸರಗೋಡಿನ
ಕನ್ನಡಿಗರು ಬಯಸುತ್ತಾರೆ ಕರ್ನಾಟಕದೊಂದಿಗೆ ಸೇರಿಕೆಯನ್ನು
ವ್ಯಾಪಾರಿಗಳು ಬಯಸುತ್ತಾರೆ ಸಕಲವಸ್ತುಗಳಿಗೂ ಬೆಲೆಯೇರಿಕೆಯನ್ನು
ಆಜನ್ಮ ಬ್ರಹ್ಮಚಾರಿಗಳು ಬಯಸುತ್ತಾರೆ ವೀರ್ಯನಿಗ್ರಹವನ್ನು
ಚೋರರು ಬಯಸುತ್ತಾರೆ ಕಂಚಿಕಾಮಾಕ್ಷಿಯ ವಿಗ್ರಹವನ್ನು
ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ ?

ಸರಕಾರ ಬಯಸುತ್ತದೆ!
*****

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...