Home / ಕವನ / ಕವಿತೆ / ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ
ಬೇಗದಿರಾಗರಚನೆಯಿಂದ ಕೊಂಡಾಡಿ
ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ ||

ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು
ಸಂಸಾರಶರಧಿಯ ನೀ ದಾಂಟು || ಆ, ಪ. ||

ನೋಡು ಕಲಿಯುಗದ್ಯೆದು ಸಾವಿರ ವಷ೯ಕ್ಕೆ
ಕೇಡೊದಗುವದು ವಿಕಾರಿಗೆ
ನಾಡೆಲ್ಲ ಕೈಗೂಡಿ ನರರಿಗೆ ಪ್ರಳಯವು
ಕಾಡು ಸೇರಿದರೂ ಬಿಡದಣ್ಣಾ || ೧ ||

ಉತ್ತರದಿಕ್ಕಿನೊಳ್ಹುಟ್ಟುವದದು ರೋಗ
ಅಷ್ಟದಿಕ್ಕನೆ ಸುತ್ತಿಕೊಳ್ಳುವದು
ಅತ್ಯಧಿಕ ಇಂಗ್ಲೀಷ ಸರಕಾರ ದೊರೆಗಳಾ
ಗೊತ್ತುಮಾಡುವರು ಪ್ಲೇಗುಯೆಂತೆಂದು ||೨||

ರೋಗದ ಸೂಚನೆ ಮೊದಲು ಇಲಿಗೆ ತಗಲಿ
ಮ್ಯಾಗಿಂದ ಮನೆಯೊಳು ಬಿದ್ದಿಳಿಯೆ
ಆಗ ಜನರಿಗಂಟಿ ಗಾಭರಿಗೊಳ್ಳುತ
ಹ್ಯಾಗೆಮಾಡಲಿ ದೇವಾಯೆನ್ನವರು ||೩||

ಜಗಪತಿ ಪ್ರಜಕೆಲ್ಲಕಪ್ಪಣೆ ಇತ್ತನು
ತಗಲಬಾರದು ರೋಗ ಒಬ್ಬರಿಗೆ
ಅಗಲಿಸಿ ಊರಬಿಡಿಸಿ ಹೊರಗ್ಹಾಕಿಸಿ
ಮಿಗಿಲಾದ ಕ್ವಾರಂಟು ಕಟ್ಟಿಸುವಾ ||೪||

ಹೊಲಮನಿ ದ್ರವ್ಯದ ಬಲು ಚಿಂತಿಯಿ೦ ಬಿಟ್ಟು
ಹಲಬುತಡವಿಯೊಳು ಗುಡಿಸಲದಿ
ಇಳೆ ಜನರಿರುತಿತೆ ಕಳತಸ್ಕರರು
ಕಲ್ಲು ಕವಣಿಯೊಳಿಟ್ಟಿಟ್ಟು ಹೊಡೆಯುವರು ||೫||

ಒಬ್ಬರೊಬ್ಬರ ಬದಕಂ ಒಬ್ಬರೊಬ್ಬರಿಗಾಗಿ
ಒಬ್ಬರೊಬ್ಬರ ಮುಟ್ಟದಾಗುವದು
ಸರ್ವದೇಶದೊಳು ಪರಿ ಪರಿ ಕಷ್ಟ-.
ಗಳ್ಹಬ್ಬುತಿಹವು ದಿಟ ತಿಳಿ ಮನವೆ ||೬||

ಯಾಕೆ ಈ ಪರಿ ಕಷ್ಟ ನರರಿಗಾವುವದನೆ
ಕಾಕುಜನದಪಾಪ ಹೆಚ್ಚುತಿರೆ
ಲೋಕನಾಥನು ಭೂಮಿಗ್ಯಾಕೆ ಭಾರವು ಎಂದು
ತಾ ಕಳುಹಿದ ಮೃತ್ಯುದೇವತೆಯ ||೭||

ಗುರುಹಿರಿಯರನೆಲ್ಲ ಜರಿಯುತ ಜ್ಞಾನದಿ
ಪರದ್ರವ್ಯ ಪರಸ್ತ್ರೀಯ ಕದ್ದೊಯುತಾ
ಸರಿ ನಮಗಾರೆಂದು ದುರುಳರು ಗವ೯ದಿ
ಮೆರದಾಡುತಿರುವರು ಲೋಕದಲಿ ||೮||

ಹೇಳಲು ಬಹಳುಂಟು ಸೂಕ್ಷ್ಮದಿ ತಿಳಿಸುವೆ
ತಾಳೆಳು ಭೂಕಾಂತೆ ಬಹುಭಾರವಾ
ತಾಳಿದ ಶೇಷನು ಸೀರಖಾನಿ ನಿಂತನು
ಹಾಳುದೇಗುಲ ಹೊಕ್ಕ ಶಿವ ತಾನು ||೯||

ಈ ತೆರ ದುಜ೯ನ ಪ್ರಾಂತದಿಂದಲಿ ಬಹು-
ಪಾತಕ ಹೆಚ್ಚಿತು ಕಲಿಯೊಳಗೆ
ತಾತಗುರುಗೋವಿಂದನನು ಮೊರೆಹೊಕ್ಕರೆ
ಆತನೆ ರಕ್ಷಿಪ ಕರುಣದಲಿ || ೧೦ ||
*****

 

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...