Home / ಲೇಖನ / ವಿಜ್ಞಾನ / ಸಾಗರ ದೈತ್ಯ: ಆಕ್ಟೋಪಸ್

ಸಾಗರ ದೈತ್ಯ: ಆಕ್ಟೋಪಸ್

‘ಆಕ್ಟೋಪಸ್’ ಎನ್ನುವ ಪದವೇ ‘ದೈತ್ಯ ಮೀನು’ ಎಂಬ ಅರ್ಥ ಸೂಚಿಸುತ್ತದೆ. ಆದರೆ ನಾವು ತಿಳಿಸುಕೊಂಡಷ್ಟು ಅಪಾಯಕಾರಿ ಪ್ರಾಣಿಯಲ್ಲ ಅದು. ‘ಆಕ್ಟೋಪಸ್’ ಎನ್ನುವುದು ಎಂಟು ಕಾಲುಗಳು ಎಂಬರ್‍ಥ ಕೊಟ್ಟರೂ ಅದು ಹೊಂದಿರುವು ಎಂಟು ತೋಳುಗಳನ್ನು ಸೂಚಿಸುತ್ತದೆ. ಇವುಗಳಿಗೆ ‘ಟೆಂಟ್ಯಾಕಲ್ಸ್’ ಎಂದು ಕರೆಯುತ್ತಾರೆ. ಇವುಗಳ ತುದಿಯಲ್ಲಿ ಕೊಕ್ಕಿನಂತಹ ಬಾಯಿಯಿದೆ.

ಒಟ್ಟು ೧೫೦ ಪ್ರಭೇದಗಳ ಆಕ್ಟೋಪಸ್‌ಗಳಿವೆ. ಸಾಮಾನ್ಯವಾಗಿ ಆಕ್ಟೋಪಸ್‌ಗಳು ಎಲ್ಲಾ ಸಮುದ್ರಗಳಲ್ಲಿರುತ್ತವಾದರೂ ಉಷ್ಣವಲಯದ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತವೆ. ಕೆಲವು ಜಾತಿಯ ಆಕ್ಟೋಪಸ್ಗಳು ೮೦೦ ಮೀಟರ್‌ನಿಂದ ೫ ಕಿಲೋಮೀಟರ್‌ವರೆಗಿನ ಆಳವಾದ ನೀರಿನಲ್ಲಿ ವಾಸಿಸಿದರೆ ಕೆಲವು ನೀರಿನ ಮೇಲ್ಮೆ ಬಳಿಯೇ ವಾಸಿಸುತ್ತವೆ. ಅವುಗಳ ಗಾತ್ರ ಸಾಮಾನ್ಯವಾಗಿ ೧೦ ಸೆಂ.ಮೀ.ನಷ್ಟಿರುತ್ತದೆ. ಕೆಲವು ೧೦ ಸೆಂ.ಮೀ. ನಷ್ಟಿದ್ದರೆ ಇನ್ನೂ ಕೆಲವುಗಳ ಗಾತ್ರ ೧ ರಿಂದ ೮ ಫೂಟುಗಳಷ್ಟಿರುತ್ತದೆ. ಆಕ್ಟೋಪಸ್ಗಳ ಮೂಲ ಬಣ್ಣ ಕೆಂಪು ಮಿಶ್ರಿತ ಬೂದುಬಣ್ಣ ಅಥವಾ ಚುಕ್ಕೆಗಳಿಂದ ಕೂಡಿದ ಬೂದುವರ್‍ಣ.

ಆಕ್ಟೋಪಸ್ ದೇಹ ವಿಚಿತ್ರವಾದುದು. ಉಬ್ಬಿದ ಚೀಲದಂತೆ ದೇಹ, ಸುತ್ತಲೂ ಟೆಂಟ್ಯಾಕಲ್ಸ್‌ಗಳು. ಇವು ಶಕ್ತಿಯುತವಾಗಿ ‘ಸಕರ್‍ಸ್’ (ಹೀರು ಬಟ್ಟಲು)ಗಳನ್ನು ಹೊಂದಿವೆ. ಆಹಾರವನ್ನು ಬಂಧಿಸಿ ಬಾಯಿಯೊಳಕ್ಕೆ ತುರುಕಲು ಇವು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ೯ ಕೆ.ಜಿ. ತೂಕವಿರುವ ಆಕ್ಟೋಪಸ್ ನೂರಕ್ಕಿಂತಲೂ ಹೆಚ್ಚು ಸಕರ್‍ಸ್‌ಗಳನ್ನು ಹೊಂದಿರುತ್ತವೆ. ಅಲ್ಲದೆ ೨೫ ಕೆ.ಜಿ.ಯಷ್ಟು ಭಾರ ಎಳೆಯುವ ಸಾಮರ್‍ಥ್ಯ ಹೊಂದಿರುತ್ತವೆ.

ದಿನದ ಸಮಯದಲ್ಲಿ ತಳದ ಸಂದುಗಳಲ್ಲಿ ಅಡಗಿ ಕೂತು ರಾತ್ರಿಯಲ್ಲಿ ಆಕ್ಟೋಪಸ್‌ಗಳು ಬೇಟೆಗಾಗಿ ಹೊರಬರುತ್ತವೆ.

ಆಹಾರ

ಸಂಧಿಪದಿ ಮತ್ತು ಜಿಂಗ (ಕ್ರ್‍ಯಾಬ್) ಅದರ ಪ್ರಿಯವಾದ ಆಹಾರ. ಸಾಮಾನ್ಯ ಗಾತ್ರದ ಆಕ್ಟೋಪಸ್‌ವೊಂದು ದಿನಕ್ಕೆ ಒಂದೂವರೆ ಡಜನ್‌ಗಳಷ್ಟು ಆಹಾರ ಕಬಳಿಸುತ್ತದೆ. ಬಲಿ ಕಾಣಿಸಿತೆಂದರೆ, ಹಿಡಿದು ಬಾಯಿಗೆ ತರುವಲ್ಲಿ ಟೆಂಟ್ಯಾಕಲ್ಸ್‌ಗಳು ಸಹಾಯ ಮಾಡುತ್ತವೆ. ಗಟ್ಟಿ ಚಿಪ್ಪಿನಂತಹ ಪ್ರಾಣಿಗಳು (ಉದಾ: ಬಸವನಹುಳು) ಸಿಕ್ಕರೆ ಅದು ತನ್ನ ನಾಲಿಗೆ (ರ್‍ಯಾಡುಲಾ) ಯಿಂದ ಚಿಪ್ಪಿಗೆ ರಂಧ್ರ ಕೊರೆದು ವಿಷತೂರಿಸಿ ಭಕ್ಷಿಸುತ್ತದೆ. ಗಿಣಿಯಂತಹ ಕೊಕ್ಕು ಆಹಾರ ಸಿಕ್ಕರೆ ಪುಡಿಪುಡಿ ಮಾಡಿ ಬಯಿಯೊಳಕ್ಕೆ ಸೇರಿಸುತ್ತವೆ.

ಸಂತಾನಾಭಿವೃದ್ಧಿ

ಸಂತಾನಾಭಿವೃದ್ಧಿಯ ಕಾಲದಲ್ಲಿ ಹೆಣ್ಣು-ಗಂಡು ಆಕ್ಟೋಪಸ್ಗಳು ತಾಸುಗಟ್ಟಲೆ ಒಂದಾಗುತ್ತವೆ. ಗಂಡು ಆಕ್ಟೋಪಸ್‌ನ ತೋಳೊಂದು ತೆಳ್ಳಗೆ ಚಮಚೆಯಾಕಾರದ ತುದಿ ಹೊಂದಿದ್ದು, ವೀರ್‍ಯಾಣುಗಳನ್ನು ಹೆಣ್ಣಿಗೆ ವರ್‍ಗಾಯಿಸಲು ಸಹಾಯ ಮಾಡುತ್ತದೆ. ತದನಂತರ ಹೆಣ್ಣು ಸಂದಿನಲ್ಲಿ ಸೇರಿಕೊಂಡು ಸುಮಾರು ೧೦,೦೦೦ ಕ್ಕಿಂತಲೂ ಹೆಚ್ಚಿನ ಅಕ್ಕಿಕಾಳಿನ ಗಾತ್ರದಷ್ಟು ತತ್ತಿಗಳನ್ನಿಡುತ್ತದೆ. ತತ್ತಿಗಳು ಒಡೆದು ಮರಿಗಳಾಗುವವರೆಗೆ ಅದು ಏನನ್ನೂ ತಿನ್ನದೇ ತತ್ತಿಗಳ ಆರೈಕೆಯಲ್ಲಿ ನಿರತವಾಗುತ್ತದೆ. ಅವುಗಳ ಮೇಲೆ ನೀರನ್ನು ಚಿಮುಕಿಸುತ್ತ ಸ್ವಚ್ಫವಾಗಿಡುವುದಲ್ಲದೇ, ವೈರಿಗಳಿಂದ ಅವುಗಳನ್ನು ರಕ್ಷಿಸುತ್ತದೆ. ಹೆಣ್ಣು ಆಕ್ಟೋಪಸ್‌ಗೆ ಅದೇ ಮೊದಲ ಮತ್ತು ಕೊನೆಯ ಪ್ರಸವ. ನಂತರ ಅದು ಸಾಯುತ್ತದೆ! ಆಕ್ಟೋಪಸ್‌ನ ಮರಿಗಳು ಅತ್ಯಂತ ಚಿಕ್ಕವಾದರೂ ಆಕ್ಟೋಪಸ್ನ ಎಲ್ಲ ಗುಣಲಕ್ಷಣಗಳನ್ನು ಹೊಂದಿದವಾಗಿರುತ್ತವೆ.

ಆಕ್ಟೋಪಸ್ ಅಪಾಯಕಾರಿಯೇ?

‘ಆಕ್ಟೋಪಸ್ ಹಿಡಿತ’ ಎಂಬ ನುಡಿಯಂತೆ, ಆಕ್ಟೋಪಸ್‌ಗಳ ಕೈಗೆ ಸಿಕ್ಕರೆ ಮುಕ್ತಿಯೇ ಇಲ್ಲ ಎಂಬ ಭಾವನೆ ನಮ್ಮಲ್ಲಿ ಹುಟ್ಟಿಕೊಂಡಿದೆ. ಅವು ಮಾನವನಿಗೆ ಯಾವ ಅಪಾಯವನ್ನೂ ಉಂಟುಮಾಡುವುದಿಲ್ಲ. ಮನುಷ್ಯನನ್ನು ಬಂಧಿಸಿ ರಕ್ತ ಹೀರುವಂತೆ ಭಯಾನಕವಾಗಿ ಚಿತ್ರಿಸುವುದು ಉತ್ಪ್ರೇಕ್ಷೆ. ಅವು ಅಂತಹ ಭಯಾನಕ ಪ್ರಾಣಿಗಳೇನಲ್ಲ. ಮನುಷ್ಯ, ಹಾವು ಮತ್ತು ಮೀನುಗಳಿಗೆ ಅವು ಆಗಾಗ ಬಲಿಯಾಗುವುದೇ ಇದಕ್ಕೆ ಸಾಕ್ಷಿ. ಆಕ್ಟೋಪಸ್ಗಳ ವಶದಲ್ಲಿ ಮನುಷ್ಯ ಸಿಕ್ಕಿಬಿದ್ದ ವರದಿಗಳೂ ಇದ್ದಿರಬಹುದು. ಬೃಹತ್ ಗಾತ್ರದ ಆಕ್ಟೋಪಸ್‌ಗಳಿಂದ ಹಾಗಾಗಿರಬಹುದು. ಅವು ಅಪಾಯಕಾರಿ ಎಂಬ ಮಾತೂ ಅಲ್ಲಗಳೆಯುಂತಿಲ್ಲ!
*****

(ಆಧಾರ)

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...