Home / ಕವನ / ಕವಿತೆ / ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ
ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ
ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ
ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ
ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣೆ
ಓದುಗರು ಬಯಸುತ್ತಾರೆ ಕಲ್ಪನೆಯ ಕವಣೆ
ಆಹ! ಬಯಸುತ್ತಾರೆ ಕೆಲವು ಲೇಖಕರು ಬರಿ ಕೀರ್ತಿ
ಇನ್ನು ಕೆಲವರು ಮುಗ್ಧ ಹೆಣ್ಣುಗಳಿಂದ ಸ್ಫೂರ್ತಿ
ಅಡಿಗರು ಬಯಸುತ್ತಾರೆ ಇಂದಿರಾ ಗಾಂಧಿಯ ವಿನಾಶ
ಹಾಗೂ ಶ್ರೀರಾಮಚಂದ್ರನಾಳಿದ ಸನಾತನ ದೇಶ
ಓದಲು ಬಾರದ ಹಳ್ಳಿಗರು ಬಯಸುತ್ತಾರೆ ಕಾಲಕಾಲಕ್ಕೆ ಮಳೆ
ಬಿತ್ತಿದ ಗದ್ದೆಗಳಲ್ಲಿ ತಿಂದು ಮುಗಿಯದಷ್ಟು ಬೆಳೆ

ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ?
ವೈಣಿಕರು ಬಯಸುತ್ತಾರೆ ಅಪರೂಪದ ರಾಗಗಳನ್ನು ವೈದ್ಯರು
ಬಯಸುತ್ತಾರೆ ಸಾಂಕ್ರಾಮಿಕ ರೋಗಗಳನ್ನು ದಾಮರು ಹಾಕುವವರು
ಬಯಸುತ್ತಾರೆ ದಟ್ಟ ನೆರಳಿನ ಮರಗಳನ್ನು ತಪಸ್ಸಿಗೆ ಕೂತ
ಭಕ್ತರು ಬಯಸುತ್ತಾರೆ ಕೋರಿದ ವರಗಳನ್ನು ಕೃಷಿಕರು
ಬಯಸುತ್ತಾರೆ ಫಲವತ್ತಾದ ಮಣ್ಣುಗಳನ್ನು ಅರೇಬಿಯದ ಶೇಖರು
ಬಯಸುತ್ತಾರೆ ಪ್ರತಿದಿನವೂ ಹೊಸ ಹೆಣ್ಣುಗಳನ್ನು ಕಾಸರಗೋಡಿನ
ಕನ್ನಡಿಗರು ಬಯಸುತ್ತಾರೆ ಕರ್ನಾಟಕದೊಂದಿಗೆ ಸೇರಿಕೆಯನ್ನು
ವ್ಯಾಪಾರಿಗಳು ಬಯಸುತ್ತಾರೆ ಸಕಲವಸ್ತುಗಳಿಗೂ ಬೆಲೆಯೇರಿಕೆಯನ್ನು
ಆಜನ್ಮ ಬ್ರಹ್ಮಚಾರಿಗಳು ಬಯಸುತ್ತಾರೆ ವೀರ್ಯನಿಗ್ರಹವನ್ನು
ಚೋರರು ಬಯಸುತ್ತಾರೆ ಕಂಚಿಕಾಮಾಕ್ಷಿಯ ವಿಗ್ರಹವನ್ನು
ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ ?

ಸರಕಾರ ಬಯಸುತ್ತದೆ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...