Home / ಕವನ / ಕವಿತೆ / ಬಂದಿತು ಬರಬಹುದು

ಬಂದಿತು ಬರಬಹುದು

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ
ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ ||

ಬಂದು ಕಲ್ಕಿ‌ಅವತಾರ ಸೀಮಿಗೆ
ಮು೦ದುವರಿದು ಯಮರಾಜನ ಕೊಲೆಗಳ
ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.||

ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ ಮಳಿ-ಬೆಳಿ
ಉತ್ತಮವೆನಿಸಿ ಉತ್ತರಕೆ ಕಡೆಮೊದಲು ತೂಗುತ
ಶ್ಯಾರ ವಿಜಾಪುರ ಉಕ್ಕಲಿ ದನಗಳ ನೋಡುತ
ಮನದೊಳು ಕಷ್ಟಗೊಳ್ಳುತ ಕಳವಳಗೊಳ್ಳುತ
ಘೋರವಾಗಿ ಮಹಾಮುಂಬೈಯೊಳು
ಏರಿಗಟ್ಟ ಯ೦ತ್ರದ ಗಿರಣಿಗಳು
ಮಾರಿಕಾಗಿ ಮೈ ಬಣ್ಣದ ಗುಳ್ಳೆಗಳಗೆ
ಕಳ್ಳಜನರು ನಷ್ಟಾದರು ಸಖಿಯೆ ||೧||

ಆರು ಮೂರು ಒಂಭತ್ತು ಲಕ್ಷ ಜನ
ತೀರುತ ಸಾರಿದ ಲಕ್ಷ ಮೂರರೊಳು
ಮೀರಿ ಉಳಿದರು ಸಾವಕಾರ ತಾ
ಘೋರವಾಗಿ ಬೆಳಗಾವಿಗೆ ಜಾಹೀರ ಮುಟ್ಟುತಾ
ಜನನ ಮರಣ ಸಂಖ್ಯೆ
ಜನರಿಗೆ ವಿಪರೀತ ತೋರುತಾ
ಸುಟ್ಟುಹೋತು ರಂಗಮಾಲು ಕುಂಬಾರದೊರಿ
ಎಂಟು ಲಕ್ಷದ್ದಿತ್ತಿ ಮಹಾಲಕರಿ
ಕೋಟಿ ಜಲ್ಮವ ದಾಟಿ
ಉಳವಿ ಶಿವಶರಣರಾಗಿ ಮರ್ತ್ಯಕ್ಕೆ ಶಿಕ್ಷಿಸುತಾ ||೨||

ಪ್ಯಾಟಿ ಪಟ್ಟಣಾ ಹುಬ್ಬಳ್ಳಿ ಜನರೊಡ ತಾ
ದನಕರ ಗೋಳಿಡುತಾ
ದುಡ್ಡಿಗೆ ಮೂರು ಮಾತಾಡುತಾ
ನೀಟವಾಗಿ ಮಲ್ಲಾಡ ಬೆಳವಲಕೆ ಓಡುತಾ
ಮೈಸೂರಸೀಮಿ ಸೇರಿ ಷಣ್ಮುಖ ಆವತಾರ ತೋರುತಾ
ಸಾಧಿಸುತ ವಿಳಂಬಿ ಸಂವತ್ಸರ ಕೂಡುತಾ
ಇಳೆಯೊಳು ಸಜ್ಜನರು ಕಳವಳಗೊಳ್ಳುತಾ ನಿಜಪಾಡುತಾ
ಸಾಧುಸಂತರು ಯಮನಾಲಯ ಮೀರಿ
ಬೋಧಿಸಿದರು ಪರಮಾತ್ಮನ ಲೀಲಾ
ಚೋದ್ಯವಾಯಿತು ಅಮರಾರಿಪುರುರಿಗೆ || ೩ ||

ವೀರ್ಯದೊಳು ವಿಕಾರಿ ಸಂವತ್ಸರ ಗಾವುದಕೆ ನಿಂದಿಸಿ
ಗಾರುಗೊಂಡು ಮನಿ ಮನಿ ಗಾವುದಕೆ ಹೊಂದಿಸಿ
ಸಾರಿ ಹೇಳತೇನಿ ಮೂರು ಸಂವತ್ಸರ ಕೂಡಿಸಿ
ಇದರೊಳು ತಪ್ಪು ಆದರೆ ಗುರುಗೋವಿಂದನ ಸಾಕ್ಷಿ
ಧರೆಯೊಳು ಶಿಶುನಾಳ ಗುರುಪುತ್ರ ಕವಿಗೆ
ಸರಿಯಾಯಿತು ಕಾಲಜ್ಞಾನ ಸೂಚನದ ಭವಿ
ಮರೆಯಲಾರೆ ಸಂಸಾರದ ಸವಿ
ಗುರುಮೂರ್ತಿ ಶಶಿಯಂಬುಜಮುಖಿಯೆ || ೪ ||
*****

 

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...