Home / ಕವನ / ಕವಿತೆ / ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ
ಬೇಗದಿರಾಗರಚನೆಯಿಂದ ಕೊಂಡಾಡಿ
ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ ||

ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು
ಸಂಸಾರಶರಧಿಯ ನೀ ದಾಂಟು || ಆ, ಪ. ||

ನೋಡು ಕಲಿಯುಗದ್ಯೆದು ಸಾವಿರ ವಷ೯ಕ್ಕೆ
ಕೇಡೊದಗುವದು ವಿಕಾರಿಗೆ
ನಾಡೆಲ್ಲ ಕೈಗೂಡಿ ನರರಿಗೆ ಪ್ರಳಯವು
ಕಾಡು ಸೇರಿದರೂ ಬಿಡದಣ್ಣಾ || ೧ ||

ಉತ್ತರದಿಕ್ಕಿನೊಳ್ಹುಟ್ಟುವದದು ರೋಗ
ಅಷ್ಟದಿಕ್ಕನೆ ಸುತ್ತಿಕೊಳ್ಳುವದು
ಅತ್ಯಧಿಕ ಇಂಗ್ಲೀಷ ಸರಕಾರ ದೊರೆಗಳಾ
ಗೊತ್ತುಮಾಡುವರು ಪ್ಲೇಗುಯೆಂತೆಂದು ||೨||

ರೋಗದ ಸೂಚನೆ ಮೊದಲು ಇಲಿಗೆ ತಗಲಿ
ಮ್ಯಾಗಿಂದ ಮನೆಯೊಳು ಬಿದ್ದಿಳಿಯೆ
ಆಗ ಜನರಿಗಂಟಿ ಗಾಭರಿಗೊಳ್ಳುತ
ಹ್ಯಾಗೆಮಾಡಲಿ ದೇವಾಯೆನ್ನವರು ||೩||

ಜಗಪತಿ ಪ್ರಜಕೆಲ್ಲಕಪ್ಪಣೆ ಇತ್ತನು
ತಗಲಬಾರದು ರೋಗ ಒಬ್ಬರಿಗೆ
ಅಗಲಿಸಿ ಊರಬಿಡಿಸಿ ಹೊರಗ್ಹಾಕಿಸಿ
ಮಿಗಿಲಾದ ಕ್ವಾರಂಟು ಕಟ್ಟಿಸುವಾ ||೪||

ಹೊಲಮನಿ ದ್ರವ್ಯದ ಬಲು ಚಿಂತಿಯಿ೦ ಬಿಟ್ಟು
ಹಲಬುತಡವಿಯೊಳು ಗುಡಿಸಲದಿ
ಇಳೆ ಜನರಿರುತಿತೆ ಕಳತಸ್ಕರರು
ಕಲ್ಲು ಕವಣಿಯೊಳಿಟ್ಟಿಟ್ಟು ಹೊಡೆಯುವರು ||೫||

ಒಬ್ಬರೊಬ್ಬರ ಬದಕಂ ಒಬ್ಬರೊಬ್ಬರಿಗಾಗಿ
ಒಬ್ಬರೊಬ್ಬರ ಮುಟ್ಟದಾಗುವದು
ಸರ್ವದೇಶದೊಳು ಪರಿ ಪರಿ ಕಷ್ಟ-.
ಗಳ್ಹಬ್ಬುತಿಹವು ದಿಟ ತಿಳಿ ಮನವೆ ||೬||

ಯಾಕೆ ಈ ಪರಿ ಕಷ್ಟ ನರರಿಗಾವುವದನೆ
ಕಾಕುಜನದಪಾಪ ಹೆಚ್ಚುತಿರೆ
ಲೋಕನಾಥನು ಭೂಮಿಗ್ಯಾಕೆ ಭಾರವು ಎಂದು
ತಾ ಕಳುಹಿದ ಮೃತ್ಯುದೇವತೆಯ ||೭||

ಗುರುಹಿರಿಯರನೆಲ್ಲ ಜರಿಯುತ ಜ್ಞಾನದಿ
ಪರದ್ರವ್ಯ ಪರಸ್ತ್ರೀಯ ಕದ್ದೊಯುತಾ
ಸರಿ ನಮಗಾರೆಂದು ದುರುಳರು ಗವ೯ದಿ
ಮೆರದಾಡುತಿರುವರು ಲೋಕದಲಿ ||೮||

ಹೇಳಲು ಬಹಳುಂಟು ಸೂಕ್ಷ್ಮದಿ ತಿಳಿಸುವೆ
ತಾಳೆಳು ಭೂಕಾಂತೆ ಬಹುಭಾರವಾ
ತಾಳಿದ ಶೇಷನು ಸೀರಖಾನಿ ನಿಂತನು
ಹಾಳುದೇಗುಲ ಹೊಕ್ಕ ಶಿವ ತಾನು ||೯||

ಈ ತೆರ ದುಜ೯ನ ಪ್ರಾಂತದಿಂದಲಿ ಬಹು-
ಪಾತಕ ಹೆಚ್ಚಿತು ಕಲಿಯೊಳಗೆ
ತಾತಗುರುಗೋವಿಂದನನು ಮೊರೆಹೊಕ್ಕರೆ
ಆತನೆ ರಕ್ಷಿಪ ಕರುಣದಲಿ || ೧೦ ||
*****

 

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...