Home / ಕವನ / ಕವಿತೆ / ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ
ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ
ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ
ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ
ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣೆ
ಓದುಗರು ಬಯಸುತ್ತಾರೆ ಕಲ್ಪನೆಯ ಕವಣೆ
ಆಹ! ಬಯಸುತ್ತಾರೆ ಕೆಲವು ಲೇಖಕರು ಬರಿ ಕೀರ್ತಿ
ಇನ್ನು ಕೆಲವರು ಮುಗ್ಧ ಹೆಣ್ಣುಗಳಿಂದ ಸ್ಫೂರ್ತಿ
ಅಡಿಗರು ಬಯಸುತ್ತಾರೆ ಇಂದಿರಾ ಗಾಂಧಿಯ ವಿನಾಶ
ಹಾಗೂ ಶ್ರೀರಾಮಚಂದ್ರನಾಳಿದ ಸನಾತನ ದೇಶ
ಓದಲು ಬಾರದ ಹಳ್ಳಿಗರು ಬಯಸುತ್ತಾರೆ ಕಾಲಕಾಲಕ್ಕೆ ಮಳೆ
ಬಿತ್ತಿದ ಗದ್ದೆಗಳಲ್ಲಿ ತಿಂದು ಮುಗಿಯದಷ್ಟು ಬೆಳೆ

ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ?
ವೈಣಿಕರು ಬಯಸುತ್ತಾರೆ ಅಪರೂಪದ ರಾಗಗಳನ್ನು ವೈದ್ಯರು
ಬಯಸುತ್ತಾರೆ ಸಾಂಕ್ರಾಮಿಕ ರೋಗಗಳನ್ನು ದಾಮರು ಹಾಕುವವರು
ಬಯಸುತ್ತಾರೆ ದಟ್ಟ ನೆರಳಿನ ಮರಗಳನ್ನು ತಪಸ್ಸಿಗೆ ಕೂತ
ಭಕ್ತರು ಬಯಸುತ್ತಾರೆ ಕೋರಿದ ವರಗಳನ್ನು ಕೃಷಿಕರು
ಬಯಸುತ್ತಾರೆ ಫಲವತ್ತಾದ ಮಣ್ಣುಗಳನ್ನು ಅರೇಬಿಯದ ಶೇಖರು
ಬಯಸುತ್ತಾರೆ ಪ್ರತಿದಿನವೂ ಹೊಸ ಹೆಣ್ಣುಗಳನ್ನು ಕಾಸರಗೋಡಿನ
ಕನ್ನಡಿಗರು ಬಯಸುತ್ತಾರೆ ಕರ್ನಾಟಕದೊಂದಿಗೆ ಸೇರಿಕೆಯನ್ನು
ವ್ಯಾಪಾರಿಗಳು ಬಯಸುತ್ತಾರೆ ಸಕಲವಸ್ತುಗಳಿಗೂ ಬೆಲೆಯೇರಿಕೆಯನ್ನು
ಆಜನ್ಮ ಬ್ರಹ್ಮಚಾರಿಗಳು ಬಯಸುತ್ತಾರೆ ವೀರ್ಯನಿಗ್ರಹವನ್ನು
ಚೋರರು ಬಯಸುತ್ತಾರೆ ಕಂಚಿಕಾಮಾಕ್ಷಿಯ ವಿಗ್ರಹವನ್ನು
ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ ?

ಸರಕಾರ ಬಯಸುತ್ತದೆ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...